ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ 
ವಿದೇಶ

ಇಮ್ರಾನ್ ಖಾನ್'ರಿಂದ ಅಶ್ಲೀಲ ಸಂದೇಶ ರವಾನೆ: ಬೇಸತ್ತ ಪಿಟಿಐ ಶಾಸಕಿ ರಾಜೀನಾಮೆ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ವಿರುದ್ಧ ತೆಹರೀಕ್-ಎ-ಇನ್ಸಾಫ್ ಪಕ್ಷದ ಮಹಿಳಾ ಶಾಸಕಿಯೊಬ್ಬರು ಅಶ್ಲೀಲ ಸಂದೇಶ ರವಾನಿಸಿದ...

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ವಿರುದ್ಧ ತೆಹರೀಕ್-ಎ-ಇನ್ಸಾಫ್ ಪಕ್ಷದ ಮಹಿಳಾ ಶಾಸಕಿಯೊಬ್ಬರು ಅಶ್ಲೀಲ ಸಂದೇಶ ರವಾನಿಸಿದ ಆರೋಪ ಮಾಡಿದ್ದಾರೆ. 
ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್ ಖಾನ್ ಅವರು ಅಶ್ಲೀಲ ಸಂದೇಶ ರವಾನಿಸುತ್ತಿದ್ದಾರೆಂದು ಶಾಸಕಿ ಆಯೆಷಾ ಗುಲಾಲೈ ಆರೋಪ ಮಾಡಿದ್ದು. ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. 
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಆಯೆಷಾ ಗುಲಾಲೈ ಅವರು, ಇಮ್ರಾನ್ ಖಾನ್ ಅವರು ನನಗೆ ಕಳುಹಿಸಿರುವ ಅಶ್ಲೀಲ ಮೊಬೈಲ್ ಸಂದೇಶಗಳಿಂದ ಬೇಸತ್ತು ನಾನು ಅವರ ಪಕ್ಷದ ಶಾಸಕಿಯ ಸ್ಥಾನವನ್ನು ತ್ಯಜಿಸಲು ನಿರ್ಧರಿಸಿದ್ದೇನೆಂದು ಹೇಳಿದ್ದಾರೆ. 
2013ರ ಅಕ್ಟೋಬರ್ ತಿಂಗಳಿನಲ್ಲಿ ಇಮ್ರಾನ್ ಖಾನ್ ಅವರಿಂದ ಮೊದಲ ಬಾರಿಗೆ ನನ್ನ ಮೊಬೈಲ್ ಗೆ ಅಶ್ಲೀಲ ಸಂದೇಶ ಬಂದಿತ್ತು. ಸಂದೇಶಗಳು ಬೇರಾರಿಗೂ ತಿಳಿಯಬಾರದು ಹಾಗೂ ಅಳಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇತರೆ ಮಹಿಳೆಯರು ಬ್ಲ್ಯಾಕ್'ಬೆರ್ರಿ ಮೊಬೈಲ್ ಗಳನ್ನೇ ಬಳಸುವಂತೆ ಇಮ್ರಾನ್ ತಾಕೀತು ಮಾಡುತ್ತಿದ್ದರು. ಅಶ್ಲೀಲ ಸಂದೇಶ ರವಾನಿಸಿರುವುದರ ಬಗ್ಗೆ ಮಾಹಿತಿ ಬೇಕಿದ್ದರೆ ಇಮ್ರಾನ್ ಅವರ ಬಳಿಯಿರುವ ಬ್ಲ್ಯಾಕ್'ಬೆರ್ರಿ ಮೊಬೈಲ್ ನ್ನು ಪರಿಶೀಲಿಸಿ. ನಂತರ ಎಲ್ಲವೂ ನಿಮಗೇ ತಿಳಿಯುತ್ತದೆ. 
ಗೌರವಯುತವಾಗಿ ಬದುಕುತ್ತಿರುವವರು ಯಾರೂ ಇದನ್ನು ಸಹಿಸಲು ಸಾಧ್ಯವಿಲ್ಲ. ಇಷ್ಟು ದಿನ ನಾನು ಮಾನಸಿಕ ಹಿಂಸೆಯನ್ನು ಅನುಭವಿಸಿದ್ದೇ. ಇದೇ ಕಾರಣಕ್ಕೆ ನಾನು ಪಕ್ಷಕ್ಕೆ ರಾಜೀನಾಮೆಯನ್ನು ನೀಡುತ್ತಿದ್ದೇನೆ. ನನ್ನಂತೆಯೇ ಇತರೆ ಮಹಿಳೆಯರೂ ಕೂಡ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಇಮ್ರಾನ್ ಖಾನ್'ಗೆ ತನ್ನನ್ನು ತಾನು ನಿಯಂತ್ರಿಕೊಳ್ಳುವುದು ತಿಳಿಯುತ್ತಿಲ್ಲ. ಅವರು ಮಾನಸಿಕ ರೋಗದಿಂದ ಬಳಲುತ್ತಿದ್ದು, ಪ್ರತಿಭಾವಂತ ವ್ಯಕ್ತಿಗಳನ್ನು ಅವರು ಸಹಿಸುವುದಿಲ್ಲ ಎಂದು ಗುಲಾಲೈ ಆರೋಪಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಾರತೀಯ ಸೇನೆ ಸಹ ಮೇಲ್ಜಾತಿಯವರಿಂದ ನಿಯಂತ್ರಿಸಲ್ಪಡುತ್ತದೆ': ರಾಹುಲ್ ಗಾಂಧಿಯಿಂದ ಹೊಸ ವಿವಾದ

ರಾಜ್ಯದ ಜನಸಂಖ್ಯೆಯ ಶೇ. 60 ಕ್ಕಿಂತ ಹೆಚ್ಚು ಜನರು 35 ರ ವಯೋಮಾನದವರು- ಸಿಎಂ ಸಿದ್ದರಾಮಯ್ಯ

ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ನಿರ್ಬಂಧ: ತಡೆಯಾಜ್ಞೆ ವಿರೋಧಿಸಿ ಸರ್ಕಾರದ ಮೇಲ್ಮನವಿ; 'ಆದೇಶ ಕಾಯ್ದಿರಿಸಿದ' ಹೈಕೋರ್ಟ್

ಏಷ್ಯಾ ಕಪ್ ವಿವಾದ: ಪಾಕ್ ಕ್ರಿಕೆಟಿಗ ಹ್ಯಾರಿಸ್ ರೌಫ್‌ಗೆ ಐಸಿಸಿ ಕಠಿಣ ಶಿಕ್ಷೆ, ಸೂರ್ಯಕುಮಾರ್ ಯಾದವ್‌ಗೆ ದಂಡ

ಭಾರತ ಸದ್ಯದಲ್ಲೇ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ- ಕೇಂದ್ರ ಹಣಕಾಸು ಸಚಿವೆ

SCROLL FOR NEXT