ವಿದೇಶ

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಮತ್ತೊಂದು ಮುನ್ನಡೆ!

Srinivas Rao BV

ವಿಶ್ವಸಂಸ್ಥೆ: ವಿಶ್ವಸಂಸ್ಥೆ ಭದ್ರತಾ ಸಂಸ್ಥೆಯಲ್ಲಿ ಭಾರತಕ್ಕೆ ಮತ್ತೊಂದು ಮುನ್ನಡೆ ದೊರೆತಿದೆ. 

ಭದ್ರತಾ ಮಂಡಳಿ ಕಾಶ್ಮೀರ ವಿಷಯವನ್ನು ತೆಗೆದುಕೊಳ್ಳುವ ಯಾವುದೇ ಉದ್ದೇಶವಿಲ್ಲ ಎಂದು ಯುಎನ್ಎಸ್ ಸಿಯ ಅಧ್ಯಕ್ಷರಾದ ಬ್ರಿಟನ್ ನ  ಶಾಶ್ವತ ಪ್ರತಿನಿಧಿಯಾಗಿರುವ ಕರೆನ್ ಪಿಯರ್ಸ್ ಹೇಳಿದ್ದಾರೆ.

ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಚರ್ಚಿಸುತ್ತದೆಯೇ ಎಂದು ಅರಬ್ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಕರೆನ್ ಪಿಯರ್ಸ್, ಕಾಶ್ಮೀರದ ವಿಷಯವಾಗಿ ಸದ್ಯಕ್ಕೆ ಚರ್ಚೆ ನಡೆಸುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. 

ವಿಶ್ವದಲ್ಲಿ ಸಾಕಷ್ಟು ಘಟನೆಗಳಾಗುತ್ತಿವೆ. ಒಂದು ತಿಂಗಳ ಅವಧಿಗೆ ಆಯ್ಕೆಯಾಗುವ ಅಧ್ಯಕ್ಷರು ಸಾಮಾನ್ಯವಾಗಿ ಚರ್ಚೆಯಾಗದಂತಹ ವಿಷಯಗಳನ್ನು ಚರ್ಚೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. 

SCROLL FOR NEXT