ಸಾಂದರ್ಭಿಕ ಚಿತ್ರ 
ವಿದೇಶ

ಮದ್ಯದ ನಶೆಯಲ್ಲಿ ಕುಟುಂಬದವರನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಥಾಯ್ ವ್ಯಕ್ತಿ!

ಅತ್ತೆ ಮಾವನಿಂದ ಅವಮಾನಕ್ಕೊಳಗಾದೆ ಎಂದು ಬೇಸರಗೊಂಡು ತನ್ನಿಬ್ಬರು ಮಕ್ಕಳ ಸಹಿತ ಕುಟುಂಬದ ...

ಬ್ಯಾಂಕಾಕ್: ಅತ್ತೆ ಮಾವನಿಂದ ಅವಮಾನಕ್ಕೊಳಗಾದೆ  ಎಂದು ಬೇಸರಗೊಂಡು ತನ್ನಿಬ್ಬರು ಮಕ್ಕಳ ಸಹಿತ ಕುಟುಂಬದ ಆರು ಸದಸ್ಯರನ್ನು ಕೊಂದು ಥಾಯ್ ವ್ಯಕ್ತಿ ತನ್ನನ್ನು ಗುಂಡಿಕ್ಕಿ ಹತ್ಯೆ ಮಾಡಿಕೊಂಡ ಘಟನೆ ಹೊಸವರ್ಷಾಚರಣೆ ಪಾರ್ಟಿ ವೇಳೆ ಬ್ಯಾಂಕಾಕ್ ನಲ್ಲಿ ನಡೆದಿದೆ.

ಬ್ಯಾಂಕಾಕ್ ನ ಚುಂಪೊನ್ ನ ದಕ್ಷಿಣ ಪ್ರಾಂತ್ಯದಲ್ಲಿ ಸುಚೀಪ್ ಸೊರ್ನ್ ಸಂಗ್ ತನ್ನ ಪತ್ನಿ ಹಾಗೂ ಕುಟುಂಬದವರ ಜೊತೆಗೂಡಿ ಮಧ್ಯರಾತ್ರಿ ಪಾರ್ಟಿ ಮಾಡಲು ಆರಂಭಿಸಿ ಕೆಲವೇ ಸಮಯದ ನಂತರ ಈ ಘಟನೆ ನಡೆದಿದೆ.

ಸುಚೀಪ್ ಸೊರ್ನ್ ಸಂಗ್ ಕುಟುಂಬ ಇಲ್ಲಿನ ಫಾಟೊ ಜಿಲ್ಲೆಯ ಬ್ಯೂಟಿ ಪಾರ್ಲರ್ ನಲ್ಲಿ ಹೊಸ ವರ್ಷದ ಪಾರ್ಟಿ ಆಯೋಜಿಸಲಾಗಿತ್ತು. ಸುಚೀಪ್ ಸಾಕಷ್ಟು ಮದ್ಯ ಸೇವಿಸಿದ್ದ. ಅದೇ ಮತ್ತಿನಲ್ಲಿ ಪಿಸ್ತೂಲ್ ತೆಗೆದು ಶೂಟ್ ಮಾಡಿದ್ದಾನೆ. ಹತ್ಯೆಯಾದವರೆಲ್ಲರೂ ಆತನ ಕುಟುಂಬ ಸದಸ್ಯರೇ ಆಗಿದ್ದಾರೆ ಎಂದು ಲೆಫ್ಟಿನೆಂಟ್ ಕರ್ನಲ್ ಲಾರ್ಪ್ ಕಂಪಾಪನ್ ಪೊಲೀಸರಿಗೆ ತಿಳಿಸಿದ್ದಾರೆ.

ತಾನು ಅಳಿಯನಾಗಿದ್ದರೂ ತನ್ನ ಪತ್ನಿ ಕಡೆಯವರು ಸರಿಯಾಗಿ ಸ್ವಾಗತಿಸಲಿಲ್ಲ,ಮರ್ಯಾದೆ ಕೊಡಲಿಲ್ಲ ಎಂದು ಸಿಟ್ಟಿನಿಂದ ಮದ್ಯದ ನಶೆಯಲ್ಲಿ ಎಲ್ಲರ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT