ನವಾಜ್ ಷರೀಪ್ 
ವಿದೇಶ

ಅಲ್ಲಾಗೆ ಮಾತ್ರ ನಾನು ತಲೆ ಬಾಗುವೆ: ನವಾಜ್ ಷರೀಫ್

ಪಾಕ್ ಪ್ರಧಾನಮಂತ್ರಿ ನವಾಜ್ ಷರೀಪ್ ಮತ್ತು ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ನಡುವೆ ಹೆಚ್ಚಿರುವ ಶೀತಲ ಸಮರದ ಮಧ್ಯೆ ಷರೀಫ್ ಪ್ರಧಾನಿ ...

ಇಸ್ಲಾಮಾಬಾದ್: ಪಾಕ್ ಪ್ರಧಾನಮಂತ್ರಿ ನವಾಜ್ ಷರೀಪ್ ಮತ್ತು ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ನಡುವೆ ಹೆಚ್ಚಿರುವ ಶೀತಲ ಸಮರದ ಮಧ್ಯೆ  ಷರೀಫ್  ಪ್ರಧಾನಿ ಸ್ಥಾನದಿಂದ ತಮ್ಮನ್ನು ಕಿತ್ತೊಗೆಯಲು ಸಂಚು ನಡೆಸುತ್ತಿರವವರನ್ನು ತರಾಟೆಗೆ ತೆಗೆದುಕೊಂಡರು.
 
ನಾನು ಅಲ್ಲಾ ಮತ್ತು ಅವಾಮ್, ದೇವರು ಮತ್ತು ಜನರಿಗೆ ಮಾತ್ರ ತಲೆಬಾಗುತ್ತೇನೆ. ತಮ್ಮ ಮತ್ತು ಕುಟುಂಬದ ವಿರುದ್ಧ ವಿದೇಶಿ ಖಾತೆಗಳನ್ನು ಹೊಂದಿರುವ ಪನಾಮಾ ಬಹಿರಂಗ ಕುರಿತು ತನಿಖೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.

ಟಿವಿ ಸಂದರ್ಶನವೊಂದರಲ್ಲಿ 6 ಮಂದಿ ಉನ್ನತ ಸೇನಾಧಿಕಾರಿಗಳನ್ನು ರಹೀಲ್ ವಜಾ ಮಾಡಿದ ಬಳಿಕ ಭ್ರಷ್ಟಾಚಾರವನ್ನು ಬೇರುಸಮೇತ ಕೀಳುವ ತನಕ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಯಶಸ್ವಿಯಾಗುವುದಿಲ್ಲ ಎಂಬ ಹೇಳಿಕೆಯು ಪ್ರಧಾನಿಯನ್ನು ಗುರಿಯಾಗಿಸಿ ಹೇಳಲಾಗಿತ್ತೆಂದು ಭಾವಿಸಲಾಗಿತ್ತು.

ಸೇನಾ ಮುಖ್ಯಸ್ಥರು 6 ಮಂದಿ ಉನ್ನತ ಸೇನಾಧಿಕಾರಿಗಳನ್ನು ವಜಾ ಮಾಡಿದ ಮರುದಿನವೇ ನವಾಜ್ ಷರೀಪ್ ಸಾರ್ವಜನಿಕ ಹೇಳಿಕೆ ನೀಡಿ ತಮ್ಮನ್ನು ಸಮರ್ಥಿಸಿಕೊಂಡಿದ್ದರು.  ಸೇನಾಧಿಕಾರಿಗಳನ್ನು ವಜಾ ಮಾಡಿದ ದಿನ ಜನರಲ್, ಪ್ರಸಕ್ತ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭ್ರಷ್ಟಾಚಾರವನ್ನು ಬೇರುಸಹಿತ ಕೀಳದಿದ್ದರೆ ಈ ಹೋರಾಟವು ಶಾಂತಿ ಮತ್ತು ಸ್ಥಿರತೆಯನ್ನು ಮೂಡಿಸುವುದಿಲ್ಲ ಎಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT