ಸಂಗ್ರಹ ಚಿತ್ರ 
ವಿದೇಶ

ಸಿರಿಯಾದಲ್ಲೂ ಇಸಿಸ್ ಗೆ ಭಾರಿ ಹಿನ್ನಡೆ, ಐತಿಹಾಸಿಕ ಪಲ್ಮೈರಾ ನಗರ ವಶಪಡಿಸಿಕೊಂಡ ಸೇನೆ

ಅಮೆರಿಕ ನೇತೃತ್ವದ ಮೈತ್ರಿಪಡೆಗಳ ನೆರವಿನೊಂದಿಗೆ ಅತ್ತ ಇರಾಕ್ ಸೇನೆ ಇಸಿಸ್ ಉಗ್ರಗಾಮಿ ಸಂಘಟನೆಯ ಹುಟ್ಟಡಗಿಸುತ್ತಿದ್ದಂತೆಯೇ ಇತ್ತ ಸಿರಿಯಾದಲ್ಲೂ ಅದೇ ಬೆಳವಣಿಗೆ ಕಂಡುಬಂದಿದೆ.

ಬೈರುತ್: ಅಮೆರಿಕ ನೇತೃತ್ವದ ಮೈತ್ರಿಪಡೆಗಳ ನೆರವಿನೊಂದಿಗೆ ಅತ್ತ ಇರಾಕ್ ಸೇನೆ ಇಸಿಸ್ ಉಗ್ರಗಾಮಿ ಸಂಘಟನೆಯ ಹುಟ್ಟಡಗಿಸುತ್ತಿದ್ದಂತೆಯೇ ಇತ್ತ ಸಿರಿಯಾದಲ್ಲೂ ಅದೇ ಬೆಳವಣಿಗೆ ಕಂಡುಬಂದಿದೆ.

ಕೆಲವೇ ತಿಂಗಳಗಳ ಹಿಂದಷ್ಟೇ ಇಸ್ಲಾಮಿಕ್ ಸ್ಟೇಟ್ ಉಗ್ರರು ವಶಪಡಿಸಿಕೊಂಡಿದ್ದ ಸಿರಿಯಾದ ಐತಿಹಾಸಿಕ ನಗರ ಪಲ್ಮೈರಾವನ್ನು ಸಿರಿಯಾ ಸೇನೆ ಮರಳಿ ವಶಕ್ಕೆ ಪಡೆದಿದೆ. ಪ್ರಮುಖವಾಗಿ ಸಿರಿಯಾಗೆ ರಷ್ಯಾ ವಾಯುಸೇನೆ ನೀಡಿದ್ದ  ಬೆಂಬಲದಿಂದಾಗಿ ಸಿರಿಯಾ ಸೇನೆ ಪಲ್ಮೈರಾ ನಗರವನ್ನು ಮರಳಿ ತನ್ನ ವಶಕ್ಕೆ ಪಡೆದಿದೆ.ಕಳೆದೊಂದು ವಾರದಿಂದ ರಷ್ಯಾ ವಾಯುಸೇನೆಯೊಂದಿಗೆ ಸೇರಿ ಸಿರಿಯಾ ಸೈನಿಕರು ಪಲ್ಮೈರಾ ಸಮೀಪದ ಮರುಭೂಮಿಯಲ್ಲಿ ಭೀಕರ  ಕಾಳಗ ನಡೆಸಿದ್ದರು. ಈ ವೇಳೆ ರಷ್ಯಾದ ವೈಮಾನಿಕ ದಾಳಿಯಲ್ಲಿ ಹಲವಾರು ಇಸಿಸ್ ಉಗ್ರರು ಸಾವನ್ನಪ್ಪಿದ್ದರು.

ಇದರ ಬೆನ್ನಲ್ಲೇ ಅತ್ತ ಇರಾಕ್ ನಲ್ಲಿ ಉಗ್ರ ಸಂಘಟನೆಗೆ ಸೋಲಾಗಿರುವುದು ಉಗ್ರರ ಧೈರ್ಯ ಉಡುಗಿಹೋಗುವಂತೆ ಮಾಡಿದ್ದು, ಪ್ರಮುಖವಾಗಿ ಪಲ್ಮೈರಾ ಕೈತಪ್ಪಲು ರಷ್ಯಾ ವಾಯುಸೇನೆಯ ದಾಳಿಯೇ ಕಾರಣ ಎಂದು  ಹೇಳಲಾಗುತ್ತಿದೆ. ಇನ್ನು ಪಲ್ಮೈರಾ ನಗರವನ್ನು ಮರಳಿ ವಶಕ್ಕೆ ಪಡೆದ ಸುದ್ದಿಯನ್ನು ರಷ್ಯಾದ ರಕ್ಷಣಾ ಸಚಿವ ಸೆರ್ಗೈಶೌಯ್ಗು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಿಳಿಸಿದ್ದಾರೆ.

ಇನ್ನು ಪಲ್ಮೈರಾನಗರದಲ್ಲಿ ವೈದ್ಯಕೀಯ ವ್ಯವಸ್ಥೆ ಒದಗಿಸುತ್ತಿರುವ ಸ್ವಯಂ ಸೇವಾ ಕಾರ್ಯಕರ್ತರು ನೀಡಿರುವ ಮಾಹಿತಿಯಂತೆ ಪಲ್ಮೈರಾ ನಗರದಲ್ಲಿದ್ದ ಬಹುತೇಕ ಉಗ್ರರು ನಗರದಿಂದ ಕಾಲ್ಕಿತ್ತಿದ್ದಾರೆಯಾದರೂ, ನಗರಕ್ಕೆ  ಸಮೀಪದಲ್ಲೇ ಇರುವ ಮರುಭೂಮಿಯಲ್ಲಿ ಅಡಗಿಕುಳಿತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಮರುಭೂಮಿಯಲ್ಲೂ ಕಾರ್ಯಾಚರಣೆ ನಡೆಸಲು ಸಿರಿಯಾ ಸೇನೆ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಪಲ್ಮೈರಾ  ಮಾದರಿಯಲ್ಲೇ ಅಮೆರಿಕ ನೇತೃತ್ವ ಮಿತ್ರ ಪಡೆಗಳು ಇಸಿಸ್ ಉಗ್ರ ವಶದಲ್ಲಿದ್ದ ಮೊಸುಲ್ ಮತ್ತು ರಾಕಾ ನಗರಗಳನ್ಮು ವಶಕ್ಕೆ ಪಡೆದಿದ್ದವು.

2015ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ಐತಿಹಾಸಿಕ ಪಲ್ಮೈರಾ ನಗರವನ್ನು ವಶಕ್ಕೆ ಪಡೆದಿದ್ದ ಜಿಹಾದಿಗಳು ಅಲ್ಲಿನ ಐತಿಹಾಸಿಕ ದೇವಾಲಯಗಳನ್ನು ಲೂಟಿ ಮಾಡಿದ್ದರು. ಅಲ್ಲದೆ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿದ್ದ  ಐತಿಹಾಸಿಕ ದೇವಾಲಯಕ್ಕೂ ಹಾನಿ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ