ಚೀನಾದ ದೂರಗಾಮಿ ಕ್ಷಿಪಣಿ "ಗ್ವಾಮ್ ಕಿಲ್ಲರ್" (ಸಂಗ್ರಹ ಚಿತ್ರ) 
ವಿದೇಶ

ಅಮೆರಿಕದ ಆತಂಕಕ್ಕೆ ಕಾರಣವಾದ ಚೀನಾದ ಕ್ಷಿಪಣಿ!

ಚೀನಾ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ನೂತನ ಕ್ಷಿಪಣಿಯೊಂದು ಇದೀಗ ವಿಶ್ವದ ಬಲಿಷ್ಠ ರಾಷ್ಟ್ರ ದೊಡ್ಡಣ್ಣ ಅಮೆರಿಕದ ನಿದ್ದೆ ಕದ್ದಿದೆ.

ವಾಷಿಂಗ್ಟನ್: ಚೀನಾ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ನೂತನ ಕ್ಷಿಪಣಿಯೊಂದು ಇದೀಗ ವಿಶ್ವದ ಬಲಿಷ್ಠ ರಾಷ್ಟ್ರ ದೊಡ್ಡಣ್ಣ ಅಮೆರಿಕದ ನಿದ್ದೆ ಕದ್ದಿದೆ.

ಚೀನಾ ನೂತನವಾಗಿ ಅಭೀವೃದ್ಧಿ ಪಡಿಸಿರುವ 5,500 ಕಿ.ಮೀ. ದೂರ ತಲುಪುವ ಸಾಮರ್ಥ್ಯವಿರುವ ಗ್ವಾಮ್ ಕಿಲ್ಲರ್ ಎಂಬ ಕ್ಷಿಪಣಿ ಯಿ೦ದ ಅಮೆರಿಕಕ್ಕೆ ಭದ್ರತಾ ಆತ೦ಕ ಎದುರಾಗಿದೆ ಎ೦ದು  ಅಲ್ಲಿನ ಸಮಿತಿ ವರದಿ ಮಾಡಿದೆ. ಗ್ವಾಮ್ ಎ೦ಬುದು ಅಮೆರಿಕ ವ್ಯಾಪ್ತಿಗೆ ಒಳಪಟ್ಟಿರುವ ದ್ವೀಪವಾಗಿದ್ದು, ಅಮೆರಿಕದ ಪ್ರಮುಖ ಸೇನಾನೆಲೆಗಳಾದ ಆ್ಯ೦ಡಸ೯ನ್ ವಾಯುನೆಲೆ, ನೌಕಾನೆಲೆ ಇದೇ  ದ್ವೀಪದಲ್ಲಿದೆ. ಚೀನಾ, ಉತ್ತರ ಕೊರಿಯಾ ದೇಶಗಳಿಂದ ಸಂಭವಿಸಬಹುದಾದ ಸ೦ಭಾವ್ಯ ದಾಳಿಯಿ೦ದ ರಕ್ಷಣಾ ನೆಲೆಗಳನ್ನು ದೂರವಿರಿಸುವ ಉದ್ದೇಶದಿ೦ದ ಅಮೆರಿಕ ದೂರದ ಗ್ವಾಮ್  ದ್ವೀಪದಲ್ಲಿ ತನ್ನ ಸೇನಾನೆಲೆ ಸ್ಥಾಪಿಸಿತ್ತು.

ಈ ಗ್ವಾಮ್ ದ್ವೀಪ ಚೀನಾದಿ೦ದ ಸುಮಾರು 4 ಸಾವಿರ ಕಿ.ಮೀ. ದೂರದಲ್ಲಿದ್ದು, ಇದೇ ಕಾರಣಕ್ಕೆ ಅಮೆರಿಕ ಗ್ವಾಮ್ ದ್ವೀಪದಲ್ಲಿ ತನ್ನ ಸೇನಾ ನೆಲೆ ಸ್ಥಾಪಿಸಿತ್ತು. ಇದೀಗ ಈ ಚೀನಾ ಅಭಿವೃದ್ಧಿ  ಪಡಿಸಿರುವ ಡಿಎಫ್ -26 ಮಧ್ಯಂತರ ಶ್ರೇಣಿಯ ಖಂಡಾಂತರ ಕ್ಷಿಪಣಿ ಮಾದರಿಯ "ಗ್ವಾಮ್ ಕಿಲ್ಲರ್" ಎಂಬ ಕ್ಷಿಪಣಿ ಈ ಭದ್ರ ನೆಲೆಯನ್ನೂ ತಲುಪುವ ಸಾಮರ್ಥ್ಯ ಹೊಂದಿದ್ದು, ಇದೇ ವಿಚಾರ  ಇದೀಗ ಅಮೆರಿಕದ ತಲೆನೋವಿಗೆ ಕಾರಣವಾಗಿದೆ.

ಆದರೆ ಇದರಿಂದ ಕೈ ಕಟ್ಟಿ ಕೂರದ ಅಮೆರಿಕ ಚೀನಾದ ಗ್ವಾಮ್ ಕಿಲ್ಲರ್ ಕ್ಷಿಪಣಿಯನ್ನು ಆಕಾಶ ಮಾರ್ಗದಲ್ಲಿಯೇ ಛಿದ್ರಗೊಳಿಸಬಲ್ಲ ಕ್ಷಿಪಣಿ ನಿರೋಧಕ ಮಿಸೈಲ್ ಗಳನ್ನು ಇದೀಗ ಗ್ವಾಮ್ ದ್ವೀಪಕ್ಕೆ  ರವಾನೆ ಮಾಡಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ರಕ್ಷಣಾ ವಿಚಾರದಲ್ಲಿ ಚೀನಾ ಮತ್ತು ಅಮೆರಿಕ ದೇಶಗಳ ಪೈಪೋಟಿಗಿಳಿದಿದ್ದು, ಚೀನಾಗೆ ಪ್ರತ್ಯುತ್ತರ ನೀಡಿಲು ಇದೀಗ ಅಮೆರಿಕ ಸಜ್ಜಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ