ಶ್ರೀಲಂಕಾ ಚರ್ಚ್ ಮೇಲೆ ಭೀಕರ ಸರಣಿ ಬಾಂಬ್ ದಾಳಿ 
ವಿದೇಶ

ಶ್ರೀಲಂಕಾ ಚರ್ಚ್ ಮೇಲೆ ಭೀಕರ ಸರಣಿ ಬಾಂಬ್ ದಾಳಿ: 10 ದಿನಗಳ ಮೊದಲೇ ದಾಳಿ ಕುರಿತು ಎಚ್ಚರಿಕೆ ನೀಡಿದ್ದ ಪೊಲೀಸ್ ಮುಖ್ಯಸ್ಥ!

ಈಸ್ಟರ್ ಸಂಡೇ ದಿನ ಶ್ರೀಲಂಕಾದ ಮೂರು ಚರ್ಚ್ ಗಳಲ್ಲಿ ಬಾಂಬ್ ದಾಳಿಗಳಾಗಿದ್ದು 137 ಜನರು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಸ್ಪೋಟಕ ಮಾಹಿತಿಯೊಂದು ಹೊರಬಂದಿದ್ದು ಹತ್ತು ದಿನಗಳ ಹಿಂದೆಯೇ ....

ಕೊಲಂಬೋ: ಈಸ್ಟರ್ ಸಂಡೇ ದಿನ ಶ್ರೀಲಂಕಾದ ಮೂರು ಚರ್ಚ್ ಗಳಲ್ಲಿ ಬಾಂಬ್ ದಾಳಿಗಳಾಗಿದ್ದು 137 ಜನರು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಸ್ಪೋಟಕ ಮಾಹಿತಿಯೊಂದು ಹೊರಬಂದಿದ್ದು ಹತ್ತು ದಿನಗಳ ಹಿಂದೆಯೇ ಶ್ರೀಲಂಕಾದ ಪಾರಂಪರಿಕ ಚರ್ಚ್ ಗಳ ಮೇಲೆ ಬಾಂಬ್ ದಾಳಿ ನಡೆಯಲಿದೆ ಎಂದು ಶ್ರೀಲಂಕಾದ ಪೊಲೀಸ್ ಮುಖ್ಯಸ್ಥ ಎಚ್ಚರಿಕೆ ನೀಡಿದ್ದರು.
ಪೊಲೀಸ್ ಮುಖ್ಯಸ್ಥ ಪೂಜೂತ್ ಜಯಸುಂದರ  ಅವರು ಏಪ್ರಿಲ್ 11ರಂದು ಶ್ರೀಲಂಕಾದ  ಉನ್ನತ ತನಿಖಾಧಿಕಾರಿಗಳಿಗೆ ಈ ಕುರಿತು ಎಚ್ಚರಿಕೆ ನೀಡಿದ್ದರು ಎಂದು ಎ.ಎಫ್.ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
"ಪ್ರಮುಖ ಚರ್ಚುಗಳು ಮತ್ತು ಕೊಲಂಬೋದಲ್ಲಿನ ಭಾರತೀಯ  ಹೈಕಮಿಷನರ್ ಕಛೇರಿಯನ್ನು ಗುರಿಯಾಗಿಟ್ಟು  ಆತ್ಮಹತ್ಯೆ ದಾಳಿಯನ್ನು ನಡೆಸಲು ಎನ್.ಟಿ.ಜೆ (ನ್ಯಾಷನಲ್ ಥೌಹೀತ್ ಜಮಾಥ್) ಸಂಘಟನೆ ಯೋಜಿಸುತ್ತಿದೆ ಎಂದು ಒಂದು ವಿದೇಶಿ ಗುಪ್ತಚರ ಸಂಸ್ಥೆ ವರದಿ ಮಾಡಿದೆ" ಎಂದು ಜಯಸುಂದರ ಎಚ್ಚರಿಕೆ ನೀಡಿದ್ದರು.
ಎನ್ ಟಿಜೆ ಶ್ರೀಲಂಕಾದಲ್ಲಿನ ಒಂದು ಮೂಲಭೂತವಾದಿ ಮುಸ್ಲಿಂ ಸಂಘಟನೆಯಾಗಿದ್ದು ಅದು ಬೌದ್ಧ ಪ್ರತಿಮೆಗಳ ನಾಶದ ಘಟನೆ ನಡೆದಾಗ ಜಗತ್ತಿನ ಗಮನ ಸೆಳೆದಿತ್ತು..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT