ಆಸಿಸ್ ಪ್ರಧಾನಿ ಸ್ಕಾಟ್ ಮಾರಿಸನ್ 
ವಿದೇಶ

ಮಗುವನ್ನು ಹತ್ಯೆ ಮಾಡುತ್ತಿರುವ ಆಸ್ಟ್ರೇಲಿಯಾ ಸೈನಿಕನ ನಕಲಿ ಚಿತ್ರ ಹಂಚಿಕೊಂಡ ಚೀನಾ: ಕ್ಷಮೆಗೆ ಆಗ್ರಹಿಸಿದ ಆಸಿಸ್ ಪ್ರಧಾನಿ

ಮಗುವನ್ನು ಹತ್ಯೆ ಮಾಡುತ್ತಿರುವ ಆಸ್ಟ್ರೇಲಿಯಾ ಸೈನಿಕನ ನಕಲಿ ಚಿತ್ರ ಹಂಚಿಕೊಂಡ ಚೀನಾ ಸರ್ಕಾರವನ್ನು ಕಟುವಾದ ಶಬ್ದಗಳಿಂದ ಆಸಿಸ್ ಸರ್ಕಾರ ಖಂಡಿಸಿದ್ದು, ಕೂಡಲೇ ಚೀನಾ  ಸರ್ಕಾರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.

ನವದೆಹಲಿ: ಮಗುವನ್ನು ಹತ್ಯೆ ಮಾಡುತ್ತಿರುವ ಆಸ್ಟ್ರೇಲಿಯಾ ಸೈನಿಕನ ನಕಲಿ ಚಿತ್ರ ಹಂಚಿಕೊಂಡ ಚೀನಾ ಸರ್ಕಾರವನ್ನು ಕಟುವಾದ ಶಬ್ದಗಳಿಂದ ಆಸಿಸ್ ಸರ್ಕಾರ ಖಂಡಿಸಿದ್ದು, ಕೂಡಲೇ ಚೀನಾ  ಸರ್ಕಾರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.

ಹೌದು.. ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಲಿಜಿಯಾನ್ ಜಾವೋ ತಮ್ಮ ಟ್ವಿಟರ್ ಖಾತೆಯಲ್ಲಿ, ಅಫ್ಗಾನಿಸ್ತಾನದ ಮಗುವಿನ ಕುತ್ತಿಗೆಗೆ ಆಸ್ಟ್ರೇಲಿಯಾದ ಸೈನಿಕರೊಬ್ಬರು ಚಾಕು ಹಿಡಿದಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಆಸ್ಟ್ರೇಲಿಯಾದ ಸೈನಿಕರು ನಡೆಸಿರುವ  ಅಫ್ಗಾನ್‌ ನಾಗರಿಕರು ಮತ್ತು ಕೈದಿಗಳ ಹತ್ಯೆಯಿಂದ ಆಘಾತವಾಗಿದೆ. ಅಂತಹ ಕೃತ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಕೃತ್ಯಗಳಿಗೆ ಆಸ್ಟ್ರೇಲಿಯಾವನ್ನು ಹೊಣೆಗಾರರನ್ನಾಗಿ ಮಾಡಲು ನಾವು ಕರೆ ನೀಡುತ್ತೇವೆ ಎಂದು ಹೇಳಿದ್ದರು.

ಲಿಜಿಯಾನ್ ಜಾವೋ ಟ್ವೀಟ್ ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ ಕೂಡಲೇ ಚೀನಾ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ. ಅಂತೆಯೇ ಆಸ್ಟ್ರೇಲಿಯಾ ಸೈನಿಕನ ಚಿತ್ರವು ನಕಲಿ ಎಂದು ಹೇಳಿರುವ ಆಸ್ಟ್ರೇಲಿಯಾ, 'ಇದು ಅಸಹ್ಯಕರ' ಎಂದಿದೆ. ಅಲ್ಲದೆ, ಚಿತ್ರವನ್ನು  ಟ್ವಿಟರ್‌ನಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದೆ. 

ಈ ಕುರಿತಂತೆ ಮಾಧ್ಯಮಗೋಷ್ಠಿ ನಡೆಸಿದ ಅಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್‌ ಮೋರಿಸ್ಸನ್, ಚೀನಾ ತನ್ನ ಈ ನಡೆಗಾಗಿ ಚೀನಾ ಆಸ್ಟ್ರೇಲಿಯಾದ ಕ್ಷಮೆ ಕೋರಬೇಕು. ಲಿಜಿಯಾನ್ ಅವರು ತಮ್ಮ ಖಾತೆಯಿಂದ ಮಾಡಿರುವ ಪೋಸ್ಟ್‌ ಅನ್ನು ತೆಗೆದುಹಾಕಬೇಕು ಎಂದು ಹೇಳಿದ್ದಾರೆ.

ಈ ಹಿಂದೆ ಕೊರೊನಾ ವೈರಸ್‌ ಮೂಲದ ಬಗ್ಗೆ ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ತನಿಖೆಗೆ ಕರೆ ನೀಡಿದಾಗಿನಿಂದ ಚೀನಾದೊಂದಿಗಿನ ಆಸ್ಟ್ರೇಲಿಯಾದ ಸಂಬಂಧ ಹದಗೆಟ್ಟಿದೆ. ಇದೇ ಸನ್ನಿವೇಶದಲ್ಲಿ ನಡೆದಿರುವ ಈ ಘಟನೆ ಇಬ್ಬರ ನಡುವಿನ ಸಂಬಂಧಕ್ಕೆ ಮತ್ತಷ್ಟು ಪೆಟ್ಟು ನೀಡಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

SCROLL FOR NEXT