ದುಬೈ ರಾಯಭಾರ ಕಚೇರಿ 
ವಿದೇಶ

ದುಬೈನಲ್ಲಿರುವ ವಲಸೆ ಕಾರ್ಮಿಕರಿಗೆ ರಾಯಭಾರ ಕಚೇರಿಯಿಂದ ಪ್ರತೀ ತಿಂಗಳು ಉಪಾಹಾರ ಔತಣಕೂಟ: ವರದಿ

ದುಬೈನಲ್ಲಿರುವ ವಲಸೆ ಕಾರ್ಮಿಕರಿಗೆ ರಾಯಭಾರ ಕಚೇರಿಯಿಂದ ಪ್ರತೀ ತಿಂಗಳು ಉಪಾಹಾರ ಔತಣಕೂಟ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ದುಬೈ: ದುಬೈನಲ್ಲಿರುವ ವಲಸೆ ಕಾರ್ಮಿಕರಿಗೆ ರಾಯಭಾರ ಕಚೇರಿಯಿಂದ ಪ್ರತೀ ತಿಂಗಳು ಉಪಾಹಾರ ಔತಣಕೂಟ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಹೊಸ ಸಾಮುದಾಯಿಕ ಕಾರ್ಯಕ್ರಮದ ಭಾಗವಾಗಿ ಇದೇ ಜನವರಿ 1 ರಿಂದ ಪ್ರತೀ ತಿಂಗಳು ಭಾರತ ಮೂಲದ ವಲಸೆ ಕಾರ್ಮಿಕರಿಗೆ ರಾಯಭಾರ ಕಚೇರಿಯಲ್ಲಿ ಉಪಾಹಾರ ಔತಣಕೂಟ ನೀಡಲು ನಿರ್ಧರಿಸಲಾಗಿದೆ. ದುಬೈ ಮತ್ತು ಉತ್ತರ ಎಮಿರೇಟ್ಸ್‌ನಲ್ಲಿ  ಭಾರತೀಯ ವಲಸಿಗರನ್ನು ಪೂರೈಸುವ ಭಾರತೀಯ ರಾಯಭಾರ ಕಚೇರಿ, ಯುಎಇಯ ಭಾರತೀಯರಿಗೆ ಪ್ರವಾಸಿ ಭಾರತೀಯ ಸಹಾಯತಾ ಕೇಂದ್ರ (ಪಿಬಿಎಸ್‌ಕೆ) ಸಹಯೋಗದೊಂದಿಗೆ 'ಬ್ರೇಕ್‌ಫಾಸ್ಟ್ ವಿತ್ ಕಾನ್ಸುಲ್ ಜನರಲ್' ಕಾರ್ಯಕ್ರಮ ಆಯೋಜಿಸಿದೆ.

ಈ ಬಗ್ಗೆ ಮಾತನಾಡಿರುವ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು, ಈ ಕಾರ್ಯಕ್ರಮವು ಆರ್ಥಿಕ ಸಾಕ್ಷರತೆ ಮತ್ತು ಯೋಜನೆ, ಹೊಸ ಕೌಶಲ್ಯಗಳು, ಆರೋಗ್ಯ ತಪಾಸಣೆ, ಪಿಬಿಎಸ್ ಕೆ ನೀಡುವ ಸೇವೆಗಳು ಮತ್ತು ಇತರ ಮಾಹಿತಿಯ ಬಗ್ಗೆ ಬ್ಲೂ-ಕಾಲರ್ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು  ಹೊಂದಿದೆ. ಕಾನ್ಸುಲ್ ಜನರಲ್ ಸಹವರ್ತಿ ಭಾರತೀಯರೊಂದಿಗೆ ಅವರ ವಸತಿಗೃಹದಲ್ಲಿ ಉಪಾಹಾರ ಸೇವಿಸಲಿದ್ದು, ಎಲ್ಲಾ ಕೋವಿಡ್-19 ಸುರಕ್ಷತಾ ಮಾನದಂಡಗಳು ಈ ವೇಳೆ ಜಾರಿಯಲ್ಲಿರಲಿವೆ ಎಂದು ಹೇಳಿದರು. 

ಈ ಯೋಜನೆಯ ಮೊದಲ ಕಾರ್ಯಕ್ರಮವು ಜನವರಿ 1 ಅಂದರೆ ಇದೇ ಶುಕ್ರವಾರ ದುಬೈ ನ ಲಾರ್ಸೆನ್ ಮತ್ತು ಟೂಬ್ರೊ ವಸತಿ ಸೌಕರ್ಯದಲ್ಲಿ ನಡೆಯಲಿದೆ ಎಂದು ಹೇಳಿದರು, ಈ ಯೋಜನೆಯಂತೆ ದುಬೈನ ಭಾರತದ ರಾಯಭಾರ ಅಧಿಕಾರಿ ಡಾ.ಅಮನ್ ಪುರಿ ಅವರು ಪ್ರತಿ ತಿಂಗಳು ಕಾರ್ಮಿಕರ ವಸತಿ  ಸೌಕರ್ಯಗಳಿಗೆ ಭೇಟಿ ನೀಡಲಿದ್ದಾರೆ. ಕಾರ್ಮಿಕರು ಸ್ವದೇಶದಲ್ಲಿದ್ದಾರೆ ಎಂಬ ಭಾವನೆಯನ್ನು ನಾವು ಅವರಿಗೆ ನೀಡಲು ಬಯಸುತ್ತೇವೆ ಎಂದು ಇದೇ ವೇಳೆ ಮಾತನಾಡಿದ ಅಮನ್ ಪುರಿ ಹೇಳಿದರು.  

ಭಾರತೀಯ ಆರ್ಥಿಕತೆಗೆ ಬ್ಲೂ ಕಾಲರ್ ಕಾರ್ಮಿಕರ ಮಹತ್ವ ಮತ್ತು ಕೊಡುಗೆಗಳನ್ನು ರಾಯಭಾರ ಕಚೇರಿ ಮತ್ತು ಭಾರತ ಸರ್ಕಾರ ಅಂಗೀಕರಿಸಿದೆ. ಕಾರ್ಮಿಕರ ಕಲ್ಯಾಣಾರ್ಥವಾಗಿ ನಾವು ಯಾವುದೇ ರೀತಿಯ ನೆರವನ್ನು ನೀಡಲು ಸಿದ್ಧವಾಗಿದ್ದೇವೆ ಎಂದು ಅವರು ಹೇಳಿದರು. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT