ಸಂಗ್ರಹ ಚಿತ್ರ 
ವಿದೇಶ

ಬಿಳಿಯರ ಪ್ರಾಬಲ್ಯ, ನವ ನಾಝಿವಾದ, ವರ್ಣಭೇದ ನೀತಿಗೆ ಅವಕಾಶವಿಲ್ಲ: ಇವಾಂಕಾ ಟ್ರಂಪ್

ಬಿಳಿಯರ ಪ್ರಾಬಲ್ಯ, ವರ್ಣಭೇದ ನೀತಿ ಮತ್ತು ನವ ನಾಝಿವಾದಕ್ಕೆ ಅಮೆರಿಕದಲ್ಲಿ ಅವಕಾಶವಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಹಾಗೂ ಶ್ವೇತಭವನದ ಸಲಹೆಗಾರ್ತಿ ಇವಾಂಕಾ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ವಾಷಿಂಗ್ಟನ್: ಬಿಳಿಯರ ಪ್ರಾಬಲ್ಯ, ವರ್ಣಭೇದ ನೀತಿ ಮತ್ತು ನವ ನಾಝಿವಾದಕ್ಕೆ ಅಮೆರಿಕದಲ್ಲಿ ಅವಕಾಶವಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಹಾಗೂ ಶ್ವೇತಭವನದ ಸಲಹೆಗಾರ್ತಿ ಇವಾಂಕಾ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ವರ್ಜೀನಿಯಾದ ಚಾರ್ಲೊಟ್ಸವಿಲ್ ನಲ್ಲಿ ಬಿಳಿಯರ ಪ್ರಾಬಲ್ಯ ಪ್ರತಿಪಾದಕರು ನಡೆಸಿದ ರ್ಯಾಲಿಯಿಂದಾಗಿ ನಡೆದ ಅರಾಜಕತೆಯ ಮೊದಲ ವಾರ್ಷಿಕೋತ್ಸವ ಸಂದರ್ಭವನ್ನು ಹಿನ್ನೆಲೆಯಾಗಿಟ್ಟುಕೊಂಡು ಇವಾಂಕಾ ಟ್ರಂಪ್ ಟ್ವೀಟ್ ಮಾಡಿದ್ದು, ಬಿಳಿಯರ ಪ್ರಾಬಲ್ಯ, ವರ್ಣಭೇದ ನೀತಿ ಮತ್ತು ನವ ನಾಝಿವಾದಕ್ಕೆ ಅಮೆರಿಕದಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾರೆ.
'ಒಂದು ವರ್ಷದ ಹಿಂದೆ ಚಾರ್ಲೊಟ್ಸವಿಲ್ ನಲ್ಲಿ ದ್ವೇಷ, ವರ್ಣಭೇದ ನೀತಿ, ಧಾರ್ಮಿಕ ಅಂಧಃಶ್ರದ್ಧೆ ಮತ್ತು ಹಿಂಸಾಚಾರದ ಘಟನೆ ನಡೆದಿತ್ತು. ಅಮೆರಿಕನ್ನರು ಸ್ವಾತಂತ್ರ್ಯ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ವೈವಿಧ್ಯಮಯ ಅಭಿಪ್ರಾಯವನ್ನು ಸಂರಕ್ಷಿಸುತ್ತಾ ಬಂದಿದ್ದಾರೆ. ಇಂಥ ಸ್ಥಳದಲ್ಲಿ ಬಿಳಿಯರ ಪ್ರಾಬಲ್ಯ, ವರ್ಣಭೇದ ನೀತಿ ಮತ್ತು ನವ ನಾಜಿವಾದಕ್ಕೆ ಅವಕಾಶವಿಲ್ಲ ಎಂದು ಇವಾಂಕಾ ಟ್ವೀಟ್ ಮಾಡಿದ್ದಾರೆ.
ಅಲ್ಲದೆ 'ದ್ವೇಷ, ವರ್ಣಭೇದ ನೀತಿ ಮತ್ತು ಹಿಂಸೆಯ ಮೂಲಕ ಎಲ್ಲರೂ ಕಣ್ಣೀರಿಡುವಂತೆ ಮಾಡುವ ಬದಲು ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ನೆರವಾಗುವ ಮೂಲಕ ಸಮುದಾಯವನ್ನು ಬಲಗೊಳಿಸೋಣ' ಎಂದು ಸಲಹೆ ನೀಡಿದ್ದಾರೆ.
ಇನ್ನು ಚಾರ್ಲೊಟ್ಸವಿಲ್ ನಂಥದ್ದೇ ರ್ಯಾಲಿಯನ್ನು ಭಾನುವಾರ ಶ್ವೇತಭವನದ ಹೊರಗೆ ಹಮ್ಮಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇವಾಂಕಾ ಹೇಳಿಕೆ ಮಹತ್ವ ಪಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ