ಪಾಕ್ ಪ್ರಧಾನಿ ನವಾಜ್ ಷರೀಫ್ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ 
ವಿದೇಶ

ಗುರುದಾಸ್‍ಪುರ ದಾಳಿ ನಡೆದಿದ್ದು ನಿಮ್ಮ ನೆಲದಿಂದಲ್ಲವೇ?: ಪಾಕ್‍ಗೆ ಒಬಾಮ

ಗುರುದಾಸ್‍ಪುರದಲ್ಲಿ 3 ತಿಂಗಳ ಹಿಂದೆ ನಡೆದ ದಾಳಿಗೆ ಸಂಬಂಧಿಸಿ ಪಾಕಿಸ್ತಾನವನ್ನು ಅಮೆರಿಕ ತರಾಟೆಗೆ ತೆಗೆದುಕೊಂಡ ವಿಚಾರ ಈಗ ಬಹಿರಂಗವಾಗಿದೆ. ಅಷ್ಟೇ ಅಲ್ಲ, ಈದಾಳಿಗೂ, ನಮಗೂ ಸಂಬಂಧವೇ ಇಲ್ಲ ಎಂದಿದ್ದ ಪಾಕ್‍ಗೆ ಅಮೆರಿಕ ಸೂಕ್ತ ಸಾಕ್ಷ್ಯಾಧಾರಗಳನ್ನಿಟ್ಟುಕೊಂಡೇ ಜಾಡಿಸಿದೆ...

ವಾಷಿಂಗ್ಟನ್: ಗುರುದಾಸ್‍ಪುರದಲ್ಲಿ 3 ತಿಂಗಳ ಹಿಂದೆ ನಡೆದ ದಾಳಿಗೆ ಸಂಬಂಧಿಸಿ ಪಾಕಿಸ್ತಾನವನ್ನು ಅಮೆರಿಕ ತರಾಟೆಗೆ ತೆಗೆದುಕೊಂಡ ವಿಚಾರ ಈಗ ಬಹಿರಂಗವಾಗಿದೆ. ಅಷ್ಟೇ ಅಲ್ಲ, ಈ ದಾಳಿಗೂ, ನಮಗೂ ಸಂಬಂಧವೇ ಇಲ್ಲ ಎಂದಿದ್ದ ಪಾಕ್‍ಗೆ ಅಮೆರಿಕ ಸೂಕ್ತ ಸಾಕ್ಷ್ಯಾಧಾರಗಳನ್ನಿಟ್ಟುಕೊಂಡೇ ಜಾಡಿಸಿದೆ.

ಇತ್ತೀಚೆಗೆ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ವಾಷಿಂಗ್ಟನ್ ಭೇಟಿ ವೇಳೆ, ಈ ವಿಚಾರ ಪ್ರಸ್ತಾಪಿಸಿದ್ದ ಅಮೆರಿಕ ಅಧ್ಯಕ್ಷ ಒಬಾಮ, ಗುರುದಾಸ್‍ಪುರ ದಾಳಿಯನ್ನು ನಡೆಸಿದ್ದು ಪಾಕಿಸ್ತಾನದಲ್ಲಿದ್ದ ಸಂಘಟನೆಯಲ್ಲವೇ ಎಂದು ನೇರ ಪ್ರಶ್ನೆ ಹಾಕಿದ್ದರು. ಅಲ್ಲದೆ, ಸೆರೆಸಿಕ್ಕ ಉಗ್ರರಿಂದ ವಶಪಡಿಸಿಕೊಳ್ಳಲಾದ ಜಿಪಿಎಸ್ ಸೆಟ್‍ಗಳೇ ಇದಕ್ಕೆ ಸಾಕ್ಷಿ ಎಂದೂ ಹೇಳಿದ್ದರು ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ.

ಯುದ್ಧಕ್ಕೆ ನಾಂದಿಯಾಗುತ್ತಿತ್ತು: ಒಂದು ವೇಳೆ, ಗುರುದಾಸ್‍ಪುರ ದಾಳಿ ವೇಳೆ ಮೃತರ ಸಂಖ್ಯೆ ಹೆಚ್ಚಾಗಿರುತ್ತಿದ್ದರೆ, ಖಂಡಿತಾ ಭಾರತ ಸರ್ಕಾರವು ಪಾಕಿಸ್ತಾನದಲ್ಲಿರುವ ಉಗ್ರ ಶಿಬಿರಗಳತ್ತ ದಾಳಿಗೆ ಆದೇಶಿಸುತ್ತಿತ್ತು. ಆಗ ಭಾರತ-ಪಾಕ್ ನಡುವೆ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗುತ್ತಿತ್ತು ಎಂದೂ ಒಬಾಮ ಅವರು ಷರೀಫ್ ಗೆ ಎಚ್ಚರಿಸಿದ್ದರು. ಆರಂಭದಲ್ಲಿ, ಪಾಕಿಸ್ತಾನಿ ರಾಜತಾಂತ್ರಿಕರು, ಗುರುದಾಸ್‍ಪುರ ದಾಳಿಗೂ ಪಾಕ್‍ಗೂ ಸಂಬಂಧವಿಲ್ಲ ಎಂದೇ ವಾದಿಸಿದ್ದರು.

ಆದರೆ, ಯಾವಾಗ ಅಮೆರಿಕವು ಜಿಪಿಎಸ್ ವಿಚಾರ ಪ್ರಸ್ತಾಪಿಸಿತೋ, ಆಗ ಗೊಂದಲಕ್ಕೀಡಾದ ಅಧಿಕಾರಿಗಳು, ತಾಂತ್ರಿಕ ವಿಚಾರ ಅಧಿಕೃತವಾಗಿ ದೃಢಪಟ್ಟಿಲ್ಲ ಎನ್ನುತ್ತಾ ಜಾರಿಕೊಂಡರು ಎಂದೂ ಹೇಳಲಾಗಿದೆ. ದಾಳಿ ವೇಳೆ ವಶಪಡಿಸಿಕೊಳ್ಳಲಾದ ಜಿಪಿಎಸ್ ಮೊದಲು ಆನ್ ಆಗಿದ್ದು ಪಾಕ್ ವಾಯುನೆಲೆ ಸರ್ಗೋಧಾದಲ್ಲಿ. ಅದೂ ದಾಳಿಗೆ 6 ದಿನ ಮುಂಚೆ(ಜು.21). ಜುಲೈ 27ರಂದು ದಾಳಿ ನಡೆದಿದ್ದು, ಎಸ್ಪಿ ಸೇರಿದಂತೆ 7 ಮಂದಿ ಮೃತಪಟ್ಟಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT