ಮಿರ್ ಕ್ವಾಸೆಮ್ ಅಲಿ 
ವಿದೇಶ

ಜಮಾತ್ ಮುಖಂಡನ ಮರಣದಂಡನೆ ಎತ್ತಿಹಿಡಿದ ಬಾಂಗ್ಲಾ ಸುಪ್ರೀಂ ಕೋರ್ಟ್

೧೯೭೧ರ ಸ್ವಾತಂತ್ರ್ಯ ಯುದ್ಧದ ಸಮಯದಲ್ಲಿ ಬೆಂಗಾಳಿಗಳ ಮೇಲೆ ದೌರ್ಜನ್ಯವೆಸಗಿದ ಆರೋಪದಲ್ಲಿ ಆಲ್-ಬದರ್ ಮತ್ತು ಜಮಾತ್ ಎ ಇಸ್ಲಾಮಿ ಪಕ್ಷದ ಮಾಜಿ ನಾಯಕ ಮಿರ್ ಕ್ವಾಸೆಮ್

ಢಾಕಾ: ೧೯೭೧ರ ಸ್ವಾತಂತ್ರ್ಯ ಯುದ್ಧದ ಸಮಯದಲ್ಲಿ ಬೆಂಗಾಳಿಗಳ ಮೇಲೆ ದೌರ್ಜನ್ಯವೆಸಗಿದ ಆರೋಪದಲ್ಲಿ ಆಲ್-ಬದರ್ ಮತ್ತು ಜಮಾತ್ ಎ ಇಸ್ಲಾಮಿ ಪಕ್ಷದ ಮಾಜಿ ನಾಯಕ ಮಿರ್ ಕ್ವಾಸೆಮ್ ಅಲಿಗೆ ನೀಡಲಾಗಿದ್ದ ಮಣದಂಡನೆ ಶಿಕ್ಷೆಯನ್ನು ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಆಲ್-ಬದರ್ ಪಶ್ಚಿಮ ಪಾಕಿಸ್ತಾನ ಸೇನೆಯ ಸಾಂವಿಧಾನಿಕ ಪಕ್ಷವಾಗಿತ್ತು ಮತ್ತು ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾ ದೇಶದಲ್ಲಿ) ತನ್ನ ಕಾರ್ಯ ನಿರ್ವಹಿಸುತ್ತಿತ್ತು,. ಬಾಂಗ್ಲಾದೇಶದ ಸ್ವಾತಂತ್ರ್ಯ ಯುದ್ಧದ ವೇಳೆಯಲ್ಲಿ ಬೆಂಗಾಳಿ ರಾಷ್ಟ್ರೀಯ ಚಳುವಳಿಯ ಸಮಯಲ್ಲಿ ಈ ಪಕ್ಷದ ನಾಯಕರು ಬೆಂಗಾಳಿಗಳ ಮೇಲೆ ದೌರ್ಜನ್ಯ ಎಸಗಿದ್ದರು.

ಆಲ್-ಬದರ್ ನ ಚಿತ್ತಗಾಂಗ್ ಪ್ರಾದೇಶಿಕ ಕಮ್ಯಾಂಡರ್ ಆಗಿ ಕ್ವಾಸೆಮ್ ಎಸಗಿರುವ ಕ್ರಿಮಿನಲ್ ಅಪರಾಧಗಳನ್ನು ಈ ತೀರ್ಪು ಮತ್ತೆ ತಿಳಿಸಿ ಮರಣದಂಡನೆ ತೀರ್ಪನ್ನು ಎತ್ತಿಹಿಡಿದಿದೆ.

ದೇಶದಾದ್ಯಂತ ಈ ತೀರ್ಪನ್ನು ಸಂಭ್ರಮಿಸಲಾಗಿದ್ದು, ಕೆಲವು ಸ್ಥಳಗಳಲ್ಲಿ ಸಂಭ್ರಮದ ರ್ಯಾಲಿ ಏರ್ಪಡಿಸಲಾಗಿತ್ತು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT