ಶ್ರೀ ಶ್ರೀನಿವಾಸ ಪೆರಮಾಳ್ ದೇವಾಲಯ
ಸಿಂಗಾಪೂರ್: 164 ವರ್ಷದ ಹಳೇಯ ಹಿಂದಿನ ಹಿಂದೂ ದೇವಾಲಯವನ್ನು ಸಿಂಗಾಪೂರದಲ್ಲಿ ಪುನಸ್ಥಾಪಿಸಲು 20 ಭಾರತೀಯ ಕಲಾವಿದರು ಸಿಂಗಾಪೂರಕ್ಕೆ ತೆರಳಿದ್ದಾರೆ. 20 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ದೇವಾಲಯವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಗಿದೆ.
ಶ್ರೀ ಶ್ರೀನಿವಾಸ ಪೆರಮಾಳ್ ದೇವಾಲಯ ನಿರ್ಮಾಣಕ್ಕಾಗಿ ಕಳೆದ 1 ವರ್ಷದಿಂದ ಕೆಲಸ ನಡೆಯುತ್ತಿದೆ. ಭಾರತೀಯ ಕೆಲಸಗಾರರ ಜೊತೆ ಮತ್ತಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ.
ಪ್ರಮುಖ ಶಿಲ್ಪಿ ಸೇರಿದಂತೆ 19 ಮಂದಿ ಕರಕುಶಲಗಾರರು ಭಾರತದಿಂದ ಸಿಂಗಾಪೂರ್ ಗೆ ತೆರಳಿದ್ದಾರೆ. ಮೂಲ ದೇವಾಲಯದ ಬಣ್ಣ ಹಚ್ಚುತ್ತಿದ್ದಾರೆ. ದೇವಾಲಯವನ್ನು ಪುನಶ್ಚೇತನಗೊಳಿಸುವುದು ದೊಡ್ಡ ಸವಾಲಾಗಿದ್ದು, ವಿವಿಧ ಶಾಸ್ತ್ರ ಸಂಪ್ರದಾಯಗಳು ನಡೆಯಲಿವೆ.
ಇದೊಂದು ಜೀವಂತ ಸ್ಮಾರಕ ಎಂದು ದೇವಾಲಯ ನಿರ್ವಹಣಾ ಸಮಿತಿ ಅಧ್ಯಕ್ಷ ವೆಲಾಯಪ್ಪನ್ ಕರುಪ್ಪಯ್ಯ ಹೇಳಿದ್ದಾರೆ, ಹಬ್ಬಗಳು ವೇಳೆ ವಿಶೇಷ ಪೂಜೆ ನಡೆಸಲಾಗುತ್ತದೆ. ಈ ಸಮಯದಲ್ಲಿ ಕೆಲಸ ನಿಲ್ಲಿಸಲಾಗುತ್ತದೆ. ನಾವು ರೂಪಿಸಿರುವ ಯೋಜನೆ ಪ್ರಕಾರ ಕೆಲಸ ಸಾಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದ್ದಾರೆ.
ದೇವಾಲಯದಲ್ಲಿ ಭಕ್ತಾದಿಗಳು ಪೂಜೆ ಮಾಡಲು ಹೆಚ್ಚಿನ ಸ್ಥಳ ಕಲ್ಪಿಸಲಾಗಿದೆ, ಚಿತ್ರಕಲೆಗಳನ್ನು ಪುನರ್ ಸ್ಥಾಪಿಸುವುದು, ರಾಜಗೋಪುರ, ಕಂಬಗಳು ಮತ್ತು ವಿಮಾನ ಗಳನ್ನು ನಿರ್ಮಿಸಲಾಗುತ್ತಿದೆ.
ದೇವಾಲಯ ಜೀರ್ಣೋದ್ಧಾರ ಕೆಲಸ ಮುಗಿದ ನಂತರ,ಏಪ್ರಿಲ್ 22 ರಂದು ದೇವಾಲಯ ಶುದ್ದೀಕರಣ ಕೆಲಸವಿದ್ದು 39 ಅರ್ಚಕರು ಹಿಂದೂ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಡಲಿದ್ದಾರೆ.
1979, 1992 ಮತ್ತು 2005 ರಲ್ಲಿ ಮೂರು ಬಾರಿ ಪುನಾರಭಿವೃದ್ಧಿ ಕೆಲಸಗಳು ನಡೆದಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos