ಸಂಗ್ರಹ ಚಿತ್ರ 
ವಿದೇಶ

ಪಾಕ್ ಗೆ ಮತ್ತೆ ಹಿನ್ನಡೆ: ಚಾಬಹಾರ್​ ಮೂಲಕ ಅಫ್ಘಾನಿಸ್ತಾನ ತಲುಪಿದ ಭಾರತದ ಗೋಧಿ

ವಿಶ್ವ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗವಾಗಿದ್ದು, ಭಾರತದ ಗೋಧಿ ಚಾಬಹಾರ್ ಬಂದರು ಮೂಲಕ ಆಫ್ಘಾನಿಸ್ಥಾನ ತಲುಪಿದೆ.

ನವದೆಹಲಿ: ವಿಶ್ವ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗವಾಗಿದ್ದು, ಭಾರತದ ಗೋಧಿ ಚಾಬಹಾರ್ ಬಂದರು ಮೂಲಕ ಆಫ್ಘಾನಿಸ್ಥಾನ ತಲುಪಿದೆ.
ಇರಾನ್ ನೊಂದಿಗಿನ ಸೌಹಾರ್ಧ ಸಂಬಂಧ ಮತ್ತು ಒಪ್ಪಂದದ ಅನ್ವಯ ಭಾರತ ಮಾಡಿಕೊಂಡಿದ್ದ ಚಾಬಹಾರ್ ಬಂದರು ಒಪ್ಪಂದ ಇದೀಗ ಕಾರ್ಯಾರಂಭ ಮಾಡಿದ್ದು, ಇರಾನ್‌ನ ಚಾಬಹಾರ್‌ ಬಂದರು ಮುಖೇನ ಭಾರತ ರಫ್ತು  ಮಾಡಿದ್ದ ಗೋಧಿ ಇದೀಗ ಆಫ್ಘಾನಿಸ್ತಾನ ತಲುಪಿದೆ. ಕಳೆದ ಅಕ್ಟೋಬರ್‌ 29ರಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಸಲಾಹುದ್ದೀನ್‌ ರಬ್ಬಾನಿ ವಿಡಿಯೋ ಕಾನ್ಫರೆನ್ಸ್‌  ಮೂಲಕ ಹೊಸ ಮಾರ್ಗದ ಮೂಲಕ ರಫ್ತು ಮಾಡುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು.
ಚಾಲನೆ ನೀಡಿದ ನಂತರ ಭಾರತ ಮೊದಲ ಬಾರಿಗೆ ಗೋಧಿಯನ್ನ ಕರಾಚಿ ಮಾರ್ಗದ ಬದಲಾಗಿ ಇರಾನ್ ​ನ ಚಾಬಹಾರ್ ಬಂದರು ಮೂಲಕ ರಫ್ತು ಮಾಡಿತ್ತು. ಇದೀಗ ಈ ಗೋಧಿ ಆಫ್ಘಾನಿಸ್ತಾನ ತಲುಪಿದ್ದು, ಆಫ್ಘಾನಿಸ್ತಾನದ  ಜರಂಜ್ ನಲ್ಲಿ ಭಾರತ ರವಾನಿಸಿದ್ದ ಗೋಧಿ ತುಂಬಿದ್ದ ಸರಕು ಸಾಗಾಣಿಕಾ ನೌಕೆ ಸುರಕ್ಷಿತವಾಗಿ ಬಂದು ತಲುಪಿದೆ. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಮನಪ್ರೀತ್ ವೋಹ್ರಾ ಅವರು, ಮೊದಲ ಗೋದಿ ಶಿಪ್ ಮೆಂಟ್  ಆಫ್ಘಾನಿಸ್ತಾನಜ ಜರಂಜ್ ಗೆ ಆಗಮಿಸಿದ್ದು, ಇದು ತುಂಬಾ ಹೆಮ್ಮೆಯ ವಿಚಾರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಆ ಮೂಲಕ ಪಾಕಿಸ್ತಾನಕ್ಕೆ ಪಾಠ ಕಲಿಸುವ ಭಾರತದ ಮೊದಲ ಮಾಸ್ಟರ್ ಪ್ಲಾನ್‌ ವರ್ಕೌಟ್‌ ಆಗಿದೆ. ಇದರಿಂದ ಭವಿಷ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ದೇಶಗಳ ಸಂಬಂಧ ಮತ್ತಷ್ಟು ಉತ್ತಮಗೊಳ್ಳಲಿದ್ದು, ಪಾಕಿಸ್ತಾನದ ಆರ್ಥಿಕ  ಸಂಪನ್ಮೂಲಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO Summit: ಒಂದೇ ವೇದಿಕೆಯಲ್ಲಿ ಚೀನಾ- ಭಾರತ- ರಷ್ಯಾ; ಕೆರಳಿದ Trump ಭಾರತದ ಬಗ್ಗೆ ಹೇಳಿದ್ದೇನು?

ಎಲ್ಲರನ್ನೂ ಕಾಯಿಸುತ್ತಿದ್ದ ಪುಟಿನ್ ಪ್ರಧಾನಿ ಮೋದಿಗಾಗಿ 10 ನಿಮಿಷಗಳ ಕಾಲ ಕಾರಿನಲ್ಲಿ ಕಾದು ಕುಳಿತ್ತಿದ್ದರು, Video!

ಧರ್ಮಸ್ಥಳದ ವಿರುದ್ಧ ಬಿಜೆಪಿಯಿಂದಲೇ ಷಡ್ಯಂತ್ರ: ಡಿಕೆ ಶಿವಕುಮಾರ್

ಸರ್ಕಾರಿ ಬಂಗಲೆ ಖಾಲಿ ಮಾಡಿದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್!

ಸೌಜನ್ಯ ಹೆಸರು ಹೇಳಿ ದುಡ್ಡು ಮಾಡಿದೆ ಎಂದು ನಿಮ್ಮ ಪಕ್ಷದವರೇ ಟೀಕಿಸಿದರು: ವಿಜಯೇಂದ್ರಗೆ ಸೌಜನ್ಯ ತಾಯಿ ತರಾಟೆ

SCROLL FOR NEXT