ಬ್ರುಸೆಲ್ಸ್ ನಲ್ಲಿ ನಡೆದ ಯೂರೋ ವಲಯ ನಾಯಕರ ಸಭೆಯಲ್ಲಿ ಗ್ರೀಸ್ ಪ್ರಧಾನಿ ಅಲೆಕ್ಸಿಸ್ ಸಿಪ್ರಸ್ ಜರ್ಮನಿ ಚಾನ್ಸೆಲರ್ ಅಂಜೆಲಾ ಮರ್ಕೆಲ್, ಫ್ರಾನ್ಸ್ ಪ್ರಧಾನಿ ಫ್ರಾಂಕೋಯಿಸ್ ಹೊಲ್ಲೆಂಡ 
ವಿದೇಶ

ಗ್ರೀಸ್ ಸರ್ಕಾರಕ್ಕೆ ಕೊನೆಗೂ 96 ಶತಕೋಟಿ ಡಾಲರ್ ಯೂರೋಪ್ ಸಾಲ

ಹಲವು ಸುತ್ತಿನ ಮಾತುಕತೆ ನಂತರ ಗ್ರೀಸ್ ರಾಷ್ಟ್ರ ಕೊನೆಗೂ ತೀವ್ರ ಹಣಕಾಸು ಬಿಕ್ಕಟ್ಟಿನಿಂದ ಪಾರಾಗಲು ಯುರೋ ಕರೆನ್ಸಿ ವಲಯದ ರಾಷ್ಟ್ರಗಳೊಂದಿಗೆ...

ಬ್ರುಸೆಲ್ಸ್: ಹಲವು ಸುತ್ತಿನ ಮಾತುಕತೆ ನಂತರ ಗ್ರೀಸ್ ರಾಷ್ಟ್ರ ಕೊನೆಗೂ ತೀವ್ರ ಹಣಕಾಸು ಬಿಕ್ಕಟ್ಟಿನಿಂದ ಪಾರಾಗಲು ಯುರೋ ಕರೆನ್ಸಿ ವಲಯದ ಸಾಲದಾತ ರಾಷ್ಟ್ರಗಳೊಂದಿಗೆ ಸೋಮವಾರ ಒಪ್ಪಂದ ಮಾಡಿಕೊಂಡಿದೆ.

96 ಶತಕೋಟಿ ಡಾಲರ್ ನಷ್ಟು ಮೊತ್ತದ ಸಾಲವನ್ನು ಯೂರೋ ವಲಯದ ರಾಷ್ಟ್ರಗಳಿಂದ ಸ್ವೀಕರಿಸಲು ಗ್ರೀಸ್ ಪ್ರಧಾನಿ ಅಲೆಕ್ಸಿಸ್ ಸಿಪ್ರಸ್ ಒಪ್ಪಿಕೊಂಡಿದ್ದಾರೆ.

ಐರೋಪ್ಯ ಒಕ್ಕೂಟದ ರಾಷ್ಟ್ರಗಳ ಹಣಕಾಸು ಸಚಿವರೊಂದಿಗೆ  ಗ್ರೀಸ್ ನ ಪ್ರಧಾನಿ ಮತ್ತು ಅಧ್ಯಕ್ಷರು ನಿರಂತರ 17 ತಾಸುಗಳವರೆಗೆ ಮಾತುಕತೆ ನಡೆಸಿದ್ದರು.

ಒಪ್ಪಂದವೇರ್ಪಟ್ಟದ್ದನ್ನು ಗ್ರೀಸ್ ಅಧ್ಯಕ್ಷ ಡೊನಾಲ್ಡ್ ಟಸ್ಕ್ ಟ್ವಿಟ್ಟರ್ ನಲ್ಲಿ ಅಧಿಕೃತವಾಗಿ ತಿಳಿಸಿದ್ದು, ಈ ಮೂಲಕ ಗ್ರೀಸ್ ಸರ್ಕಾರ ಮತ್ತು ಸಾಲದಾತ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯ ಕೊನೆಗೊಂಡಿದೆ.

ಗ್ರೀಸ್ ರಾಷ್ಟ್ರ, ಜೂನ್ 30ರಂದು ಎರಡನೇ ಸಲದ ಸಾಲದ ಮರುಪಾವತಿ ಅವಧಿ ಮುಗಿದ ನಂತರ ಯೂರೋವಲಯದಿಂದ ಮೂರನೇ ಬಾರಿಗೆ ಸಾಲ ಪಡೆಯಲು ಮುಂದಾಗಿತ್ತು. ಗ್ರೀಕ್ ನಲ್ಲಿ ಉಂಟಾಗಿದ್ದ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಸುಮಾರು ಎರಡು ವಾರಗಳ ಕಾಲ ಅಲ್ಲಿನ ಬ್ಯಾಂಕುಗಳ ಸಂಪೂರ್ಣ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗಿತ್ತು.

ಆರ್ಥಿಕ ಸುಧಾರಣೆ ಮತ್ತು ಹಣಕಾಸು ನೆರವಿನ ದೃಷ್ಟಿಯಲ್ಲಿ ಯೂರೋ ಕರೆನ್ಸಿ ವಲಯದ ಸಾಲದಾತ ರಾಷ್ಟ್ರಗಳು ನೀಡಲು ಮುಂದಾಗಿವೆ. ಇದರೊಂದಿಗೆ ಗ್ರೀಸ್ ಕೆಲವು ಕಠಿಣ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಪಿಂಚಣಿ ಕಡಿತ, ತೆರಿಗೆ ಹೆಚ್ಚಳ, ಕಾರ್ಮಿಕ ಸುಧಾರಣೆ ಮತ್ತು ಖಾಸಗೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಗ್ರೀಸ್ ಸರ್ಕಾರಕ್ಕೆ ಯೂರೋ ವಲಯ ರಾಷ್ಟ್ರಗಳು ಷರತ್ತು ಹಾಕಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

SCROLL FOR NEXT