ಆಧಾರ್ ನಿಂದ ಆಕರ್ಷಿತವಾದ ವಿಶ್ವ ಬ್ಯಾಂಕ್! 
ವಿದೇಶ

ಆಧಾರ್ ನಿಂದ ಆಕರ್ಷಿತವಾದ ವಿಶ್ವ ಬ್ಯಾಂಕ್!

ಅನ್ಯ ದೇಶಗಳಿಗೂ ಆಧಾರ್ ಮಾದರಿಯ ವ್ಯವಸ್ಥೆಯನ್ನು ಜಾರಿಗೊಳಿಸಲು ಸಲಹೆ ನೀಡಲು ತೀರ್ಮಾನಿಸಿದೆ ಎಂದು ಭಾರತೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಾಷಿಂಗ್ ಟನ್: ಭಾರತದಲ್ಲಿ  ಆಧಾರ್ ಕಾರ್ಡ್ ಯಶಸ್ಸಿನಿಂದ ಆಕರ್ಷಿತವಾಗಿರುವ ವಿಶ್ವ ಬ್ಯಾಂಕ್, ಅನ್ಯ ದೇಶಗಳಿಗೂ ಇದೇ ಮಾದರಿಯ ವ್ಯವಸ್ಥೆಯನ್ನು ಜಾರಿಗೊಳಿಸಲು ಸಲಹೆ ನೀಡಲು ತೀರ್ಮಾನಿಸಿದೆ ಎಂದು ಭಾರತೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಶ್ವ ಬ್ಯಾಂಕ್ ನಲ್ಲಿರುವವರು ಆಧಾರ್ ಕಾರ್ಡ್ ಯೋಜನೆ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಾದರಿಯನ್ನು ಬೇರೆ ರಾಷ್ಟ್ರಗಳು ಅಳವಡಿಸಿಕೊಳ್ಳಬೇಕೆಂಬ ಅಭಿಪ್ರಾಯ ವಿಶ್ವ ಬ್ಯಾಂಕ್ ನಲ್ಲಿ ವ್ಯಕ್ತವಾಗಿದ್ದು, ಈ ಬಗ್ಗೆ ಸಲಹೆ ನೀಡಲಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧ್ಯಕ್ಷ ಡಾ. ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ವಾಷಿಂಗ್ ಟನ್ ನಲ್ಲಿ ವಿಶ್ವ ಬ್ಯಾಂಕ್ ಅಧಿಕಾರಿಗಳೊಂದಿಗೆ ಆಧಾರ್ ಕುರಿತು ಸರಣಿ ಸಭೆಗಳನ್ನು ನಡೆಸಿರುವ ಡಾ. ಅಜಯ್ ಭೂಷಣ್, ವಿದೇಶಗಳಿಂದ ಆಗಮಿಸಿದ್ದ ಅಧಿಕಾರಿಗಳಿಗೆ ಆಧಾರ್ ಕುರಿತ ಪ್ರಾತ್ಯಕ್ಷಿಕೆ ನೀಡಿದ್ದು, ಭಾರತದಲ್ಲಿ ಸಬ್ಸಿಡಿ ಯೋಜನೆಗಳಿಗೆ ಆಧಾರ್ ನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ.  
ಆಧಾರ್ ಅಡಿಯಲ್ಲಿ ಪ್ರಸ್ತುತ ಒಂದು ಬಿಲಿಯನ್ ಜನರು ಗುರುತಿನ ಚೀಟಿ ಹೊಂದಿದ್ದು, ಪ್ರತಿ ಆಧಾರ್ ಗುರುತಿನ ಚೀಟಿ ನೀಡುವುದಕ್ಕೆ 1 ಯುಎಸ್ ಡಿ ಗಿಂತ ಕಡಿಮೆ ಖರ್ಚಾಗುತ್ತದೆ. ಎಲ್ಲಾ ಪ್ರದೇಶದಲ್ಲೂ ಇದು ಪ್ರಮಾಣೀಕೃತವಾದ್ದರಿಂದ ಆಧಾರ್ ನಿಂದ ಬಹು ರೀತಿಯ ಉಪಯೋಗಳಿದ್ದು ಅನ್ಯ ದೇಶಗಳೂ ಇದೇ ಮಾದರಿಯ ವ್ಯವಸ್ಥೆ ರೂಪಿಸುವಂತೆ ವಿಶ್ವ ಬ್ಯಾಂಕ್ ಸಲಹೆ ನೀಡಲು ತೀರ್ಮಾನಿಸಿದೆ ಎನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ