ನವಾಜ್ ಷರೀಪ್ 
ವಿದೇಶ

ಅಲ್ಲಾಗೆ ಮಾತ್ರ ನಾನು ತಲೆ ಬಾಗುವೆ: ನವಾಜ್ ಷರೀಫ್

ಪಾಕ್ ಪ್ರಧಾನಮಂತ್ರಿ ನವಾಜ್ ಷರೀಪ್ ಮತ್ತು ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ನಡುವೆ ಹೆಚ್ಚಿರುವ ಶೀತಲ ಸಮರದ ಮಧ್ಯೆ ಷರೀಫ್ ಪ್ರಧಾನಿ ...

ಇಸ್ಲಾಮಾಬಾದ್: ಪಾಕ್ ಪ್ರಧಾನಮಂತ್ರಿ ನವಾಜ್ ಷರೀಪ್ ಮತ್ತು ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ನಡುವೆ ಹೆಚ್ಚಿರುವ ಶೀತಲ ಸಮರದ ಮಧ್ಯೆ  ಷರೀಫ್  ಪ್ರಧಾನಿ ಸ್ಥಾನದಿಂದ ತಮ್ಮನ್ನು ಕಿತ್ತೊಗೆಯಲು ಸಂಚು ನಡೆಸುತ್ತಿರವವರನ್ನು ತರಾಟೆಗೆ ತೆಗೆದುಕೊಂಡರು.
 
ನಾನು ಅಲ್ಲಾ ಮತ್ತು ಅವಾಮ್, ದೇವರು ಮತ್ತು ಜನರಿಗೆ ಮಾತ್ರ ತಲೆಬಾಗುತ್ತೇನೆ. ತಮ್ಮ ಮತ್ತು ಕುಟುಂಬದ ವಿರುದ್ಧ ವಿದೇಶಿ ಖಾತೆಗಳನ್ನು ಹೊಂದಿರುವ ಪನಾಮಾ ಬಹಿರಂಗ ಕುರಿತು ತನಿಖೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.

ಟಿವಿ ಸಂದರ್ಶನವೊಂದರಲ್ಲಿ 6 ಮಂದಿ ಉನ್ನತ ಸೇನಾಧಿಕಾರಿಗಳನ್ನು ರಹೀಲ್ ವಜಾ ಮಾಡಿದ ಬಳಿಕ ಭ್ರಷ್ಟಾಚಾರವನ್ನು ಬೇರುಸಮೇತ ಕೀಳುವ ತನಕ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಯಶಸ್ವಿಯಾಗುವುದಿಲ್ಲ ಎಂಬ ಹೇಳಿಕೆಯು ಪ್ರಧಾನಿಯನ್ನು ಗುರಿಯಾಗಿಸಿ ಹೇಳಲಾಗಿತ್ತೆಂದು ಭಾವಿಸಲಾಗಿತ್ತು.

ಸೇನಾ ಮುಖ್ಯಸ್ಥರು 6 ಮಂದಿ ಉನ್ನತ ಸೇನಾಧಿಕಾರಿಗಳನ್ನು ವಜಾ ಮಾಡಿದ ಮರುದಿನವೇ ನವಾಜ್ ಷರೀಪ್ ಸಾರ್ವಜನಿಕ ಹೇಳಿಕೆ ನೀಡಿ ತಮ್ಮನ್ನು ಸಮರ್ಥಿಸಿಕೊಂಡಿದ್ದರು.  ಸೇನಾಧಿಕಾರಿಗಳನ್ನು ವಜಾ ಮಾಡಿದ ದಿನ ಜನರಲ್, ಪ್ರಸಕ್ತ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭ್ರಷ್ಟಾಚಾರವನ್ನು ಬೇರುಸಹಿತ ಕೀಳದಿದ್ದರೆ ಈ ಹೋರಾಟವು ಶಾಂತಿ ಮತ್ತು ಸ್ಥಿರತೆಯನ್ನು ಮೂಡಿಸುವುದಿಲ್ಲ ಎಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT