ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಜೊ ಬಿಡನ್ ಮತ್ತು ಕಮಲಾ ಹ್ಯಾರಿಸ್ 
ವಿದೇಶ

ಅಧಿಕಾರಕ್ಕೆ ಬಂದರೆ ಹೆಚ್-1ಬಿ ವೀಸಾ ಪ್ರಕ್ರಿಯೆ ಸುಧಾರಣೆ:ಡೆಮಾಕ್ರಟಿಕ್ ಪಕ್ಷ ಅಭ್ಯರ್ಥಿ ಜೊ ಬಿಡನ್ ಭರವಸೆ 

ಮುಂದಿನ ನವೆಂಬರ್ ನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ಬಂದರೆ ಹೆಚ್-1 ಬಿ ವೀಸಾ ವ್ಯವಸ್ಥೆಯನ್ನು ಸುಧಾರಿಸಲಿದ್ದು ಗ್ರೀನ್ ಕಾರ್ಡ್ ಗೆ ಕೋಟಾ ವ್ಯವಸ್ಥೆಯನ್ನು ತೆಗೆದುಹಾಕುವುದಾಗಿ ಅಧ್ಯಕ್ಷೀಯ ಪದವಿಯ ಅಭ್ಯರ್ಥಿ ಜೊ ಬಿಡನ್ ಭರವಸೆ ನೀಡಿದ್ದಾರೆ. 

ವಾಷಿಂಗ್ಟನ್: ಮುಂದಿನ ನವೆಂಬರ್ ನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ಬಂದರೆ ಹೆಚ್-1 ಬಿ ವೀಸಾ ವ್ಯವಸ್ಥೆಯನ್ನು ಸುಧಾರಿಸಲಿದ್ದು ಗ್ರೀನ್ ಕಾರ್ಡ್ ಗೆ ಕೋಟಾ ವ್ಯವಸ್ಥೆಯನ್ನು ತೆಗೆದುಹಾಕುವುದಾಗಿ ಅಧ್ಯಕ್ಷೀಯ ಪದವಿಯ ಅಭ್ಯರ್ಥಿ ಜೊ ಬಿಡನ್ ಭರವಸೆ ನೀಡಿದ್ದಾರೆ. 

ಇದು ಭಾರತೀಯ ಮೂಲದ ಅಮೆರಿಕ ಸಮುದಾಯವನ್ನು ಚುನಾವಣೆಯಲ್ಲಿ ಓಲೈಸಲು ಜೊ ಬಿಡನ್ ಮಾಡಿರುವ ಘೋಷಣೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಹೆಚ್-1ಬಿ ವೀಸಾ ವಲಸೆರಹಿತ ವೀಸಾವಾಗಿದ್ದು, ಅಮೆರಿಕದ ಕಂಪೆನಿಗಳು ತಾಂತ್ರಿಕ ಮತ್ತು ಇತರ ಕ್ಷೇತ್ರಗಳಲ್ಲಿ ವಿಶೇಷ ಪರಿಣಿತರಾಗಿರುವ ವಿದೇಶಿ ನೌಕರರನ್ನು ನೇಮಕಾತಿ ಮಾಡಲು ವಿದೇಶಿ ಉದ್ಯೋಗಿಗಳಿಗೆ ಅಮೆರಿಕ ಸರ್ಕಾರ ನೀಡುವ ವೀಸಾವಾಗಿದೆ.

ಈ ವೀಸಾ ಮೂಲಕ ಭಾರತ ಮತ್ತು ಚೀನಾ ದೇಶಗಳ ಸಾವಿರಾರು ವಿಶೇಷ ತಜ್ಞ ನೌಕರರನ್ನು ಅಮೆರಿಕದ ಕಂಪೆನಿಗಳು ನೇಮಕಾತಿ ಮಾಡುತ್ತವೆ. 

ನಿನ್ನೆ ಭಾರತ ದೇಶದ 74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅಮೆರಿಕದಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಜೊ ಬಿಡನ್, ಕುಟುಂಬ ಆಧಾರಿತ ವಲಸೆ ವ್ಯವಸ್ಥೆ ಮತ್ತು ಧಾರ್ಮಿಕ ಕೆಲಸಗಾರರ ವೀಸಾ ಪ್ರಕ್ರಿಯೆಯನ್ನು ಕೂಡ ಆರಂಭಿಸುವುದಾಗಿ ಹೇಳಿದರು. 

ಭಾರತೀಯ ಅಮೆರಿಕನ್ನರಿಗೆ ಈ ರೀತಿ ವಿಶೇಷ ನೀತಿ ದಾಖಲೆ ಆಧಾರಿತ ಘೋಷಣೆಯನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಮಾಡುತ್ತಿರುವುದು ಇದೇ ಮೊದಲು ಎನ್ನಬಹುದು. ಅಮೆರಿಕದ 8 ರಾಜ್ಯಗಳಲ್ಲಿ ಸುಮಾರು 13 ಲಕ್ಷ ಅರ್ಹ ಭಾರತೀಯ ಅಮೆರಿಕನ್ ಮತದಾರರಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್