ಸಾಂದರ್ಭಿಕ ಚಿತ್ರ 
ವಿದೇಶ

ಲಾಹೋರ್ : ಮೆಟ್ರೋ ರೈಲು ಹಳಿ ನಿರ್ಮಾಣಕ್ಕಾಗಿ ಐತಿಹಾಸಿಕ ಜೈನ ದೇಗುಲ ತೆರವು

ಪಾಕಿಸ್ತಾನದ ಲಾಹೋರ್‌ವನಲ್ಲಿರುವ ಐತಿಹಾಸಿಕ ಜೈನ ದೇಗುಲವನ್ನು ತೆರವುಗೊಳಿಸಲಾಗಿದೆ .ಆರೆಂಜ್ ಲೈನ್ ಮೆಟ್ರೋ ಟ್ರೈನ್ (ಒಎಂಟಿ) ಯೋಜನೆಯ ...

ನವದೆಹಲಿ: ಪಾಕಿಸ್ತಾನದ ಲಾಹೋರ್‌ವನಲ್ಲಿರುವ ಐತಿಹಾಸಿಕ ಜೈನ ದೇಗುಲವನ್ನು ತೆರವುಗೊಳಿಸಲಾಗಿದೆ .ಆರೆಂಜ್ ಲೈನ್ ಮೆಟ್ರೋ ಟ್ರೈನ್ (ಒಎಂಟಿ) ಯೋಜನೆಯ ಅಂಗವಾಗಿ ಈ ತೆರವು ಕಾರ್ಯ ನಡೆದಿದೆ.
ಜೈನ ದೇಗುಲ ಮಾತ್ರವಲ್ಲದೆ ಮಹಾರಾಜ ಕಟ್ಟಡ, ಕಪೂರ್ತಲಾ ಹೌಸ್ ಸೇರಿದಂತೆ ಹಲವಾರು ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.
ದೇಗುಲವನ್ನು ತೆರವುಗೊಳಿಸುವ ಪಾಕಿಸ್ತಾನ ಸರ್ಕಾರದ ತೀರ್ಮಾನವನ್ನು ಪಂಜಾಬ್ ಅಸೆಂಬ್ಲಿಯ ವಿರೋಧ ಪಕ್ಷ ನಾಯಕ ಮಿಯಾ ಮೆಹಮೂದ್ ಉರ್ ರಶೀದ್ ಖಂಡಿಸಿದ್ದಾರೆ.
ಒಎಂಟಿಗಾಗಿ ಪಾಕ್ ಸರ್ಕಾರ ಬುಧವಾರ ದೇಗುಲವನ್ನು ತೆರವುಗೊಳಿಸಿದೆ. ಸುರಂಗ ಮಾರ್ಗವನ್ನು ನಿರ್ಮಿಸುವ ಮೂಲಕ ರೈಲ್ವೇ ಹಳಿ ನಿರ್ಮಿಸಬಹುದಿತ್ತು. ಹೀಗೆ ಮಾಡುತ್ತಿದ್ದರೆ ಚಾರಿತ್ರಿಕ ದೇಗುಲ ನಾಶವಾಗುತ್ತಿರಲಿಲ್ಲ ಎಂದು  ರಶೀದ್ ಹೇಳಿದ್ದಾರೆ.
ಮೂರ ಮಹಡಿಗಳಿದ್ದ ಪುರಾತನ ದೇಗುಲ ಶಿಥಿಲಾವಸ್ಥೆಯಲ್ಲಿ ಇತ್ತು ಎನ್ನಲಾಗುತ್ತಿದೆ.
1992ರಲ್ಲಿ ಬಾಬರಿ ಮಸೀದಿ ಧ್ವಂಸವಾದಾಗ ಪಾಕ್ ನಲ್ಲಿ ಈ ಜೈನ ದೇವಾಲಯದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ಹಾನಿ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT