ವಿವಾದಿತ ಪೂರ್ವ ಚೀನಾ ಸಮುದ್ರ (ಸಂಗ್ರಹ ಚಿತ್ರ) 
ವಿದೇಶ

ವಿವಾದಿತ ಪೂರ್ವ ಚೀನಾ ಸಮುದ್ರ ಪ್ರವೇಶ ಬೇಡ: ಚೀನಾಕ್ಕೆ ಜಪಾನ್ ಎಚ್ಚರಿಕೆ

ವಿವಾದಿತ ಪೂರ್ವ ಚೀನಾ ಸಮುದ್ರ ಪ್ರವೇಶಿಸುವ ದುಸ್ಸಾಹಸಕ್ಕೆ ಕೈಹಾಕಬೇಡಿ ಎಂದು ಚೀನಾಕ್ಕೆ ಜಪಾನ್ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.

ಟೋಕಿಯೋ: ವಿವಾದಿತ ಪೂರ್ವ ಚೀನಾ ಸಮುದ್ರ ಪ್ರವೇಶಿಸುವ ದುಸ್ಸಾಹಸಕ್ಕೆ ಕೈಹಾಕಬೇಡಿ ಎಂದು ಚೀನಾಕ್ಕೆ ಜಪಾನ್ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.

ಆಂತಾರಾಷ್ಟ್ರೀಯ ನ್ಯಾಯಾಲಯಜ ತೀರ್ಪಿನ ನಡುವೆಯೂ ಪೂರ್ವ ಚೀನಾ ಸಮುದ್ರದ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿರುವ ಚೀನಾ ಸರ್ಕಾರಕ್ಕೆ ಜಪಾನ್ ಸರ್ಕಾರ ತಕ್ಕ ಉತ್ತರ  ನೀಡಿದ್ದು, ವಿವಾದಿತ ಸಮುದ್ರ ಪ್ರವೇಶ ಮಾಡುವ ದುಸ್ಸಾಹಸಕ್ಕೆ ಚೀನಾ ಕೈಹಾಕಬಾರದು ಎಂದು ಹೇಳಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಜಪಾನ್ ಸರ್ಕಾರದ ಹಿರಿಯ ಸಂಪುಟ ಕಾರ್ಯದರ್ಶಿ  ಯೋಶಿಹಿದೆ ಸುಗಾ ಅವರು, ಜಪಾನ್ ಸರ್ಕಾರ ಶಾಂತಿಪ್ರಿಯ ದೇಶವಾಗಿದೆ. ನಾವು ತುಂಬಾ ವಿನಯವಾಗಿ ಚೀನಾವನ್ನು ಕೇಳಿಕೊಳ್ಳುತ್ತಿದ್ದು, ವಿವಾದಿತ ಪೂರ್ವ ಚೀನಾ ಸಮುದ್ರ ಪ್ರವೇಶ  ಮಾಡದಂತೆ ಮನವಿ ಮಾಡಿದ್ದಾರೆ.

"ಈ ವರೆಗೂ ಚೀನಾ ಸರ್ಕಾರದ ನಾವಿಕ ಪಡೆಗಳು ಸುಮಾರು 14 ಬಾರಿ ಜಪಾನ್ ಬಳಿ ವಿವಾದಿತ ಸಮುದ್ರ ಪ್ರವೇಶ ಮಾಡಿವೆ. ಚೀನಾ ಸರ್ಕಾರದ ನಡೆ ಕಾನೂನು ಬಾಹಿರಂಗವಾಗಿದ್ದು, ಶಿಕ್ಷಾರ್ಹ  ಅಪರಾಧವಾಗಿದೆ. ಹೀಗಾಗಿ ಸೌಹಾರ್ಧತೆಯ ದೃಷ್ಟಿಯಿಂದ ಚೀನಾ ಪೂರ್ವ ಚೀನಾ ಸಮುದ್ರದಲ್ಲಿ ತನ್ನ ನೌಕೆಗಳನ್ನು ಇಳಿಸಬಾರದು ಎಂದು ಹೇಳಿದ್ದಾರೆ. ಅಂತೆಯೇ ಕಳೆದ ಸೋಮವಾರವೂ  ಚೀನಾ ಸೇನಾಪಡೆಗೆ ಸೇರಿದ 12 ಹಡಗಗಳು ವಿವಾದಿತ ಸಮುದ್ರ ಪ್ರವೇಶಿಸಿದ್ದವು, ಈ ಬಗ್ಗೆ ಜಪಾನ್ ಕರಾವಳಿ ಸೇನಾಪಡೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಜಪಾನ್ ಸಮೀಪದ ಸೇನ್ ಕಕು ಮತ್ತು ಚೀನಾ ಸಮೀಪದ ಡಿಯಾಯೋ ದ್ವೀಪಗಳು ಉಭಯ ದೇಶಗಳ ನಡುವಿನ ಗಡಿ ಜಟಾಪಟಿಗೆ ಕಾರಣವಾಗಿದ್ದು, ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ  ನ್ಯಾಯಾಲಯ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಗೆ ಪಾರಂಪರಿಕ ಹಕ್ಕಿಲ್ಲ ಎಂದು ಐತಿಹಾಸಿಕ ತೀರ್ಪು ನೀಡಿತ್ತು. ಇದಾಗ್ಯೂ ಚೀನಾ ಸೇನೆ ಮಾತ್ರ ಅಲ್ಲಿನ ತನ್ನ ಕಾರ್ಯ  ಚಟುವಟಿಕೆಗಳನ್ನು ಸ್ಥಗಿತಗೊಳಿಸರಿಲ್ಲಿಲ್ಲ. ಇದು ಅಮೆರಿಕ, ಭಾರತ ಮತ್ತು ಜಪಾನ್ ಸೇರಿದಂತೆ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT