ಸಾಂದರ್ಭಿಕ ಚಿತ್ರ 
ವಿದೇಶ

ಮದ್ಯದ ನಶೆಯಲ್ಲಿ ಕುಟುಂಬದವರನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಥಾಯ್ ವ್ಯಕ್ತಿ!

ಅತ್ತೆ ಮಾವನಿಂದ ಅವಮಾನಕ್ಕೊಳಗಾದೆ ಎಂದು ಬೇಸರಗೊಂಡು ತನ್ನಿಬ್ಬರು ಮಕ್ಕಳ ಸಹಿತ ಕುಟುಂಬದ ...

ಬ್ಯಾಂಕಾಕ್: ಅತ್ತೆ ಮಾವನಿಂದ ಅವಮಾನಕ್ಕೊಳಗಾದೆ  ಎಂದು ಬೇಸರಗೊಂಡು ತನ್ನಿಬ್ಬರು ಮಕ್ಕಳ ಸಹಿತ ಕುಟುಂಬದ ಆರು ಸದಸ್ಯರನ್ನು ಕೊಂದು ಥಾಯ್ ವ್ಯಕ್ತಿ ತನ್ನನ್ನು ಗುಂಡಿಕ್ಕಿ ಹತ್ಯೆ ಮಾಡಿಕೊಂಡ ಘಟನೆ ಹೊಸವರ್ಷಾಚರಣೆ ಪಾರ್ಟಿ ವೇಳೆ ಬ್ಯಾಂಕಾಕ್ ನಲ್ಲಿ ನಡೆದಿದೆ.

ಬ್ಯಾಂಕಾಕ್ ನ ಚುಂಪೊನ್ ನ ದಕ್ಷಿಣ ಪ್ರಾಂತ್ಯದಲ್ಲಿ ಸುಚೀಪ್ ಸೊರ್ನ್ ಸಂಗ್ ತನ್ನ ಪತ್ನಿ ಹಾಗೂ ಕುಟುಂಬದವರ ಜೊತೆಗೂಡಿ ಮಧ್ಯರಾತ್ರಿ ಪಾರ್ಟಿ ಮಾಡಲು ಆರಂಭಿಸಿ ಕೆಲವೇ ಸಮಯದ ನಂತರ ಈ ಘಟನೆ ನಡೆದಿದೆ.

ಸುಚೀಪ್ ಸೊರ್ನ್ ಸಂಗ್ ಕುಟುಂಬ ಇಲ್ಲಿನ ಫಾಟೊ ಜಿಲ್ಲೆಯ ಬ್ಯೂಟಿ ಪಾರ್ಲರ್ ನಲ್ಲಿ ಹೊಸ ವರ್ಷದ ಪಾರ್ಟಿ ಆಯೋಜಿಸಲಾಗಿತ್ತು. ಸುಚೀಪ್ ಸಾಕಷ್ಟು ಮದ್ಯ ಸೇವಿಸಿದ್ದ. ಅದೇ ಮತ್ತಿನಲ್ಲಿ ಪಿಸ್ತೂಲ್ ತೆಗೆದು ಶೂಟ್ ಮಾಡಿದ್ದಾನೆ. ಹತ್ಯೆಯಾದವರೆಲ್ಲರೂ ಆತನ ಕುಟುಂಬ ಸದಸ್ಯರೇ ಆಗಿದ್ದಾರೆ ಎಂದು ಲೆಫ್ಟಿನೆಂಟ್ ಕರ್ನಲ್ ಲಾರ್ಪ್ ಕಂಪಾಪನ್ ಪೊಲೀಸರಿಗೆ ತಿಳಿಸಿದ್ದಾರೆ.

ತಾನು ಅಳಿಯನಾಗಿದ್ದರೂ ತನ್ನ ಪತ್ನಿ ಕಡೆಯವರು ಸರಿಯಾಗಿ ಸ್ವಾಗತಿಸಲಿಲ್ಲ,ಮರ್ಯಾದೆ ಕೊಡಲಿಲ್ಲ ಎಂದು ಸಿಟ್ಟಿನಿಂದ ಮದ್ಯದ ನಶೆಯಲ್ಲಿ ಎಲ್ಲರ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT