ಮಹಿಳಾ ವಿರೋಧಿ ಅಪರಾಧ (ಸಾಂದರ್ಭಿಕ ಚಿತ್ರ) 
ವಿದೇಶ

ಮರ್ಯಾದಾ ಹತ್ಯೆ ವಿರೋಧಿ, ಅತ್ಯಾಚಾರ ವಿರೋಧಿ ಕಾಯ್ದೆಗೆ ಸಿಕ್ತು ಪಾಕ್ ಸಂಸತ್ತಿನ ಅನುಮೋದನೆ

ಮಹತ್ತರ ಬೆಳವಣಿಗೆಯೊಂದರಲ್ಲಿ ಜಿಹಾದಿ ಮೂಲಭೂತವಾದಿಗಳ ಸ್ವರ್ಗ ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ವಿರೋಧಿ ಹಾಗೂ ಅತ್ಯಾಚಾರ ವಿರೋಧ ಕಾಯ್ದೆಯನ್ನು ಗುರುವಾರ ಜಾರಿಗೆ ತರಲಾಗಿದೆ.

ಇಸ್ಲಾಮಾಬಾದ್: ಮಹತ್ತರ ಬೆಳವಣಿಗೆಯೊಂದರಲ್ಲಿ ಜಿಹಾದಿ ಮೂಲಭೂತವಾದಿಗಳ ಸ್ವರ್ಗ ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ವಿರೋಧಿ ಹಾಗೂ ಅತ್ಯಾಚಾರ ವಿರೋಧ ಕಾಯ್ದೆಯನ್ನು ಗುರುವಾರ ಜಾರಿಗೆ ತರಲಾಗಿದೆ.

ಪಾಕಿಸ್ತಾನ ಸಂಸತ್ತಿನಲ್ಲಿ ನಿನ್ನೆ ನಡೆದ ಕಲಾಪದಲ್ಲಿ ಈ ಎರಡು ಪ್ರಮುಖ ಕಾಯ್ದೆಗಳಿಗೆ ಅನುಮೋದನೆ ನೀಡಲಾಗಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸೆನೆಟರ್ ಫರಾತುಲ್ಲಾ ಬಾಬರ್ ಅವರು,  ಕಾಯ್ದೆ ಅವಿರೋಧವಾಗಿ ಅನುಮೋದನೆ ಪಡೆದಿದೆ ಎಂದು ಘೋಷಿಸಿದರು.

ನೂತನ ಕಾಯ್ದೆಗಳ ಅನ್ವಯ ಸಾಮಾನ್ಯ ಕೊಲೆ ಪ್ರಕರಣದ ಆರೋಪಿಗೆ ನೀಡಲಾಗುವ ಶಿಕ್ಷೆಗಿಂತಲೂ ಅಧಿಕ ಪ್ರಮಾಣದ ಶಿಕ್ಷೆಯನ್ನು ಮರ್ಯಾದಾ ಹತ್ಯೆ ಆರೋಪಿಗೆ ನೀಡುವ ಅವಕಾಶವನ್ನು  ನೂತನ ಕಾಯ್ದೆ ಕಲ್ಪಿಸಿದೆ. ಒಂದು ವೇಳೆ ಪ್ರಕರಣ ಸಂಬಂಧ ಆತ ಕಠಿಣ ಶಿಕ್ಷೆಗೆ (ಮರಣ ದಂಡನೆ) ಗುರಿಯಾಗಿದ್ದರೆ ಆತನನ್ನು ಕ್ಷ ಮಿಸುವ ಅಧಿಕಾರ ಸಂತ್ರಸ್ತರ ಕುಟುಂಬಕ್ಕೆ ಮಾತ್ರ  ನೀಡಲಾಗಿದ್ದು, ಕುಟುಂಬ ಕ್ಷಮಿಸಿದರೆ ಆತನ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಿಸಬಹುದಾಗಿದೆ.

ಇನ್ನು ಅತ್ಯಾಚಾರ ವಿರೋಧಿ ಕಾಯ್ದೆಯ ಪ್ರಕಾರ ಯಾವುದೇ ರೀತಿಯ ಅತ್ಯಾಚಾರ ಪ್ರಕರಣವಾಗಿದ್ದರೂ 3 ತಿಂಗಳೊಳಗೆ ವಿಚಾರಣೆ ಮುಕ್ತಾಯವಾಗಿ ತೀರ್ಪು ಘೋಷಣೆಯಾಗಬೇಕು. ತೀರ್ಪಿನ  ವಿರುದ್ಧ 6 ತಿಂಗಳೊಳಗೆ ಮಾತ್ರ ಮೇಲ್ಮನವಿ ಸಲ್ಲಿಸಬಹುದಾಗಿದೆ. ಅಂತೆಯೇ ಪ್ರಕರಣದಲ್ಲಿ ಸಂತ್ರಸ್ಥೆಯೊಂದಿಗೆ ಆರೋಪಿಗೂ ವೈದ್ಯಕೀಯ ಪರೀಕ್ಷೆಯಾಗಬೇಕು ಎಂಬ ಕಾನೂನು  ಸೇರಿಸಲಾಗಿದೆ. ಅಂತೆಯೇ ಸಂತ್ರಸ್ಥರ ಕುಟುಂಬಕ್ಕೆ ಕಾನೂನಿನ ಹಕ್ಕುಗಳ ಬಗ್ಗೆ ಸಂಬಂಧ ಪಟ್ಟ ಠಾಣಾಧಿಕಾರಿಗಳೇ ಮಾಹಿತಿ ನೀಡಬೇಕು ಎಂದು ಕಾನೂನು ಮಾಡಲಾಗಿದೆ.

ವಿಶೇಷ ಪ್ರಕರಣಗಳಾದ ಅಪ್ರಾಪ್ತರ ಅತ್ಯಾಚಾರ, ಮಾನಸಿಕ ಹಾಗೂ ದೈಹಿಕ ನ್ಯೂನ್ಯತೆಗಳ್ಳುಳ್ಳವರ ಮೇಲಿನ ಅತ್ಯಾಚಾರಕ್ಕೂ ಕಠಿಣ ಶಿಕ್ಷೆ ವಿಧಿಸಬಹುದಾಗಿದೆ ಎಂದು ಬಾಬರ್ ತಿಳಿಸಿದ್ದಾರೆ.

ಒಟ್ಟಾರೆ ಜಿಹಾದಿಗಳ ಪಾಲಿನ ಸ್ವರ್ಗವಾಗಿರುವ ಪಾಕಿಸ್ತಾನದಲ್ಲಿ ಪಾಕ್ ಸಂಸತ್ತಿನ ನೂತನ ಕಾಯ್ದೆಗಳು ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂಬುದನ್ನು ಕಾದು  ನೋಡಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT