ಲಂಡನ್: ಭಾರತ-ಪಾಕಿಸ್ತಾನ ಬಾಂಧವ್ಯಕ್ಕೆ ಬೇಕಿರುವುದು ಶಾಂತಿಯೇ ಹೊರತು ಯುದ್ದವಲ್ಲ ಎಂದು ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ರೆಹಮ್ ಖಾನ್ ಹೇಳಿದ್ದಾರೆ.
ಎಎನ್ ಐ ಸುದ್ದಿ ಸಂಸ್ಥೆ ಸಂದರ್ಶನದಲ್ಲಿ ಮಾತನಾಡಿರುವ ಅವರು.ನಮ್ಮ ಗಡಿಗಳು, ರಸ್ತೆಗಳು ಮತ್ತು ನಮ್ಮ ಜನಗಳು ಸಂಪರ್ಕದಲ್ಲಿವೆ, ನಮ್ಮ ಪರಿಹಾರಗಳು ಸಂಪರ್ಕಗೊಂಡಿವೆ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ. ನಮ್ಮ ಪರಿಹಾರಗಳು ಸಹಭಾಗಿತ್ವದಲ್ಲಿರಬೇಕು, ಯುದ್ದಗಳು ಇದಕ್ಕೆ ಸರಿಹೊಂದುವುದಿಲ್ಲ, ಪ್ರತಿಯೊಬ್ಬರಿಗೂ ಶಾಂತಿ ಬೇಕಿದೆ, ಆದಷ್ಟು ಬೇಗ ನಾವಿದನ್ನು ಅರ್ಥ ಮಾಡಿಕೊಳ್ಳುತ್ತೇವೆ ಎಂದು ನನಗನ್ನಿಸುತ್ತದೆ ಎಂದು ಹೇಳಿದ್ದಾರೆ.
ಶಾಂತಿ ಮತ್ತು ಹೊಂದಾಣಿಕೆ ಎರಡು ಶತ್ರು ರಾಷ್ಟ್ರಗಳ ನಡುವೆ ಹೇಗೆ ಸಂಬಂಧ ಬೆಸೆಯುತ್ತದೆ ಎಂಬುದನ್ನು ತೆಹ್ರಕ್- ಇ - ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್ ವಿವರಿಸಿದ್ದಾರೆ.
ನಾನು ಇಂಗ್ಲೆಂಡ್ ನಲ್ಲಿದ್ದೇನೆ, ಶಾಂತಿ ಮತ್ತು ಐಕ್ಯತೆಯಿಂದಿದ್ದೇನೆ, ಇಲ್ಲಿ ಯಾರು ನನ್ನನ್ನು ಶಿಯಾ ಅಥವಾ ಸುನ್ನಿ ಪಂಗಡದವರೇ ಎಂದು ಕೇಳಿಲ್ಲ, ಯಾವ ದೇಶದವರು ಯಾವ ಪಂಗಡದವರು ಎಂಬದು ಇಲ್ಲಿ ವಿಷಯವೇ ಅಲ್ಲ, ಇಲ್ಲಿ ಯಾವ ವಿರೋಧವಿಲ್ಲದೇ ನಾನು ಆರಾಮಾವಾಗಿದ್ದೇನೆ, ಇಲ್ಲಿ ಯಾರು ಬೇಕಾದರೂ ಶಾಂತಿ ಮತ್ತು ಒಗ್ಗಟ್ಟಿನಿಂದ ಬದುಕಬಹುದಾಗಿದೆ,
ಜನಗಳು ಹೊಂದಾಣಿಕೆಯಿಂದ ಬದುಕಲು ಯಾವುದೇ ಅಡ್ಡಿಯಿಲ್ಲ,ಒಂದು ವೇಳೆ ಏನಾದರೂ ವಿಷಯವಿದ್ದರೇ ಅದು ರಾಜಕೀಯ ಉದ್ದೇಶದಿಂದ ಕೂಡಿದ್ದಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos