ಫೇಸ್ ಆಫ್ ಲಿಯೋನಾರ್ಡೋ ಪೇಂಟಿಂಗ್ ಪ್ರದರ್ಶನದ ವೇಳೆ ಬಾಲಕ ಕಾಲು ಎಡವಿ ಕಲಾಕೃತಿ ಮೇಲೆ ಬೀಳುತ್ತಿರುವ ಚಿತ್ರ. 
ವಿದೇಶ

ರು.1 ಕೋಟಿ ಮೌಲ್ಯದ ತಪ್ಪಿಗೆ ಕ್ಷಮೆ

ಟೀ ಅಂಗಡಿಯಲ್ಲಿ ಕೈತಪ್ಪಿ ಗಾಜಿನ ಲೋಟ ಬೀಳಿಸಿ ಒಡೆದರೆ ಹತ್ತು ರುಪಾಯಿ ವಸೂಲಿ ಮಾಡ್ತಾರೆ. ದಾರೀಲಿ ಹೋಗ್ತಾ ಗಾಡಿಗಳೆರಡು ಸಣ್ಣದಾಗಿ ತಾಕಿಕೊಂಡರೂ ಜಗಳ ಆಡಿ ಅಷ್ಟೋ ಇಷ್ಟೋ ಪೀಕುವಂತೆ ಮಾಡ್ತಾರೆ. ಅಂಥಾದ್ರಲ್ಲಿ ಒಂದು ಕೋಟಿ ಮೌಲ್ಯದ ಅಪೂರ್ವ ಕಲಾಕೃತಿಯೊಂದನ್ನು...

ಥೈವಾನ್: ಟೀ ಅಂಗಡಿಯಲ್ಲಿ ಕೈತಪ್ಪಿ ಗಾಜಿನ ಲೋಟ ಬೀಳಿಸಿ ಒಡೆದರೆ ಹತ್ತು ರುಪಾಯಿ ವಸೂಲಿ ಮಾಡ್ತಾರೆ. ದಾರೀಲಿ ಹೋಗ್ತಾ ಗಾಡಿಗಳೆರಡು ಸಣ್ಣದಾಗಿ ತಾಕಿಕೊಂಡರೂ ಜಗಳ ಆಡಿ ಅಷ್ಟೋ ಇಷ್ಟೋ ಪೀಕುವಂತೆ ಮಾಡ್ತಾರೆ. ಅಂಥಾದ್ರಲ್ಲಿ ಒಂದು ಕೋಟಿ ಮೌಲ್ಯದ ಅಪೂರ್ವ ಕಲಾಕೃತಿಯೊಂದನ್ನು ಹಾಳುಮಾಡಿದರೆ ಸುಮ್ಮನಿರೋದುಂಟಾ? ಥೈವಾನ್ ನಲ್ಲಿ ಇಂಥದೊಂದು ತಪ್ಪಿಗೆ ತಪ್ಪಿತಸ್ಥನಿಂದ ಒಂದು ನಯಾಪೈಸೆಯಾನ್ನೂ ವಸೂಲು ಮಾಡದೆ ಬಿಟ್ಟುಕಳಿಸಲಾಗಿದೆ!

ಥೈವಾನ್ ನಲ್ಲಿ ಒಂದು ಅಪರೂಪದ ಕಲಾಪ್ರದರ್ಶನವಿತ್ತು. ಫೇಸ್ ಆಫ್ ಲಿಯೋನಾರ್ಡೋ ಎಂಬ ಪೇಂಟಿಂಗ್ ಪ್ರದರ್ಶನವದು. ಇದನ್ನು ನೋಡಲು ಭಾರಿ ಜಂಗುಳಿಯೇ ನಡೆದಿತ್ತು. 12 ವರ್ಷದ ಬಾಲಕನೊಬ್ಬ ಅಲ್ಲಿಗೆ ತನ್ನ ಬಳಗದೊಂದಿಗೆ ಬಂದಿದ್ದ. ಕೈಲೊಂದು ಕೂಲ್ ಡ್ರಿಂಕ್ಸ್ ಟಿನ್ ಹಿಡ್ಕೊಂಡು ಯಾವುದೋ ಯೋಚನೆಯಲ್ಲಿ ಕೊಂಚ ಅಜಾಗರೂಕತೆಯಿಂದಲೇ ನಡೆದು ಬಂದ ಆತನಿಕೆ ಮರುಕ್ಷಣದಲ್ಲಿ ತನ್ನಿಂದ ಭಾರಿ ಅನಾಹುತವಾಗಬಹುದೆಂದು ಕನಸು ಮನಸಿನಲ್ಲೂ ಅನಿಸಿರಲಿಕ್ಕಿಲ್ಲ. ನಡೆಯುವವ ಎಡವುದು ಸಹಜ ಎಂಬಂತೆ ಕಾಲು ಹೊರಳಿ ವಾಲಿದ್ದಾನೆ.

ಆಯತಪ್ಪಿದ ಆತ ಆಧಾರಕ್ಕೆ ಅನಿವಾರ್ಯವಾಗಿ ಪಕ್ಕದಲ್ಲಿದ್ದ ಕಲಾಕೃತಿಯ ಮೇಲೇ ಕೈಯಿಟ್ಟಿದ್ದಾನೆ. ಕೈಲಿದ್ದ ಟಿನ್ ಒತ್ತಿ ಆ ಕಲಾಕೃತಿ ಜಖಂ ಆಗಿದೆ. ನಲುಗಿ ಕಂಗಾಲಾದ ಹುಡುಗ ಒಂದೆರಡು ಕ್ಷಣ ಅತ್ತಿತ್ತ ನೋಡುತ್ತಿದ್ದ ಹಾಗೆಯೇ ಹಿರಿಯರೊಬ್ಬರು ಬಂದು ಆತನನ್ನು ಗೆದರಿದ್ದಾರೆ. ನಂತರ ಆತ ಅಲ್ಲಿಂದ ಹೊರಟುಹೋಗಿದ್ದಾನೆ. ಇದಿಷ್ಟು ಸಿಸಿ ಕ್ಯಾಮೆರದಲ್ಲಿ ದಾಖಲಾಗಿದೆ.

ಸಿಸಿ ಟಿವಿ ಫುಟೇಜ್ ಗಮನಿಸಿ ಇದನ್ನು ಆಕಸ್ಮಿಕ ಎಂಬ ಪರಿಗಣಿಸಿದ ಆಯೋಜಕರು, ಮೊದಲೇ ಗಾಬರಿಯಾಗಿದ್ದ ಆ ಹುಡುಗನನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಲು ಒಪ್ಪಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT