ಜನರ ಜೀವ ರಕ್ಷಣೆಗಾಗಿ ಬುರ್ಖಾ ನಿಷೇಧಿಸಿದ ಶ್ರೀಲಂಕಾ 
ವಿದೇಶ

ಸರಣಿ ಸ್ಪೋಟ: ಜನರ ಜೀವ ರಕ್ಷಣೆಗಾಗಿ ಬುರ್ಖಾ ನಿಷೇಧಿಸಿದ ಶ್ರೀಲಂಕಾ

ಈಸ್ಟರ್ ಸಂಡೇ ದಿನದ ಎಂಟು ಸರಣಿ ಬಾಂಬ್ ಸ್ಪೊಟದ ನಂತರ ಶ್ರೀಲಂಕಾ ಸರ್ಕಾರ ಭಯೋತ್ಪಾದಕರ ನಿಗ್ರಹಕ್ಕಾಗಿ ಣಾನಾ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇ

ಕೊಲಂಬೋ: ಈಸ್ಟರ್ ಸಂಡೇ ದಿನದ ಎಂಟು ಸರಣಿ ಬಾಂಬ್ ಸ್ಪೊಟದ ನಂತರ ಶ್ರೀಲಂಕಾ ಸರ್ಕಾರ ಭಯೋತ್ಪಾದಕರ ನಿಗ್ರಹಕ್ಕಾಗಿ ಣಾನಾ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ ಶ್ರೀಲಂಖಾ ಸರ್ಕಾರ ಬುರ್ಖಾ ತೊಡುವುದನ್ನು ನಿಷೇಧಿಸಿದೆ. ಬುರ್ಖಾ ಸೇರಿದಂತೆ ಯಾವುದೇ ಬಗೆಯ ಮುಖಗವಸುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೊಡುವುದಕ್ಕೆ ಶ್ರೀಲಂಕಾ ಸರ್ಕಾರ ಸಂಪೂರ್ಣ ನಿಷೇಧ ಹೇರಿದೆ.
ಭಾನುವಾರ ತಡರಾತ್ರಿ ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಬಿದ್ದಿದ್ದು  "ವ್ಯಕ್ತಿಯ ಗುರುತಿಸುವಿಕೆಯನ್ನು ತಡೆಗಟ್ಟುವ ಯಾವುದೇ ಮುಖದಗವಸುಗಳನ್ನು ಧರಿಸುವುದು ತುರ್ತು ಪರಿಸ್ಥಿತಿಯ ನಿಬಂಧನೆಗಳ ಅಡಿಯಲ್ಲಿ ನಿಷೇಧಿಸಲಾಗಿದೆ. ಬುರ್ಖಾದಂತಹಾ ಮುಖಗವಸುಗಳನ್ನು ತೊಡುವುದರಿಂದ ಭದ್ರತೆಗೆ ಆತಂಕವಿದೆ. ಅಲ್ಲದೆ ನ್ಬುರ್ಖಾ ಧಾರಣೆ ಮೂಲಭೂತವಾದದ ಸಂಕೇತವಾಗಿದೆ"  ಎಂದು ವಿವರಿಸಿದೆ.
"ತುರ್ತು ಕ್ರಮದ ಅಡಿಯಲ್ಲಿ ಸುಲಭವಾಗಿ ವ್ಯಕ್ತಿಯನ್ನು ಗುರುತಿಸಲು ಅಡ್ಡಿಯಾಗುವ ವ ಎಲ್ಲ ರೀತಿಯ ಮುಖಗವಸುಗಳನ್ನು  ನಿಷೇಧಿಸುವಂತೆ ಅಧ್ಯಕ್ಷರು ನಿರ್ಧಾರ ತೆಗೆದುಕೊಂಡಿದ್ದಾರೆ."
ಶ್ರೀಲಂಕಾದ ಸಂಸತ್ ಸದಸ್ಯರು ಖಾಸಗಿ ಪ್ರಸ್ತಾವನೆಯೊಂದನ್ನು ಸಲ್ಲಿಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ.
ವಾಸ್ತವವಾಗಿ, ಆಲ್ ಸೆಟ್ಲಾನ್ ಜಮಿಯುತುಲ್ ಉಲೇಮಾಎಂಬ ಹೆಸರಿನ ಮುಸ್ಲಿಂ ಧರ್ಮದರ್ಶಿಗಳ ಸಂಘಟನೆಯೂ ಭದ್ರತಾ ಪಡೆಗಳಿಗೆ ಸಹಾಯಕ್ಕಾಗಿ ಬುರ್ಖಾ. ನಿಕಾಬ್ಧಾರಣೆಯನ್ನು ಬಿಡಲು ಮಹಿಳೆಯರನ್ನು ಕೇಳಿದೆ
ಏಪ್ರಿಲ್ 21 ರಂದು ದ್ವೀಪರಾಷ್ಟ್ರದ ಎಂಟು ಕಡೆಗಳಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಕೆಲ ಭಾರತೀಯರೂ ಸೇರಿದಂತೆ  250 ಕ್ಕೂ  ಹೆಚ್ಚು ಜನ ಪ್ರಾಣ ಬಿಟ್ಟಿದ್ದರು. ಕನಿಷ್ಠ 500 ಜನ ಗಾಯಗೊಂಡಿದ್ದರು. ಆ ಬಳಿಕ ಶ್ರೀಲಂಕಾದಲ್ಲಿ  ತುರ್ತು ಪರಿಸ್ಥಿತಿ ಘೋಷಣೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT