ಮಿಯಾಮಿ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ) 
ವಿದೇಶ

50 ವರ್ಷಗಳ ಬಳಿಕ ಕ್ಯೂಬಾಗೆ ನೇರ ವಿಮಾನಯಾನ ಸೇವೆ ಆರಂಭಿಸಿದ ಅಮೆರಿಕ

ಬರೊಬ್ಬರಿ 50 ವರ್ಷಗಳ ಬಳಿಕ ಅಮೆರಿಕದಿಂದ ಕ್ಯೂಬಾಕ್ಕೆ ನೇರ ವಿಮಾನಯಾನ ಸೇವೆ ಆರಂಭವಾಗಿದೆ.

ಮಿಯಾಮಿ: ಬರೊಬ್ಬರಿ 50 ವರ್ಷಗಳ ಬಳಿಕ ಅಮೆರಿಕದಿಂದ ಕ್ಯೂಬಾಕ್ಕೆ ನೇರ ವಿಮಾನಯಾನ ಸೇವೆ ಆರಂಭವಾಗಿದೆ.

ಕ್ಯೂಬಾ ಮತ್ತು ಅಮೆರಿಕ ನಡುವಿನ ಐತಿಹಾಸಿಕ ಶೀತಲ ಸಮರಕ್ಕೆ ತೆರೆ ಎಳೆಯುವ ಉದ್ದೇಶದಿಂದ ಈ ಹಿಂದೆ ಅಧ್ಯಕ್ಷ ಬರಾಕ್ ಒಬಾಮ ಕ್ಯೂಬಾ ದೇಶಕ್ಕೆ ಪ್ರಯಾಣ ಬೆಳಿಸಿದ್ದರು. ಅದರ ಮುಂದುವರಿದ ಭಾಗವೆಂಬತೆ ಅಮೆರಿಕ  ಇದೀಗ ಕ್ಯೂಬಾ ದೇಶಕ್ಕೆ ನೇರ ವಿಮಾನಯಾನ ಸೇವೆ ಆರಂಭಿಸಿದೆ. ನಿನ್ನೆ ಅಮೆರಿಕದ ಮಿಯಾಮಿಯಿಂದ ಬೆಳಗ್ಗೆ 7.30ರವ ಹೊತ್ತಿಗೆ ಕ್ಯೂಬಾದತ್ತ ಪ್ರಯಾಣ ಬೆಳೆಸಿದ್ದ ಪ್ರಯಾಣಿಕ ವಿಮಾನ ಇಂದು ಕ್ಯೂಬಾದ ಹವಾನಾ ತಲುಪಿದ್ದು,  ಕ್ಯೂಬಾದಿಂದ ನೇರವಾಗಿ ಪ್ರಯಾಣಿಕರನ್ನು ಹೊತ್ತು ಅಮೆರಿಕಕ್ಕೆ ಬರಲಿದೆ.

ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ನಿಧನದ ಮರು ದಿನವೇ ಅಮೆರಿಕ ಕ್ಯೂಬಾ ದೇಶಕ್ಕೆ ನೇರ ವಿಮಾನಯಾನ ಸೇವೆ ಆರಂಭಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಅಮೆರಿಕ ಹಾಗೂ ಕ್ಯೂಬಾದ ನಡುವಿನ  ಬಿಕ್ಕಟ್ಟಿನಿಂದಾಗಿ 1979ರಿಂದ ಕಳೆದ ವರ್ಷಾಂತ್ಯದವರೆವಿಗೂ ಉಭಯ ದೇಶಗಳ ನಡುವೆ ವಿಮಾನಯಾನ ಸೇವೆ ರದ್ದಾಗಿತ್ತು. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಕ್ಯೂಬಾ ದೇಶಕ್ಕೆ ಪ್ರವಾಸ ತೆರಳುವ ಮೂಲಕ  ಉಭಯ ದೇಶಗಳ ನಡುವೆ ಮತ್ತೆ ಬಾಂಧವ್ಯ ಬೆಸೆಯುವ ಯತ್ನ ಮಾಡಿದ್ದರು. ಅದರ ಫಲಶೃತಿ ಎಂಬಂತೆ ಕಳೆದ ಆಗಸ್ಟ್ 31ರಿಂದಲೇ ವಾಣಿಜ್ಯ ಉದ್ದೇಶದ ವಿಮಾನಗಳು ಕ್ಯೂಬಾ ದೇಶಕ್ಕೆ ಹಾರಾಟ ನಡೆಸುತ್ತಿದ್ದವು. ಆದರೆ ಇದೀಗ  ಸಾಂಪ್ರದಾಯಿಕ ಎದುರಾಳಿ ದೇಶಗಳ ನಡುವೆ 50 ವರ್ಷಗಳ ಬಳಿಕ ನೇರ ಪ್ರಯಾಣಿಕ ವಿಮಾನಯಾನ ಸೇವೆ ಆರಂಭವಾಗಿದೆ.

ಪ್ರಸ್ತುತ ಆರಂಭವಾಗಿರುವ ವಿಮಾನ ಸೇವೆ ಕ್ಯೂಬಾದ ಪ್ರಮುಖ 9 ನಗರಗಳಿಗೆ ವಿಸ್ತಾರವಾಗಿದ್ದು, ಪ್ರತಿನಿತ್ಯ ಸುಮಾರು 110 ವಿಮಾನಗಳು ಕ್ಯೂಬಾಕ್ಕೆ ಹಾರುತ್ತಿವೆ. ಈ ಪೈಕಿ 20 ವಿಮಾನಗಳು ಕ್ಯೂಬಾ ರಾಜಧಾನಿ ಹವಾನಾ ಹಾಗೂ  ಅಮೆರಿಕದ ಮಿಯಾಮಿ ನಡುವೆ ಸಂಚಾರ ನಡೆಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!