ವಿದೇಶ

ವಿಶ್ವಸಂಸ್ಥೆ ಶಾಶ್ವತ ಪ್ರತಿನಿಧಿಯನ್ನು ಬದಲಿಸಿದ ಪಾಕಿಸ್ತಾನ

Srinivas Rao BV

ಇಸ್ಲಾಮಾಬಾದ್: ಅಮೆರಿಕದಿಂದ ಹಿಂದಿರುಗಿದ ನಂತರ ಪ್ರಧಾನಿ ಇಮ್ರಾನ್ ಖಾನ್ ಮತ್ತು ವಿದೇಶಾಂಗ ಸಚಿವಾಲಯ ವಿಶ್ವಸಂಸ್ಥೆಗೆ ಇಸ್ಲಾಮಾಬಾದ್ ನ ಖಾಯಂ ಪ್ರತಿನಿಧಿ ಮಲೀಹಾ ಲೋಧಿ ಅವರನ್ನು ಬದಲಿಸಲು ಆದೇಶಿಸಿದೆ. ಇತ್ತೀಚಿನ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾರತ ಮೇಲುಗೈ ಸಾಧಿಸಿರುವುದು ಈ ಬದಲಾವಣೆಗೆ ಕಾರಣ ಎನ್ನಲಾಗಿದೆ.

ಮಾಜಿ ಸಂಪಾದಕಿ ಮತ್ತು ಲಂಡನ್;ನಲ್ಲಿ ಶಿಕ್ಷಣ ಪಡೆದ ಲೋಧಿ ಅವರು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಇಂಗ್ಲೆಂಡ್ ನ ವಿದೇಶಾಂಗ ಸಚಿವರು ಎಂದು ಟ್ವಿಟ್ಟರ್ ನಲ್ಲಿ ಬಣ್ಣಿಸಿದ್ದರು. ಇದರ ಬಳಿಕ ಒಂದು ತಪ್ಪಾಗಿದೆ ಎಂದಿದ್ದರು. 

ನಂತರ ತಪ್ಪಾದ ಸಂದೇಶವನ್ನು ಅಳಿಸಿಹಾಕಿದ್ದರು ಮತ್ತು ಅದನ್ನು 'ಮುದ್ರಣದೋಷ ದೋಷ' ಎಂದು ಹೇಳಿದ್ದರು. ಬೆನಜೀರ್ ಭುಟ್ಟೊ ಅವರ ಹತ್ಯೆ ಪ್ರಕರಣವನ್ನು ವಿಶ್ವಸಂಸ್ಥೆಗೆ ಹಾಜರುಪಡಿಸುವಲ್ಲಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಆಗಿನ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯಿಂದ ವಜಾಗೊಂಡ ಮುನೀರ್; ಅಕ್ರಂ ಮತ್ತೆ ವಿಶ್ವಸಂಸ್ಥೆಗೆ ಇಸ್ಲಾಮಾಬಾದ್ ನ ಖಾಯಂ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ.

SCROLL FOR NEXT