ಮಲಾಲಾ ಯೂಸಫ್ಸೈ 
ವಿದೇಶ

ಪಾಕಿಸ್ತಾನಕ್ಕೆಕೆಟ್ಟ ಹೆಸರು ಬರಲು ಪಾಕಿಸ್ತಾನಿಯರೇ ಕಾರಣ: ಮಲಾಲಾ ಯೂಸಫ್ಸೈ

ಇಸ್ಲಾಂನ ಗೌರವವನ್ನು ಮತ್ತು ಪಾಕಿಸ್ತಾನದ ಗೌರವವನ್ನು ಹಾಳು ಮಾಡಲು ಪಾಕಿಸ್ತಾನೀಯರೇ...

ಲಂಡನ್:ಇಸ್ಲಾಂನ ಗೌರವವನ್ನು ಮತ್ತು ಪಾಕಿಸ್ತಾನದ ಗೌರವವನ್ನು ಹಾಳು ಮಾಡಲು ಪಾಕಿಸ್ತಾನೀಯರೇ ಕಾರಣ ಎಂದು ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್ಸೈ ಹೇಳಿದ್ದಾರೆ.
19 ವರ್ಷದ ಇಂಗ್ಲೆಂಡ್ ಮೂಲದ ಪಾಕಿಸ್ತಾನ ಶಿಕ್ಷಣ ಕಾರ್ಯಕರ್ತೆ ಮಲಾಲಾ ವಿಡಿಯೋ ಸಂದೇಶದಲ್ಲಿ, ಇಂದು ಮಶಾಲ ಖಾನ್ ಸಾವಿನ ಸುದ್ದಿ ಕೇಳಿದೆ. ಈ ಘಟನೆ ಹಿಂದೆ ವ್ಯಾಪಕ ಭಯೋತ್ಪಾದನೆ ಮತ್ತು ಹಿಂಸೆಯಿದೆ. ಅವರ ತಂದೆಯ ಜೊತೆ ನಾನು ಮಾತನಾಡಿದ್ದು ಅವರು ಶಾಂತಿ ಮತ್ತು ತಾಳ್ಮೆಯ ಸಂದೇಶ ನೀಡಿದ್ದಾರೆ. ಅವರ ಮಾತಿಗೆ ನಾನು ಕೃತಜ್ಞಳಾಗಿದ್ದೇನೆ ಎಂದು ಹೇಳಿದ್ದಾರೆ.
ಬೇರೆ ಯಾರೂ ಪಾಕಿಸ್ತಾನ ಮತ್ತು ಇಸ್ಲಾಂನ್ನು ನಾಶಪಡಿಸುತ್ತಿಲ್ಲ,ನಾವೇ ನಮ್ಮ ದೇಶದ ಹೆಸರನ್ನು ಹಾಳು ಮಾಡುತ್ತಿದ್ದೇವೆ. ಇದಕ್ಕೆ ನಾವು ಪಾಕಿಸ್ತಾನಿಯರೇ ಕಾರಣ ಎಂದು ಹೇಳಿದರು.
ಇದು ಮಶಾಲ್ ಖಾನ್ ಅವರ ಅಂತಿಮ ಕಾರ್ಯ ಮಾತ್ರವಲ್ಲ, ನಮ್ಮ ಧರ್ಮಭೋದಕರ ಅಂತಿಮ ಶವ ಸಂಸ್ಕಾರ ಕೂಡ ಹೌದು. ನಾವು ಇಸ್ಲಾಂನ ಬೋಧನೆಗಳನ್ನು ಮರೆತಿದ್ದೇವೆ. ಅದು ಶಾಂತಿ ಮತ್ತು ತಾಳ್ಮೆಯನ್ನು ಬೋಧಿಸುತ್ತದೆ ಎಂದರು.
ಹೀಗೆ ನಾವು ಒಬ್ಬರನ್ನೊಬ್ಬರು ಸಾಯಿಸುತ್ತಾ ಹೋದರೆ ಯಾರೂ ಸುರಕ್ಷಿತವಾಗಿರುವುದಿಲ್ಲ. ಎಂದು ಮಲಾಲಾ ಹೇಳಿದರು.
ಖೈಬರ್ ನ ಅಬ್ದುಲ್ ಕಲ್ ವಾಲಿ ಖಾನ್ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಯಾದ ಮಶಾಲ್ ಖಾನ್ ನನ್ನು ಅದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ಕ್ರೂರವಾಗಿ ಗುಂಡಿಕ್ಕಿ ಸಾಯಿಸಿದೆ. ಧರ್ಮವಿರೋಧಿ ವಿಷಯವನ್ನು ಆನ್ಲೈನ್ ನಲ್ಲಿ ಮತ್ತು ಅಹ್ಮದಿ ನಂಬಿಕೆಯ ಪ್ರಚಾರವನ್ನು ಮಾಡುತ್ತಿದ್ದ ಸಂಶಯದ ಮೇಲೆ ವಿದ್ಯಾರ್ಥಿಗಳು ಮಶಾಲ್ ಖಾನ್ ನನ್ನು ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT