ಸಾಂದರ್ಭಿಕ ಚಿತ್ರ 
ವಿದೇಶ

ತನ್ನ ನಾಗರಿಕರ ಹಕ್ಕು ಕಾಪಾಡುವ ಜವಾಬ್ದಾರಿ ಭಾರತಕ್ಕಿದೆ: ಅಮೆರಿಕ

ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡದ ರೀತಿ ನೋಡಿಕೊಳ್ಳುವುದು ಭಾರತ ಜವಾಬ್ದಾರಿ ಎಂದು ಅಮೆರಿಕದ...

ವಾಷಿಂಗ್ಟನ್: ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡದ ರೀತಿ ನೋಡಿಕೊಳ್ಳುವುದು ಭಾರತ ಜವಾಬ್ದಾರಿ ಎಂದು ಅಮೆರಿಕದ ಸೆನೆಟರ್ ಹೇಳಿದ್ದಾರೆ. 
ಭಾರತದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆ, ಧಾರ್ಮಿಕ ಅಸಹಿಷ್ಣುತೆ ಮತ್ತು ನ್ಯಾಯಾಬಾಹಿರ ಹತ್ಯೆಗಳ ಕುರಿತು ಮಾತನಾಡಿದ ಅಮೆರಿಕದ ಸೆನೆಟರ್ ಬೆನ್ ಕಾರ್ಡಿನ್, ತನ್ನ ನಾಗರಿಕರ ಹಕ್ಕುಗಳನ್ನು ರಕ್ಷಣೆ ಮಾಡುವುದು ಭಾರತದ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದ್ದಾರೆ. 
ಮಾಹಾತ್ಮ ಗಾಂಧಿ ಜೀವಂತವಾಗಿದ್ದರೆ ದೇಶದ ಪ್ರಗತಿ ನೋಡಿ ಸಂತಸ ಪಡುತ್ತಿದ್ದರು, ಆದರೆ ತೃಪ್ತಿ ಪಡುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. 
ಪ್ರಜಾಪ್ರಭುತ್ವದ ದೇಶ ಮುನ್ನಗ್ಗಬೇಕು. ಆದರೆ, ನಮಗೆ ಇರುವಂತಹ ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಜನರು ಎಲ್ಲಾ ಸೌಲಭ್ಯಗಳನ್ನು ಪಡೆಯುವಂತೆ ಮಾಡಬೇಕು ಎಂದಿದ್ದಾರೆ. 
ಭಾರತದ ಮಾನವ ಕಳ್ಳ ಸಾಗಣೆ ತಡೆ ಕಾನೂನನ್ನು ಸ್ವಾಗತಿಸಿದ ಅವರು, ಕೇವಲ ಕಾನೂನು ರಚಿಸಿ ಸುಮ್ಮನಾಗದೇ, ಅದು ಕಾರ್ಯಪ್ರವೃತ್ತಿಗೆ ಬರುವಂತೆ ಮಾಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಮಾಹಾತ್ಮ ಗಾಂಧಿ ಅವರು ಜೀವಂತವಾಗಿದ್ದರೆ ದೇಶದ ಪ್ರಗತಿ ನೋಡಿ ಸಂತಸ ಪಡುತ್ತಿದ್ದರು, ಆದರೆ ತೃಪ್ತಿಪಡುತ್ತಿರಲಿಲ್ಲ. ಅದೇ ರೀತಿ ಮಾರ್ಟಿನ್ ಲೂಥರ್ ಕಿಂಗ್ ಅವರು ಜೀವಂತವಾಗಿದ್ದರೆ ಅಮೆರಿಕದ ಪ್ರಗತಿ ನೋಡಿ ಸಂತಸ ಪಡುತ್ತಿದ್ದರು, ಆದರೆ ತೃಪ್ತಿ ಪಡುತ್ತಿರಲಿಲ್ಲ. ಏಕೆಂದರೆ ಎರಡು ದೇಶಗಳಲ್ಲಿ ಪ್ರಜಾಪ್ರಭುತ್ವದ ಹಕ್ಕನ್ನು ಇನ್ನಷ್ಟು ಬಲ ಪಡಿಸುವ ಅಗತ್ಯವಿದೆ. ಅಮೆರಿಕ ಮತ್ತು ಭಾರತ ಎರಡು ಪ್ರಜಾಪ್ರಭುತ್ವ ದೇಶಗಳಾಗಿದ್ದು, ಮಾನವ ಹಕ್ಕುಗಳನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾಗೆ ಭೇಟಿ ನೀಡುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT