ವಿದೇಶ

ಎಫ್-16 ಪೂರೈಕೆ ಸಬ್ಸಿಡಿಗೆ ಕತ್ತರಿ ಹಾಕಿದರೂ, ಹಳೆಯ ವರಸೆ ಮುಂದುವರೆಸಿದ ಅಮೆರಿಕ!

ಸಬ್ಸಿಡಿಗೆ ಕತ್ತರಿ ಹಾಕಿದ್ದರೂ ತನ್ನ ಹಳೆಯ ವರಸೆಯನ್ನು ಮುಂದುವರೆಸಿದ್ದು, ಪಾಕ್ ಗೆ ಅಮೆರಿಕ ಪೂರೈಕೆ ಮಾಡಲಿರುವ ಎಫ್ 16 ಯುದ್ಧ ವಿಮಾನ ಭಯೋತ್ಪಾದನೆ ವಿರುದ್ಧ ಬಳಕೆಯಾಗುವುದುಖಚಿತ ಎಂದಿದೆ.

ಇಸ್ಲಾಮಾಬಾದ್: ಅತ್ಯಾಧುನಿಕ ಎಫ್ 16 ಯುದ್ಧ ವಿಮಾನವನ್ನು ಖರೀದಿಸುವುದಕ್ಕೆ ಪಾಕಿಸ್ತಾನಕ್ಕೆ ನೀಡಬೇಕಿದ್ದ ಸಬ್ಸಿಡಿಗೆ ಕತ್ತರಿ ಹಾಕಿದ್ದ ಅಮೆರಿಕ ಈಗ ತನ್ನ ಹಳೆಯ ವರಸೆಯನ್ನು ಮುಂದುವರೆಸಿದ್ದು, ಪಾಕ್ ಗೆ ಅಮೆರಿಕ ಪೂರೈಕೆ ಮಾಡಲಿರುವ ಎಫ್ 16 ಯುದ್ಧ ವಿಮಾನ ಭಯೋತ್ಪಾದನೆ ವಿರುದ್ಧ ಬಳಕೆಯಾಗುವುದು ಖಚಿತ ಎಂದು ಹೇಳಿದೆ.
ಅಮೆರಿಕದ ರಕ್ಷಣಾ ಸಚಿವಾಲಯ ಈ ಹೇಳಿಕೆ ನೀಡಿದ್ದು, ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತಿರುವ ಪಾಕಿಸ್ತಾನಕ್ಕೆ ಸಹಾಯ ಮಾಡಲು ಎಫ್ 16 ಪೂರೈಕೆ ನಿರ್ಧಾರ ಸೂಕ್ತವಾಗಿದೆ. ಈ ಹಿಂದೆಯೂ ಪಾಕಿಸ್ತಾನ ಅನೇಕ ಬಾರಿ ಭಯೋತ್ಪಾದಕರ ವಿರುದ್ಧ ದಾಳಿ ನಡೆಸಿರುವ ಉದಾಹರಣೆಗಳಿವೆ ಎಂದು ಅಮೆರಿಕ ರಕ್ಷಣಾ ಸಚಿವಾಲಯದ ಉಪವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ. 
ಅಮೆರಿಕ ರಕ್ಷಣಾ ಸಚಿವಾಲಯದ ಈ ಹೇಳಿಕೆಯಿಂದ, ಎಫ್ 16 ಯುದ್ಧ ವಿಮಾನಗಳನ್ನು ಪೂರೈಸಿದರೆ ಅವುಗಳು ಭಯೋತ್ಪಾದಕರ ವಿರುದ್ಧ ಬಳಕೆಯಾಗುವುದಕ್ಕಿಂತ ಹೆಚ್ಚಾಗಿ ಭಾರತದ ವಿರುದ್ಧ ಬಳಕೆಯಾಗುವ ಸಂಭವ ಹೆಚ್ಚಿದೆ ಎಂba ಅಮೆರಿಕದ ಕೆಲವು ಶಾಸಕರ ಹೇಳಿಕೆಯನ್ನೇ ತಿರಸ್ಕರಿಸುವಂತಿದೆ.
ಸಬ್ಸಿಡಿ ದರದಲ್ಲಿ ಪಾಕಿಸ್ತಾನಕ್ಕೆ 8 ಎಫ್ 16 ಯುದ್ಧ ವಿಮಾನವನ್ನು ನೀಡುವ ಬಗ್ಗೆ ತನ್ನ ನಿಲುವನ್ನು ಬದಲಿಸಿದ್ದ ಅಮೆರಿಕ, ಪಾಕಿಸ್ತಾನಕ್ಕೆ ನೀಡಿದ್ದ ಭಾರಿ ಪ್ರಮಾಣದ ಸಬ್ಸಿಡಿಯನ್ನು ಕೈಬಿಟ್ಟಿತ್ತು. ಆದರೂ ಪಾಕಿಸ್ತಾನಕ್ಕೆ ಯುದ್ಧ ವಿಮಾನ ಪೂರೈಕೆ ಮಾಡುವುದರಿಂದ ಉಂಟಾಗಬಹುದಾದ ಅನಾಹುತಗಳನ್ನು ಅಮೆರಿಕ ಗಂಭೀರವಾಗಿ ಪರಿಗಣಿಸದೇ ಹಳೆಯ ವರಸೆಯನ್ನೇ ಮುಂದುವರೆಸಿದೆ.
ಇನ್ನು ಪಾಕಿಸ್ತಾವೂ ತನ್ನ ಪ್ರಯತ್ನವನ್ನು ಮುಂದುವರೆಸಿದ್ದು, ಪಾಕಿಸ್ತಾನಕ್ಕೆ ಯುದ್ಧ ವಿಮಾನ ಪೂರೈಕೆ ಮಾಡುವ ಒಪ್ಪಂದದ ಬಗ್ಗೆ ಕಾಂಗ್ರೆಸ್ ನ್ನು ಒಪ್ಪಿಸುವುದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಹೊಣೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ವಿದೇಶಾಂಗ ವ್ಯವಹಾರಗಳ ವಿಶೇಷ ಸಹಾಯಕ ತರೀಖ್ ಫತೇಮಿ ಹೇಳಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಯುದ್ಧ ವಿಮಾನ ಪೂರೈಕೆ ಒಪ್ಪಂದದ ಕುರಿತು ಅಮೆರಿಕದ ಪ್ರಮುಖ ಸಂಸದರೊಂದಿಗೆ ಪಾಕಿಸ್ತಾನ ರಾಯಭಾರಿ ಕಚೇರಿ ನಿರಂತರ ಸಂಪರ್ಕದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT