ವಿದೇಶ

ಶ್ರೀಲಂಕಾದಲ್ಲಿ ರಕ್ತಪಾತ ಹರಿಸಿದ್ದ ಆತ್ಮಾಹುತಿ ಬಾಂಬರ್ ಪೈಕಿ 2 ಕೋಟ್ಯಾಧಿಪತಿ ಮಕ್ಕಳು!

Vishwanath S
ಕೊಲಂಬೊ: 10ಕ್ಕೂ ಹೆಚ್ಚು ಕನ್ನಡಿಗರು ಸೇರಿದಂತೆ 321ಕ್ಕೂ ಹೆಚ್ಚು ಅಮಾಯಕರ ಬಲಿಪಡೆದ ಶ್ರೀಲಂಕಾದ ಸರಣಿ ಸ್ಫೋಟ ಘಟನೆಗಳ ಪೈಕಿ ಆತ್ಮಾಹುತಿ ಬಾಂಬರ್ ಗಳು ಕೋಟ್ಯಾಧಿಪತಿಗಳ ಮಕ್ಕಳು ಎಂಬ ಆಘಾತಕಾರಿ ಸುದ್ದಿ ಬಹಿರಂಗಗೊಂಡಿದೆ.
ಶ್ರೀಲಂಕಾದ ಐಷಾರಾಮಿ ಶಾಂಗ್ರಿಲಾ ಹಾಗೂ ಸಿನ್ನಮೋನ್ ಗ್ರಾಂಡ್ ಹೋಟೆಲ್ ಗಳ ಮೇಲೆ ದಾಳಿ ನಡೆಸಿದ್ದು ಕೊಲೊಂಬೋದ ಸಿರಿವಂತ ಮುಸ್ಲಿಂ ಉದ್ಯಮಿಯ ಪುತ್ರರು ಎಂದು ತಿಳಿದುಬಂದಿದೆ.
ಕೊಲಂಬೋದಲ್ಲಿ ಸಂಬಾತ ಪದಾರ್ಥಗಳ ಉದ್ಯಮ ನಡೆಸುವ ಶ್ರೀಮಂತ ಉದ್ಯಮಿಯೊಬ್ಬರ ಇಬ್ಬರು ಮಕ್ಕಳು ಶನಿವಾರವೇ ಪ್ರತ್ಯೇಕವಾಗಿ ಎರಡೂ ಹೋಟೆಲ್ ಗಳಲ್ಲಿ ಕೊಠಡಿ ಕಾದಿರಿಸಿದ್ದರು. ಭಾನುವಾರ ಬೆಳಗ್ಗೆ ಎರಡೂ ಹೋಟೆಲ್ ಗಳಲ್ಲಿ ಈಸ್ಟರ್ ಉಪಾಹಾರ ಕಾರ್ಯಕ್ರಮ ಆರಂಭವಾಗುತ್ತಲೇ ಸೋದರರಿಬ್ಬರೂ ಒಂದೇ ಸಮಯಕ್ಕೆ ಎರಡೂ ಹೋಟೆಲ್ ಗಳಲ್ಲಿ ದಾಳಿ ನಡೆಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
SCROLL FOR NEXT