ಹಫೀಜ್ ಸಯೀದ್ 
ವಿದೇಶ

ಪಾಕ್ ವಿದೇಶಾಂಗ ಸಚಿವರ ವಿರದ್ಧ ರೂ.10 ಕೋಟಿ ಮಾನನಷ್ಟ ಮೊಕದ್ದೆ ಹಾಕಿದ ಹಫೀಜ್ ಸಯೀದ್

'ಅಮೆರಿಕದ ಪ್ರಿಯ ವ್ಯಕ್ತಿ' ಎಂದು ಕರೆದ ಪಾಕಿಸ್ತಾನ ವಿದೇಶಾ ಸಚಿವ ಖವಾಜಾ ಆಫಿಸ್ ವಿರುದ್ಧ ಮುಂಬೈ ಉಗ್ರರ ದಾಳಿ ಪ್ರಕರಣದ ಪ್ರಮುಖ ರುವಾರಿ ಹಫೀಜ್ ಸಯೀದ್ ರೂ.10 ಕೋಟಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲು ನಿರ್ಧರಿಸಿದ್ದಾರೆಂದು...

ಲಾಹೋರ್: 'ಅಮೆರಿಕದ ಪ್ರಿಯ ವ್ಯಕ್ತಿ' ಎಂದು ಕರೆದ ಪಾಕಿಸ್ತಾನ ವಿದೇಶಾ ಸಚಿವ ಖವಾಜಾ ಆಫಿಸ್ ವಿರುದ್ಧ ಮುಂಬೈ ಉಗ್ರರ ದಾಳಿ ಪ್ರಕರಣದ ಪ್ರಮುಖ ರುವಾರಿ ಹಫೀಜ್ ಸಯೀದ್ ರೂ.10 ಕೋಟಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲು ನಿರ್ಧರಿಸಿದ್ದಾರೆಂದು ಭಾನುವಾರ ತಿಳಿದುಬಂದಿದೆ. 
ಪಾಕಿಸ್ತಾನದ ನೆಲದಿಂದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕೆಂದು ಒತ್ತಾಯಿಸುವ ಅಮೆರಿಕಕ್ಕೆ, 20-30 ವರ್ಷಗಳ ಹಿಂದೆ ಇದೇ ಭಯೋತ್ಪಾದಕರು ಪ್ರಿಯರಾಗಿದ್ದರು ಎಂಬ ಅರ್ಥದಲ್ಲಿ ಈ ಹಿಂದೆ ಆಸೀಫ್ ಅವರು ಹೇಳಿದ್ದರು. 
ಆಸೀಫ್ ಅವರ ಈ ಹೇಳಿಕೆ ಉಗ್ರ ಹಫೀಜ್ ಸಯೀದ್ ತೀವ್ರ ಕೆಂಡಾಮಂಡಲಗೊಂಡಿದ್ದು, ಸಯೀದ್ ಪರ ವಕೀಲ ಎ.ಕೆ. ಡೋಗರ್ ಅವರು ಪಾಕಿಸ್ತಾನ ವಿದೇಶಾಂಗ ಸಚಿವರ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆಂದು ವರದಿಗಳು ತಿಳಿಸಿವೆ. 
ಹಫೀಜ್ ಸಯೀದ್ ವಿರುದ್ಧ ನಮ್ಮ ದೇಶದ ವಿದೇಶಾಂಗ ಸಚಿವರು ಮಾತನಾಡಿರುವುದನ್ನು ಕೇಳಿ ಬಹಳ ಆಘಾತವಾಯಿತು. ವಿದೇಶಾಂಗ ಸಚಿವರ ನಿಂದನಾತ್ಮಕ ಭಾಷೆಯನ್ನು ಬಳಕೆ ಮಾಡಿದ್ದಾರೆ. ಹಫೀಜ್ ಪ್ರವಾದಿಗಳ ಆಜ್ಞೆಗಳನ್ನು ಅನುಸರಿಸುವ ದೇಶಭಕ್ತಿಯುಳ್ಳ ಇಸ್ಲಾಮ ಧರ್ಮದ ಪ್ರೀತಿಯುತ ಮುಸ್ಲಿಂ ವ್ಯಕ್ತಿಯಾಗಿದ್ದಾರೆ. ಆಸೀಫ್ ಅವರ ಹೇಳಿಕೆಯಿಂದ ಮಾನನಷ್ಟವಾಗಿದ್ದು, ಪಾಕಿಸ್ತಾನ ದಂಡ ಸಂಹಿತೆ 500ರ ಅಡಿಯಲ್ಲಿ ಸಚಿಚವರಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬೇಕು ಎಂದು ಡೋಗರ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT