ಜೂಲಿಯನ್ ಅಸಾಂಜೆ 
ವಿದೇಶ

ವಿಕಿಲೀಕ್ಸ್‌ನ ಅಸಾಂಜೆ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ: ವಿಶ್ವಸಂಸ್ಥೆಯಲ್ಲಿ ಸೋಲಾದರೆ ಶರಣಾಗತಿ ಬಯಕೆ

ಪ್ರಪಂಚಾದ್ಯಂತ ಸ್ಫೋಟಕ ಮಾಹಿತಿಗಳ ಬಹಿರಂಗದ ಮೂಲಕ ಸಂಚಲನ ಸೃಷ್ಟಿಸಿದ್ದ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್ ಅಸಾಂಜೆ ಅವರು ಶರಣಾಗತಿಯ ಇಂಗಿತ...

ಲಂಡನ್‌: ಪ್ರಪಂಚಾದ್ಯಂತ ಸ್ಫೋಟಕ ಮಾಹಿತಿಗಳ ಬಹಿರಂಗದ ಮೂಲಕ ಸಂಚಲನ ಸೃಷ್ಟಿಸಿದ್ದ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್ ಅಸಾಂಜೆ ಅವರು ಶರಣಾಗತಿಯ ಇಂಗಿತ ವ್ಯಕ್ತಪಡಿಸಿದ್ದಾರೆ.

ಸ್ವಿಡನ್‌ನಲ್ಲಿ ಅಸಾಂಜೆ ಅವರು ಇಬ್ಬರು ಮಹಿಳೆಯರಿಂದ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಎದುರಿಸುತ್ತಿದ್ದು, ಕಳೆದ ಮೂರು ವರ್ಷಗಳಿಂದ ಇಲ್ಲಿನ ಈಕ್ವೇಡಾರ್‌ ರಾಜತಾಂತ್ರಿಕ ಕಚೇರಿಯಲ್ಲಿ ನೆಲೆಸಿರುವುದು ‘ಅಕ್ರಮ ವಶ’ ಅಲ್ಲ ಎಂದು ವಿಶ್ವಸಂಸ್ಥೆಯ ಸಮಿತಿಯು ಘೋಷಿಸಿದರೆ, ಶುಕ್ರವಾರ ಮಧ್ಯಾಹ್ನವೇ ಬ್ರಿಟನ್‌ ಪೊಲೀಸರಿಗೆ ಶರಣಾಗುವೆ ಎಂದು ಪ್ರಕಟಿಸಿದ್ದಾರೆ.

‘ಇಂಗ್ಲೆಂಡ್‌ ಹಾಗೂ ಸ್ವಿಡನ್‌ ವಿರುದ್ಧದ ಪ್ರಕರಣಗಳಲ್ಲಿ ಸೋಲು ಕಂಡಿರುವುದಾಗಿ ವಿಶ್ವಸಂಸ್ಥೆ ನಾಳೆ ಪ್ರಕಟಿಸಿದರೆ, ನಾನು ಶುಕ್ರವಾರ ಮಧ್ಯಾಹ್ನವೇ ರಾಜತಾಂತ್ರಿಕ ಕಚೇರಿಯಿಂದ ಹೊರಬಂದು ಬ್ರಿಟಿಷ್ ಪೊಲೀಸರಿಗೆ ಶರಣಾಗುವೆ. ಇದಕ್ಕಿಂತಲೂ  ಅರ್ಥಪೂರ್ಣವಾದ ಭರವಸೆಯಲ್ಲಿ ಹುರುಳಿಲ್ಲ’ ಎಂದಿದ್ದಾರೆ.

‘ಆದರೆ, ವಿಶ್ವಸಂಸ್ಥೆ ನನ್ನ ಪರವಾಗಿ ತೀರ್ಪು ನೀಡಿ, ನಾನು ಜಯಿಸಿದರೆ, ಕೂಡಲೇ ನನ್ಮ ಪಾಸ್‌ಪೋರ್ಟ್‌ ಅನ್ನು ಮರಳಿಸಬೇಕು. ಭವಿಷ್ಯದಲ್ಲಿ ಬಂಧನ ಯತ್ನಗಳನ್ನು ಕೈಬಿಡಬೇಕು ಎಂದು ನಾನು ನಿರೀಕ್ಷಿಸುವೆ’ ಎಂದು ವಿಕಿಲೀಕ್ಸ್‌ ಟ್ವಿಟ್ಟರ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ.

44 ವರ್ಷದ ಅಸಾಂಜೆ 2012ರಿಂದಲೂ ಸೆಂಟ್ರಲ್ ಲಂಡನ್ನಿನಲ್ಲಿರುವ ಈಕ್ವೇಡಾರ್‌ ರಾಜತಾಂತ್ರಿಕ ಕಚೇರಿಯಲ್ಲಿ ನೆಲೆಸಿದ್ದಾರೆ. ಅಂದಿನಿಂದಲೂ ಆ ಕಟ್ಟದ ಸುತ್ತಲೂ ಬ್ರಿಟಿಷ್ ಸರ್ಕಾರವು ಪೊಲೀಸರನ್ನು ನಿಯೋಜಿಸಿ, ತೀವ್ರತರ ನಿಗಾ ಇಟ್ಟಿದೆ. ಸ್ವಿಡನ್‌ಗೆ ಹಸ್ತಾಂತರಿಸುವ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಅಸಾಂಜೆ, ಈಕ್ವೇಡಾರ್ ರಾಜತಾಂತ್ರಿಕ ಕಚೇರಿಯ ರಕ್ಷಣೆಗೆ ಮೊರೆಹೋಗಿದ್ದರು.  ಆದರೆ, ಈ ಆರೋಪಗಳನ್ನು ಅಸಾಂಜೆ ಅಲ್ಲಗಳೆದಿದ್ದಾರೆ. ವಿಶ್ವಸಂಸ್ಥೆಯ ‘ನಿರಂಕುಶ ವಶ’ ಮೇಲಿನ ಸಮಿತಿಯು ಫೆಬ್ರುವರಿ 5ರಂದು ತನ್ನ ಆದೇಶ ಪ್ರಕಟಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT