ಜನರ ಜೀವ ರಕ್ಷಣೆಗಾಗಿ ಬುರ್ಖಾ ನಿಷೇಧಿಸಿದ ಶ್ರೀಲಂಕಾ 
ವಿದೇಶ

ಸರಣಿ ಸ್ಪೋಟ: ಜನರ ಜೀವ ರಕ್ಷಣೆಗಾಗಿ ಬುರ್ಖಾ ನಿಷೇಧಿಸಿದ ಶ್ರೀಲಂಕಾ

ಈಸ್ಟರ್ ಸಂಡೇ ದಿನದ ಎಂಟು ಸರಣಿ ಬಾಂಬ್ ಸ್ಪೊಟದ ನಂತರ ಶ್ರೀಲಂಕಾ ಸರ್ಕಾರ ಭಯೋತ್ಪಾದಕರ ನಿಗ್ರಹಕ್ಕಾಗಿ ಣಾನಾ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇ

ಕೊಲಂಬೋ: ಈಸ್ಟರ್ ಸಂಡೇ ದಿನದ ಎಂಟು ಸರಣಿ ಬಾಂಬ್ ಸ್ಪೊಟದ ನಂತರ ಶ್ರೀಲಂಕಾ ಸರ್ಕಾರ ಭಯೋತ್ಪಾದಕರ ನಿಗ್ರಹಕ್ಕಾಗಿ ಣಾನಾ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ ಶ್ರೀಲಂಖಾ ಸರ್ಕಾರ ಬುರ್ಖಾ ತೊಡುವುದನ್ನು ನಿಷೇಧಿಸಿದೆ. ಬುರ್ಖಾ ಸೇರಿದಂತೆ ಯಾವುದೇ ಬಗೆಯ ಮುಖಗವಸುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೊಡುವುದಕ್ಕೆ ಶ್ರೀಲಂಕಾ ಸರ್ಕಾರ ಸಂಪೂರ್ಣ ನಿಷೇಧ ಹೇರಿದೆ.
ಭಾನುವಾರ ತಡರಾತ್ರಿ ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಬಿದ್ದಿದ್ದು  "ವ್ಯಕ್ತಿಯ ಗುರುತಿಸುವಿಕೆಯನ್ನು ತಡೆಗಟ್ಟುವ ಯಾವುದೇ ಮುಖದಗವಸುಗಳನ್ನು ಧರಿಸುವುದು ತುರ್ತು ಪರಿಸ್ಥಿತಿಯ ನಿಬಂಧನೆಗಳ ಅಡಿಯಲ್ಲಿ ನಿಷೇಧಿಸಲಾಗಿದೆ. ಬುರ್ಖಾದಂತಹಾ ಮುಖಗವಸುಗಳನ್ನು ತೊಡುವುದರಿಂದ ಭದ್ರತೆಗೆ ಆತಂಕವಿದೆ. ಅಲ್ಲದೆ ನ್ಬುರ್ಖಾ ಧಾರಣೆ ಮೂಲಭೂತವಾದದ ಸಂಕೇತವಾಗಿದೆ"  ಎಂದು ವಿವರಿಸಿದೆ.
"ತುರ್ತು ಕ್ರಮದ ಅಡಿಯಲ್ಲಿ ಸುಲಭವಾಗಿ ವ್ಯಕ್ತಿಯನ್ನು ಗುರುತಿಸಲು ಅಡ್ಡಿಯಾಗುವ ವ ಎಲ್ಲ ರೀತಿಯ ಮುಖಗವಸುಗಳನ್ನು  ನಿಷೇಧಿಸುವಂತೆ ಅಧ್ಯಕ್ಷರು ನಿರ್ಧಾರ ತೆಗೆದುಕೊಂಡಿದ್ದಾರೆ."
ಶ್ರೀಲಂಕಾದ ಸಂಸತ್ ಸದಸ್ಯರು ಖಾಸಗಿ ಪ್ರಸ್ತಾವನೆಯೊಂದನ್ನು ಸಲ್ಲಿಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ.
ವಾಸ್ತವವಾಗಿ, ಆಲ್ ಸೆಟ್ಲಾನ್ ಜಮಿಯುತುಲ್ ಉಲೇಮಾಎಂಬ ಹೆಸರಿನ ಮುಸ್ಲಿಂ ಧರ್ಮದರ್ಶಿಗಳ ಸಂಘಟನೆಯೂ ಭದ್ರತಾ ಪಡೆಗಳಿಗೆ ಸಹಾಯಕ್ಕಾಗಿ ಬುರ್ಖಾ. ನಿಕಾಬ್ಧಾರಣೆಯನ್ನು ಬಿಡಲು ಮಹಿಳೆಯರನ್ನು ಕೇಳಿದೆ
ಏಪ್ರಿಲ್ 21 ರಂದು ದ್ವೀಪರಾಷ್ಟ್ರದ ಎಂಟು ಕಡೆಗಳಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಕೆಲ ಭಾರತೀಯರೂ ಸೇರಿದಂತೆ  250 ಕ್ಕೂ  ಹೆಚ್ಚು ಜನ ಪ್ರಾಣ ಬಿಟ್ಟಿದ್ದರು. ಕನಿಷ್ಠ 500 ಜನ ಗಾಯಗೊಂಡಿದ್ದರು. ಆ ಬಳಿಕ ಶ್ರೀಲಂಕಾದಲ್ಲಿ  ತುರ್ತು ಪರಿಸ್ಥಿತಿ ಘೋಷಣೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT