ಒಬಾಮ-ನರೇಂದ್ರ ಮೋದಿ 
ವಿದೇಶ

ಪ್ರಧಾನಿ ಕಾರ್ಯಾಲಯ-ಶ್ವೇತ ಭವನ ನಡುವಿನ ಹಾಟ್​ಲೈನ್​ ಜ.20 ರ ನಂತರವೂ ಮುಂದುವರಿಕೆ!

ಭಾರತದ ಪ್ರಧಾನಿ ಅಮೆರಿಕ ಅಧ್ಯಕ್ಷರ ನಡುವೆ ನೇರ ದೂರವಾಣಿ ಸಂಪರ್ಕ ಹಾಟ್ ಲೈನ್ ಜ.20 ರ ನಂತರ ಅಂದರೆ ಅಮೆರಿಕದ ನೂತನ ಅಧ್ಯಕ್ಷರ ಪದಗ್ರಹಣದ ಬಳಿಕವೂ ಮುಂದುವರೆಯಲಿದೆ ಎಂದು...

ವಾಷಿಂಗ್ ಟನ್: ಭಾರತದ ಪ್ರಧಾನಿ ಅಮೆರಿಕ ಅಧ್ಯಕ್ಷರ ನಡುವೆ ನೇರ ದೂರವಾಣಿ ಸಂಪರ್ಕ ಹಾಟ್ ಲೈನ್ ಜ.20 ರ ನಂತರ ಅಂದರೆ ಅಮೆರಿಕದ ನೂತನ ಅಧ್ಯಕ್ಷರ ಪದಗ್ರಹಣದ ಬಳಿಕವೂ ಮುಂದುವರೆಯಲಿದೆ ಎಂದು ಅಮೆರಿಕ ಅಧ್ಯಕ್ಷರ ಕಚೇರಿ ಸ್ಪಷ್ಟಪಡಿಸಿದೆ. 
2015 ರಲ್ಲಿ ಭಾರತ-ಅಮೆರಿಕದ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರ ದೂರವಾಣಿ ಸಂಪರ್ಕ ಸಾಧಿಸುವ ಹಾಟ್ ಲೈನ್ ಆರಂಭಿಸಿದ್ದರು. ಬರಾಕ್ ಒಬಾಮ ಅವರ 8 ವರ್ಷಗಳ ಆಡಳಿತದ ಅವಧಿಯಲ್ಲಿ ಹೊಸತಾಗಿ ಪ್ರಾರಂಭವಾದ ಏಕೈಕ ಹಾಟ್ ಲೈನ್ ಭಾರತದ ಪ್ರಧಾನಿಯೊಂದಿಗಿನದ್ದು ಎಂಬುದು ವಿಶೇಷವಾಗಿದ್ದು, ಈ ಸೇವೆ ಅಮೆರಿಕದ ನೂತನ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅವಧಿಯಲ್ಲೂ ಮುಂದುವರೆಯಲಿದೆ ಎಂದು ಶ್ವೇತ ಭವನ ತಿಳಿಸಿದೆ. 
2015 ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೇಳೆ ಒಬಾಮ ಭಾರತ-ಅಮೆರಿಕ ನಡುವೆ ಹಾಟ್​ಲೈನ್ ಸೇವೆ ಆರಂಭಿಸಲು ನಿರ್ಧರಿಸಿದ್ದರು. ಹಾಟ್​ಲೈನ್ ಎರಡು ರಾಷ್ಟ್ರಗಳ ಮುಖ್ಯಸ್ಥರ ನಡುವೆ ಸಂವಹನ ನಡೆಸಲು ಅತ್ಯಂತ ಸುರಕ್ಷಿತ ಟೆಲಿಫೋನ್ ಸಂಪರ್ಕವಾಗಿದೆ. ಸಮಸ್ಯೆಗೆ ತಕ್ಷಣವೇ ಸ್ಪಂದಿಸಲು ಈ ವ್ಯವಸ್ಥೆ ನೆರವಾಗುತ್ತದೆ. ರಷ್ಯಾ, ಬ್ರಿಟನ್, ಚೀನಾದ ಜತೆಗೆ ಅಮೆರಿಕ ಹಾಟ್​ಲೈನ್ ಸೇವೆ ಹೊಂದಿದ್ದು, ಈ ಸೇವೆ ಪಡೆದ ನಾಲ್ಕನೇ ರಾಷ್ಟ್ರ ಭಾರತವಾಗಿದೆ.
ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಹಾಟ್ ಲೈನ್ ಮುಂದುವರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಾಟ್ ಲೈನ್ ಎಂಬುದು ಕೇವಲ ಒಬ್ಬ ಅಧ್ಯಕ್ಷರ ಅವಧಿಯ ಆಡಳಿತಕ್ಕೆ ಸಂಬಂಧಿಸಿದ್ದಲ್ಲ, ಎಷ್ಟೇ ಅಧ್ಯಕ್ಷರುಗಳು ಬದಲಾದರೂ ಹಾಟ್ ಲೈನ್ ಮುಂದುವರೆಯುತ್ತದೆ. ಒಂದು ವೇಳೆ ಹಾಟ್ ಲೈನ್ ನ್ನು ಮುಂದುವರಿಸದೇ ಇದ್ದಲ್ಲಿ ಅದು ಅತ್ಯಂತ ಅಚ್ಚರಿಯ ಸಂಗತಿಯಾಗಿರಲಿದೆ ಎಂದು ಹೇಳಿದ್ದಾರೆ. 
2015 ರಲ್ಲಿ ನಡೆದ ಜಿ–20 ಶೃಂಗಸಭೆ, ಪೂರ್ವ ಏಷ್ಯಾ ಶೃಂಗಸಭೆ ಮತ್ತು ಪ್ಯಾರಿಸ್‌ ಹವಾಮಾನ ವೈಪರೀತ್ಯ ಕುರಿತ ಸಮ್ಮೇಳನಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ನರೇಂದ್ರ ಮೋದಿ ಮೊದಲ ಬಾರಿಗೆ ಹಾಟ್ ಲೈನ್ ಮೂಲಕ ಮಾತುಕತೆ ನಡೆಸಿ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಹಾಗೂ ಜಿ–20 ಶೃಂಗಸಭೆಯಲ್ಲಿ ಚರ್ಚೆ ಮಾಡಲಿರುವ ವಿಷಯಗಳ ಕುರಿತು ಚರ್ಚಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT