ಡೋಕ್ಲಾಮ್ ಚೀನಾಗೆ ಸೇರಿದ್ದು; ಮತ್ತೊಮ್ಮೆ ಬಿಕ್ಕಟ್ಟು ಸೃಷ್ಟಿಸದಂತೆ ಭಾರತಕ್ಕೆ ಎಚ್ಚರಿಕೆ 
ವಿದೇಶ

ಡೋಕ್ಲಾಮ್ ಚೀನಾಗೆ ಸೇರಿದ್ದು; ಮತ್ತೊಮ್ಮೆ ಬಿಕ್ಕಟ್ಟು ಸೃಷ್ಟಿಸದಂತೆ ಭಾರತಕ್ಕೆ ಎಚ್ಚರಿಕೆ

ಡೋಕ್ಲಾಮ್ ಒಂದು ವಿವಾದಾತ್ಮಕ ಪ್ರದೇಶ ಎಂದಿದ್ದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಇತ್ತೀಚಿನ ಹೇಳಿಕೆಯನ್ನು ಉದ್ದರಿಸಿದ ಚೀನಾ ಸೇನೆ.........

ಬೀಜಿಂಗ್: ಡೋಕ್ಲಾಮ್ ಒಂದು ವಿವಾದಾತ್ಮಕ ಪ್ರದೇಶ ಎಂದಿದ್ದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಇತ್ತೀಚಿನ ಹೇಳಿಕೆಯನ್ನು ಉದ್ದರಿಸಿದ ಚೀನಾ ಇಂದು ಪ್ರತಿಕ್ರಯಿಸಿದ್ದು ಭಾರತವು ಕಳೆದ ವರ್ಷದ 73 ದಿನಗಳ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಳ್ಳಬೇಕು. ಮತ್ತೊಮ್ಮೆ ಅಂತಹಾ ಉದ್ವಿಗ್ನ ವಾತಾವರಣ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದಿದೆ.
ಬಿಪಿನ್ ರಾವತ್ ಹೇಳಿಕೆಗೆ ಇದೇ ಪ್ರಥಮ ಬಾರಿಗೆ ಪ್ರತಿಕ್ರಯಿಸಿದ ಚೀನಾ ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ವೂ ಕಿಯಾನ್ ಡೋಕ್ಲಾಮ್ ಚೀನಾದ ಅಧಿಕೃತ ಭಾಗವಾಗಿದೆ ಎಂದಿದ್ದಾರೆ.
"ಬಾರತವು ಇದೀಗ ಪಾಕಿಸ್ತಾನದ ಗಡಿಗಿಂತ ಹೆಚ್ಚು ಚೀನಾ ಗಡಿಯತ್ತ ಗಮನ ನೀಡಬೇಕಿದೆ. ಚೀನಾ ತನ್ನ ಗಡಿಯುದ್ದದ ಪ್ರದೇಶದ ಮೇಲೆ ಬೀಜಿಂಗ್ ನಿಂದ ನೇರ ನಿಯಂತ್ರಣ ಹೊಂದಿದೆ. ಹಿಗಾಗಿ ನಾವು ಸದಾ ಜಾಗೃತವಾಗಿರಬೇಕು "ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಈ ತಿಂಗಳ ಪ್ರಾರಂಭದಲ್ಲಿ ಹೇಳಿಕೆ ನೀಡಿದ್ದರು. 
"ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಉತ್ತರ ಡೋಕ್ಲಾಮ್a ಎಂದು ಕರೆಯಲ್ಪಡುವ ಟೋರ್ಸಾ ನಲ್ಲಾ ಪಶ್ಚಿಮದ ಪ್ರದೇಶವನ್ನು ಆಕ್ರಮಿಸಿದೆ. ಈ ಸ್ಥಳದಲ್ಲಿ ಎರಡೂ ಭಾಗಗಳನ್ನು ಒಳಗೊಂಡು ಚೀನಾ ಡೇರೆಗಳನ್ನು ನಿರ್ಮಿಸಿದೆ. ಅಲ್ಲದೆ ಅಲ್ಲಿ ತನ್ನ ವೀಕ್ಷಣಾ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಆದರೆ ಇದು ನಿಜವಾಗಿಯೂ ಭೂತಾನ್ ಮತ್ತು ಚೀನಾ ನಡುವೆ ಇರುವ ವಿವಾದಿತ ಪ್ರದೇಶವಾಗಿದೆ" ಎಂದು ಭಾರತೀಯ ಸೇನಾ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್  ಜ.12 ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT