ವಿದೇಶ

ಭಯೋತ್ಪಾದನೆ ನಿರ್ಮೂಲನೆಗೆ ಭಾರತದೊಂದಿಗೆ ಕೈ ಜೋಡಿಸಿ: ಈಜಿಪ್ಟ್ ಗೆ ಸುಷ್ಮಾ ಸ್ವರಾಜ್ ಕರೆ

Srinivas Rao BV
ನವದೆಹಲಿ: ಭಯೋತ್ಪಾದನೆ ನಿರ್ಮೂಲನೆಗೆ ಭಾರತದೊಂದಿಗೆ ಕೈ ಜೋಡಿಸಬೇಕೆಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈಜಿಪ್ಟ್ ಗೆ ಮನವಿ ಮಾಡಿದ್ದಾರೆ. 
ನಾಗರಿಕ ಪ್ರಪಂಚಕ್ಕೆ ಸವಾಲಾಗಿರುವ ಉಗ್ರರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾದ ಅನಿವಾರ್ಯತೆ ಇದೆ, ಇದಕ್ಕಾಗಿ ಭಾರತದೊಂದಿಗೆ ಈಜಿಪ್ಟ್ ಕೈಜೋಡಿಸಬೇಕಿದೆ ಎಂದು ಕೈರೋ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಷ್ಮಾ ಸ್ವರಾಜ್ ಕರೆ ನೀಡಿದ್ದಾರೆ. 
ಭಯೋತ್ಪಾದನೆಯ ಎಲ್ಲಾ ಚಟುವಟಿಕೆಗಳನ್ನು ಭಾರತ ಖಂಡಿಸುತ್ತದೆ. ಅಷ್ಟೇ ಅಲ್ಲದೇ ಉಗ್ರವಾದವನ್ನು ಹತ್ತಿಕ್ಕಲು ಈಜಿಪ್ಟ್ ನೊಂದಿಗೆ ಸಹಕರಿಸಲಿದೆ ಎಂದು ಭರವಸೆ ನೀಡಿದ್ದಾರೆ. ಈಜಿಪ್ಟ್ ನಲ್ಲಿ ಬೆಳೆಯುತ್ತಿರುವ ಉಗ್ರವಾದದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಈಜಿಪ್ಟ್ ನ ಹೋರಾಟಕ್ಕೆ ಸಹಕಾರ ನೀಡಲಿದೆ ಎಂದು ಘೋಷಿಸಿದ್ದಾರೆ. ಈಜಿಪ್ಟ್ ಪ್ರವಾಸದ ನಂತರ ಸುಷ್ಮಾ ಸ್ವರಾಜ್ ಜರ್ಮನಿಗೆ ಭೇಟಿ ನೀಡಲಿದ್ದಾರೆ.
SCROLL FOR NEXT