ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ 
ವಿದೇಶ

ಅಮೆರಿಕವನ್ನು ವಿಭಜಿಸದೇ, ಒಗ್ಗೂಡಿಸುವ ಅಧ್ಯಕ್ಷನಾಗಿರುತ್ತೇನೆ: ನೂತನ ಅಧ್ಯಕ್ಷ ಜೋ ಬೈಡನ್

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ದೇಶವನ್ನು ಉದ್ದೇಶಿಸಿ ನೂತನ ಅಧ್ಯಕ್ಷ ಜೋ ಬೈಡನ್ ಮೊದಲ ಭಾಷಣ ಮಾಡಿದ್ದು, ಇನ್ನು ಮುಂದೆ ಅಮೆರಿಕದಲ್ಲಿ ದೇಶವನ್ನು ವಿಭಜಿಸದೇ, ಒಗ್ಗೂಡಿಸುವ ಅಧ್ಯಕ್ಷರಿರುತ್ತಾರೆ ಎಂದು ಹೇಳಿದ್ದಾರೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ದೇಶವನ್ನು ಉದ್ದೇಶಿಸಿ ನೂತನ ಅಧ್ಯಕ್ಷ ಜೋ ಬೈಡನ್ ಮೊದಲ ಭಾಷಣ ಮಾಡಿದ್ದು, ಇನ್ನು ಮುಂದೆ ಅಮೆರಿಕದಲ್ಲಿ ದೇಶವನ್ನು ವಿಭಜಿಸದೇ, ಒಗ್ಗೂಡಿಸುವ ಅಧ್ಯಕ್ಷರಿರುತ್ತಾರೆ ಎಂದು ಹೇಳಿದ್ದಾರೆ.

ಮತದಾನದ ಮೂಲಕ ಈ ದೇಶದ ಜನರೇ ತಮಗೇನು ಬೇಕೋ ಅದರ ಬಗ್ಗೆ ಮಾತನಾಡಿದ್ದಾರೆ. ಅವರು ನಮಗೆ ಸ್ಪಷ್ಟ ಗೆಲುವು, ಮನವೊಪ್ಪಿಸುವ ವಿಜಯವನ್ನು ನೀಡಿದ್ದಾರೆ. ಅಮೆರಿಕ ಇತಿಹಾಸದಲ್ಲೇ ಓರ್ವ ಅಧ್ಯಕ್ಷೀಯ ಅಭ್ಯರ್ಥಿಗೆ ದಾಖಲೆ ಪ್ರಮಾಣದ ಮತನೀಡಿದ್ದಾರೆ. ಅವರ ನಂಬಿಕೆಯನ್ನು ನಾನು  ಕಳೆದುಕೊಳ್ಳಲಾರೆ. ನಾನು ದೇಶವನ್ನು ವಿಭಜನೆ ಮಾಡದೆ, ಏಕೀಕರಿಸುವ ಪ್ರಯತ್ನ ಮಾಡುವ ಅಧ್ಯಕ್ಷನಾಗುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಯಾರು ಕೆಂಪು ಮತ್ತು ನೀಲಿ ರಾಜ್ಯಗಳನ್ನು ನೋಡುವುದಿಲ್ಲ, ಆದರೆ ಅಮೆರಿಕ ಮತ್ತು ಅದರ ಇಡೀ ಜನರ ವಿಶ್ವಾಸವನ್ನು ಗೆಲ್ಲಲು ಹೃದಯದಿಂದ ಕೆಲಸ  ಮಾಡುತ್ತೇನೆ ಎಂದು ಹೇಳಿದರು.

ಇದೇ ವೇಳೆ, 'ಅಧ್ಯಕ್ಷ ಟ್ರಂಪ್‌ಗೆ ಮತ ಹಾಕಿದವರಿಗೆ ಈ ರಾತ್ರಿ ಆಗಿರುವ ನಿರಾಶೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಈಗ ಪರಸ್ಪರ ಅವಕಾಶ ನೀಡೋಣ. ಪರಸ್ಪರ ಗೊಂದಲಗಳನ್ನು ದೂರವಿಡಲು, ತಾಪಮಾನವನ್ನು ಕಡಿಮೆ ಮಾಡಲು, ಮತ್ತೆ ಒಬ್ಬರನ್ನೊಬ್ಬರು ಒಗ್ಗೂಡಿ ಕೆಲಸ ಮಾಡೋಣ. ಒಬ್ಬರಿಗೊಬ್ಬರು  ಅವಕಾಶ ನೀಡೋಣ. ನಮ್ಮ ವಿರೋಧಿಗಳನ್ನು ಶತ್ರುಗಳಂತೆ ಪರಿಗಣಿಸುವುದನ್ನು ನಿಲ್ಲಿಸಿ. ಅಮೆರಿಕವನ್ನು ಗುಣಪಡಿಸಲು ಇದು ಸೂಕ್ತ ಸಮಯ.

ನನಗೆ ಮತಹಾಕದವರಿಗೂ ನಾನು ನನಗೆ ಮತ ಹಾಕಿದವರಷ್ಟೇ ಪ್ರಾಮುಖ್ಯತೆ ನೀಡಿ ಕಠಿಣ ಶ್ರಮ ವಹಿಸಿ ಕೆಲಸ ಮಾಡುತ್ತೇನೆ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆ  ಮತ್ತು ವಿಶ್ವಾಸಕ್ಕೆ ನಾನು ವಿನಮ್ರನಾಗಿದ್ದೇನೆ. ಅಮೆರಿಕದ ಆತ್ಮವನ್ನು ಪುನಃ ಸ್ಥಾಪಿಸಲು, ಈ ರಾಷ್ಟ್ರದ, ಮಧ್ಯಮ ವರ್ಗದ ಬೆನ್ನೆಲುಬನ್ನು ಪುನರ್ನಿರ್ಮಿಸಲು ಮತ್ತು ಅಮೆರಿಕವನ್ನು ಮತ್ತೆ ವಿಶ್ವದಾದ್ಯಂತ ಗೌರವಿಸುವಂತೆ ಮಾಡಲು ಮತ್ತು ನಮ್ಮನ್ನು ಇಲ್ಲಿ ಮನೆಯಲ್ಲಿ ಒಂದುಗೂಡಿಸಲು ನಾನು ಈ ಕಚೇರಿಯನ್ನು  ಬಳಸಿಕೊಳ್ಳುತ್ತೇನೆ ಎಂದು ಬೈಡನ್ ಹೇಳಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT