ಮಿರ್ ಕ್ವಾಸೆಮ್ ಅಲಿ 
ವಿದೇಶ

ಜಮಾತ್ ಮುಖಂಡನ ಮರಣದಂಡನೆ ಎತ್ತಿಹಿಡಿದ ಬಾಂಗ್ಲಾ ಸುಪ್ರೀಂ ಕೋರ್ಟ್

೧೯೭೧ರ ಸ್ವಾತಂತ್ರ್ಯ ಯುದ್ಧದ ಸಮಯದಲ್ಲಿ ಬೆಂಗಾಳಿಗಳ ಮೇಲೆ ದೌರ್ಜನ್ಯವೆಸಗಿದ ಆರೋಪದಲ್ಲಿ ಆಲ್-ಬದರ್ ಮತ್ತು ಜಮಾತ್ ಎ ಇಸ್ಲಾಮಿ ಪಕ್ಷದ ಮಾಜಿ ನಾಯಕ ಮಿರ್ ಕ್ವಾಸೆಮ್

ಢಾಕಾ: ೧೯೭೧ರ ಸ್ವಾತಂತ್ರ್ಯ ಯುದ್ಧದ ಸಮಯದಲ್ಲಿ ಬೆಂಗಾಳಿಗಳ ಮೇಲೆ ದೌರ್ಜನ್ಯವೆಸಗಿದ ಆರೋಪದಲ್ಲಿ ಆಲ್-ಬದರ್ ಮತ್ತು ಜಮಾತ್ ಎ ಇಸ್ಲಾಮಿ ಪಕ್ಷದ ಮಾಜಿ ನಾಯಕ ಮಿರ್ ಕ್ವಾಸೆಮ್ ಅಲಿಗೆ ನೀಡಲಾಗಿದ್ದ ಮಣದಂಡನೆ ಶಿಕ್ಷೆಯನ್ನು ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಆಲ್-ಬದರ್ ಪಶ್ಚಿಮ ಪಾಕಿಸ್ತಾನ ಸೇನೆಯ ಸಾಂವಿಧಾನಿಕ ಪಕ್ಷವಾಗಿತ್ತು ಮತ್ತು ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾ ದೇಶದಲ್ಲಿ) ತನ್ನ ಕಾರ್ಯ ನಿರ್ವಹಿಸುತ್ತಿತ್ತು,. ಬಾಂಗ್ಲಾದೇಶದ ಸ್ವಾತಂತ್ರ್ಯ ಯುದ್ಧದ ವೇಳೆಯಲ್ಲಿ ಬೆಂಗಾಳಿ ರಾಷ್ಟ್ರೀಯ ಚಳುವಳಿಯ ಸಮಯಲ್ಲಿ ಈ ಪಕ್ಷದ ನಾಯಕರು ಬೆಂಗಾಳಿಗಳ ಮೇಲೆ ದೌರ್ಜನ್ಯ ಎಸಗಿದ್ದರು.

ಆಲ್-ಬದರ್ ನ ಚಿತ್ತಗಾಂಗ್ ಪ್ರಾದೇಶಿಕ ಕಮ್ಯಾಂಡರ್ ಆಗಿ ಕ್ವಾಸೆಮ್ ಎಸಗಿರುವ ಕ್ರಿಮಿನಲ್ ಅಪರಾಧಗಳನ್ನು ಈ ತೀರ್ಪು ಮತ್ತೆ ತಿಳಿಸಿ ಮರಣದಂಡನೆ ತೀರ್ಪನ್ನು ಎತ್ತಿಹಿಡಿದಿದೆ.

ದೇಶದಾದ್ಯಂತ ಈ ತೀರ್ಪನ್ನು ಸಂಭ್ರಮಿಸಲಾಗಿದ್ದು, ಕೆಲವು ಸ್ಥಳಗಳಲ್ಲಿ ಸಂಭ್ರಮದ ರ್ಯಾಲಿ ಏರ್ಪಡಿಸಲಾಗಿತ್ತು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT