ಸಂಗ್ರಹ ಚಿತ್ರ 
ವಿದೇಶ

ತಂತ್ರಜ್ಞಾನವನ್ನು ಅಭಿವೃದ್ಧಿಗೆ ಬಳಕೆ ಮಾಡಿ, ವಿನಾಶಕ್ಕಲ್ಲ: ಪ್ರಧಾನಿ ಮೋದಿ

ತಂತ್ರಜ್ಞಾನಗಳನ್ನು ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬೇಕೇ ಹೊರತು ವಿನಾಶಕ್ಕಲ್ಲ ಎಂದು ಪ್ರಧಾನಿ ಮೋದಿ ದುಬೈ ನಲ್ಲಿ ಹೇಳಿದ್ದಾರೆ.

ಅಬುದಾಬಿ: ತಂತ್ರಜ್ಞಾನಗಳನ್ನು ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬೇಕೇ ಹೊರತು ವಿನಾಶಕ್ಕಲ್ಲ ಎಂದು ಪ್ರಧಾನಿ ಮೋದಿ ದುಬೈ ನಲ್ಲಿ ಹೇಳಿದ್ದಾರೆ.
ಭಾನುವಾರ ಅಬುದಾಬಿಯಲ್ಲಿ ನಡೆದ ವಿಶ್ವ ಸರ್ಕಾರಿ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಕೆಲ ರಾಷ್ಟ್ರಗಳ ತಂತ್ರಜ್ಞಾನ ಇರುವುದೇ ಮತ್ತೊಂದು ರಾಷ್ಟ್ರದ ವಿನಾಶಕ್ಕೆ ಎಂಬ ರೀತಿಯಲ್ಲಿ ವರ್ತಿಸುತ್ತಿವೆ.  ಆದರೆ ತಂತ್ರಜ್ಞಾನ ಅಭಿವೃದ್ಧಿಗೆ ಪೂರಕವಾಗಿರಬೇಕೇ ಹೊರತು ವಿನಾಶಕ್ಕಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಅಬುದಾಬಿಯಲ್ಲಿ ನಿರ್ಮಾಣವಾಗುತ್ತಿರುವ ಹಿಂದೂ ದೇಗುಲ ಉದ್ದೇಶಿಸಿ ಮಾತನಾಡಿದ ಮೋದಿ ಇದು ದುಬೈ 125  ಕೋಟಿ ಭಾರತೀಯರಿಗೆ ನೀಡುತ್ತಿರುವ ಗೌರವವಾಗಿದೆ. ವಿಶ್ವ ಸರ್ಕಾರಿ ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವುದು ಖುಷಿ ಸಂಗತಿಯಾಗಿದೆ ಎಂದು ಹೇಳಿದರು.
ಅಂತೆಯೇ "ತಂತ್ರಜ್ಞಾನವನ್ನು ಸೂಕ್ತವಾಗಿ ಬಳಕೆ ಮಾಡಿಕೊಂಡರೆ ಮರುಭೂಮಿಯನ್ನು ಬದಲಿಸಬಹುದು ಎಂಬುದಕ್ಕೆ ದುಬೈ ಅತ್ಯುತ್ತಮ ಉದಾಹರಣೆಯಾಗಿದ್ದು, ನಿಜಕ್ಕೂ ಇದು ಅಚ್ಚರಿಯ ಸಂಗತಿ, ತಂತ್ರಜ್ಞಾನ ಆಲೋಚನೆಗಳ  ವೇಗವನ್ನು ಹೆಚ್ಚಿಸುತ್ತಿದ್ದು, ಸಾಮಾನ್ಯನಿಗೂ ತಂತ್ರಜ್ಞಾನ ಕೆಲಸ ನೀಡುತ್ತಿದೆ. ತಂತ್ರಜ್ಞಾನ ಎಂದರೆ ಅಭಿವೃದ್ಧಿ ಎಂದು ಪರಿಗಣಿಸಬೇಕೇ ಹೊರತು ತಂತ್ರಜ್ಞಾನವನ್ನು ವಿನಾಶಕ್ಕೆ ಬಳಕೆ ಮಾಡಬಾರದು. ತಂತ್ರಜ್ಞಾನಕ್ಕೆ  ಸಂಬಂಧಿಸಿದಂತೆ ಜೀವವನದಲ್ಲಿ ಎಂದಿಗೂ ನಾವು 6 ಪ್ರಮುಖ ನಿಯಮಗಳನ್ನು ಪಾಲಿಸಬೇಕು. ಕಡಿಮೆ, ಮರುಬಳಕೆ, ಮರುಸೃಷ್ಟಿ, ಚೇತರಿಸಿಕೊಳ್ಳುವುದು, ಪುನರ್ವಿನ್ಯಾಸ ಮಾಡು ಮತ್ತು ಪುನಃ ತಯಾರಿಸುವುದು ಎಂಬುದು ಈ  ಆರು ನಿಯಮಗಳು.  
ಅಭಿವೃದ್ಧಿ ಹೊರತಾಗಿಯೂ ವಿಶ್ವದಲ್ಲಿ ಬಡತನ, ಅಪೌಷ್ಟಿಕತೆಯನ್ನು ನಾವು ಸಂಪೂರ್ಣವಾಗಿ ತೊಡೆದು ಹಾಕಲಾಗಿಲ್ಲ. ಇದರ ನಡುವೆಯೇ ನಾವು ಬಹುತೇಕ ಹಣ ಮತ್ತು ಸಮಯವನ್ನು ಕ್ಷಿಪಣಿ ಮತ್ತು ಬಾಂಬ್ ಗಳ ತಯಾರಿಕೆಗೆ  ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮೋದಿ ಕಿಡಿಕಾರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT