ಉಗ್ರ ಮುಖಂಡ ಮೌಲಾನಾ ಮಸೂದ್ ಅಜರ್ (ಸಂಗ್ರಹ ಚಿತ್ರ) 
ವಿದೇಶ

ಭಾರತದ ಹೀರೋಯಿಸಂ ಬಾಲಿವುಡ್ ಸಿನಿಮಾಗಳಿಗಷ್ಟೇ ಸೀಮಿತ: ಉಗ್ರ ಮಸೂದ್ ಅಜರ್

ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಭಾರತದ ಹೀರೋಯಿಸಂ ಬಾಲಿವುಡ್ ಸಿನಿಮಾಗಳಿಗಷ್ಟೇ ಸೀಮಿತ ಎಂದು ಜೈಶ್ ಇ ಮಹಮದ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಹೇಳಿದ್ದಾನೆ.

ನವದೆಹಲಿ: ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಭಾರತದ ಹೀರೋಯಿಸಂ ಬಾಲಿವುಡ್ ಸಿನಿಮಾಗಳಿಗಷ್ಟೇ ಸೀಮಿತ ಎಂದು ಜೈಶ್ ಇ ಮಹಮದ್  ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಹೇಳಿದ್ದಾನೆ.

ಉರಿ ಉಗ್ರದಾಳಿ ಕುರಿತಂತೆ ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿ ನೆಲೆಗಳ ಮೇಲೆ ದಾಳಿ ಮಾಡಬಹುದು ಎಂಬ ಹಿನ್ನಲೆಯಲ್ಲಿ ಮಾತನಾಡಿರುವ ಉಗ್ರನಾಯಕ ಈ ಬಗ್ಗೆ  ಆಡಿಯೋ ಟೇಪ್ ಬಿಡುಗಡೆ ಮಾಡಿದ್ದಾನೆ. ಸಂಘಟನೆಯ ಮುಖವಾಣಿ ರಂಗೊನೂರ್ ನ ಆನ್ ಲೈನ್ ತಾಣದಲ್ಲಿ ಬಿಡುಗಡೆ ಮಾಡಿರುವ ಆಡಿಯೋ ಟೇಪ್ ನಲ್ಲಿ ಭಾರತೀಯ ಸೇನೆಯ  ಸಾಮರ್ಥ್ಯವನ್ನು ವ್ಯಂಗ್ಯವಾಡಿರುವ ಮಸೂದ್, ಭಾರತ ನಾಯಕರ ಆಕ್ರೋಶ ಅವರ ಬಾಲಿವುಡ್ ಸಿನಿಮಾಗಳಿಗೇ ಸೀಮಿತ. ತಮ್ಮ ನೆರಳಿಗೆ ತಾವೇ ಹೆದರುವ ಬಾಲಿವುಡ್‌ನ‌ ಹೀರೋಗಳು,  ಚಲನಚಿತ್ರಗಳಲ್ಲಿ ಪಾಕಿಸ್ತಾನವನ್ನು ದುರ್ಬಲ ಎಂದು ತೋರಿಸಿ ತಮ್ಮನ್ನು ತಾವು ಹೀರೋಗಳ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಾರೆ. ಸಿನಿಮಾಗಳಲ್ಲಿ ಹೀರೋಗಳು ಪಾಕಿಸ್ತಾನದೊಳಗೆ ನುಗ್ಗಿ ನಮ್ಮ  ಕ್ಯಾಂಪ್‌ ಗಳನ್ನು ನಾಶಪಡಿಸಿ, ಮುಜಾಹಿದೀನ್‌ಗಳನ್ನು ಕೊಲ್ಲುತ್ತಾರೆ. ಇಷ್ಟೆಲ್ಲ ಆದರೂ ಒಂದೇ ಒಂದು ಗುಂಡು ಕೂಡ ಅವರ ಮೈಗೆ ತಾಕುವುದಿಲ್ಲ. ಆದರೆ ಅವರ ಒಂದೇ ಒಂದು ಗುಂಡು ಇಡೀ  ಮುಜಾಹಿದೀನ್‌ ಗಳನ್ನು ನಾಶಪಡಿಸುತ್ತದೆ.

ಭಾರತದ ಇಂತಹ ಹೀರೋಯಿಸಂ ಚಿತ್ರಗಳಿಗಷ್ಟೇ ಸೀಮಿತ. ಭಾರತೀಯ ಸೇನೆ ಯಾವುದೇ ಕಾರಣಕ್ಕೂ ಪಾಕಿಸ್ತಾನವನ್ನು ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಆ ಸಾಮರ್ಥ್ಯವಿಲ್ಲ  ಎಂದು ವ್ಯಂಗ್ಯವಾಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT