ಅರ್ಮೇನಿಯಾ ಸೈನಿಕರು 
ವಿದೇಶ

ಯುದ್ಧ ಭೂಮಿಯಾಗಿ ಮಾರ್ಪಟ್ಟ ನಾಗೋರ್ನೊ-ಕರಾಬಖ್‌: ಅಜರ್ ಬೈಜಾನ್‍ನ 3,000ಕ್ಕೂ ಹೆಚ್ಚು ಸೈನಿಕರು ಸಾವು

ಸಂಘರ್ಷ ಪೀಡಿತ ನಾಗೋರ್ನೊ-ಕರಾಬಖ್ ನಲ್ಲಿ ಯುದ್ಧಗಳು ಭುಗಿಲೆದ್ದಾಗಿನಿಂದ ಅಜರ್ ಬೈಜಾನ್ ಸೇನೆ 3,000 ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ ಎಂದು ಸ್ವಯಂ ಘೋಷಿತ ಗಣರಾಜ್ಯ ಅರ್ಟ್ ಸಖ್ ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ಶನಿವಾರ ತಿಳಿಸಿದ್ದಾರೆ.

ಯೆರೆವಾನ್: ಸಂಘರ್ಷ ಪೀಡಿತ ನಾಗೋರ್ನೊ-ಕರಾಬಖ್ ನಲ್ಲಿ ಯುದ್ಧಗಳು ಭುಗಿಲೆದ್ದಾಗಿನಿಂದ ಅಜರ್ ಬೈಜಾನ್ ಸೇನೆ 3,000 ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ ಎಂದು ಸ್ವಯಂ ಘೋಷಿತ ಗಣರಾಜ್ಯ ಅರ್ಟ್ ಸಖ್ ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ಶನಿವಾರ ತಿಳಿಸಿದ್ದಾರೆ.

ಅಜರ್ ಬೈಜಾನ್ ಈಗಾಗಲೇ 3,000 ಸೈನಿಕರನ್ನು ಕಳೆದುಕೊಂಡಿದೆ ಎಂದು ಗುಪ್ತಚರ ದತ್ತಾಂಶಗಳಿಂದ ಗೊತ್ತಾಗಿದೆ. ಹೆಚ್ಚಿನ ಮೃತದೇಹಗಳು ತಟಸ್ಥ ವಲಯದಲ್ಲೇ ಉಳಿದಿವೆ. ಇವುಗಳ ಸ್ಥಳಾಂತರಕ್ಕೆಗೆ ಏನೂ ಮಾಡಲಾಗುತ್ತಿಲ್ಲ ಎಂದು ವಾಗ್ರಾಮ್ ಪೊಗೊಸ್ಯಾನ್ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದಿದ್ದಾರೆ.

ಅಜರ್ ಬೈಜಾನ್ ಮತ್ತು ಅರ್ಮೇನಿಯಾ ನಡುವಿನ ವಿವಾದಿತ ನಾಗೋರ್ನೊ-ಕರಾಬಖ್ ಪ್ರಾಂತ್ಯ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಈ ಪ್ರಾಂತ್ಯದ ಏಳು ಜಿಲ್ಲೆಗಳು ಅಜರ್ ಬೈಜಾನ್ ಗೆ ಸೇರಿರುವುದಾಗಿ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿದ್ದರೂ, ಸ್ವಯಂ ಘೋಷಿತ ಅರ್ಟ್ ಸಖ್ ಈ ಪ್ರದೇಶವನ್ನು ನಿಯಂತ್ರಣದಲ್ಲಿಟ್ಟುಕೊಂಡಿದೆ. 

ಕಳೆದ ವಾರ ಅಜರ್ ಬೈಜಾನ್ ನ ಒಂದು ಹೆಲಿಕಾಪ್ಟರ್ ಮತ್ತು ಮೂರು ಡ್ರೋಣ್ ಗಳನ್ನು ಅರ್ಮೇನಿಯಾ ಹೊಡೆದುರುಳಿಸಿದ ನಂತರ ಘರ್ಷಣೆ ತೀವ್ರಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಿಚ್ಚು: ಕರ್ನಾಟಕಕ್ಕೆ ಮತ್ತೆ ಬಿಗ್ ಶಾಕ್‌; ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ CWRC ಆದೇಶ!

ಬೆಂಗಳೂರಿನಲ್ಲಿ ಭೀಕರ ದುರಂತ: ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಾವು!

'ನೀ ನನಗೆ ಇಷ್ಟ ಇಲ್ಲ': ಮದುವೆಯಾದ ಮೊದಲ ದಿನವೇ ಪತ್ನಿಗೆ ಶಾಕ್​​ ಕೊಟ್ಟ ಪತಿ; ಪ್ರಭಾವಿ ಸಚಿವರ PAಯಿಂದಲೇ ದೋಖಾ?

'ಮಲ್ಲಿಕಾರ್ಜುನ ಖರ್ಗೆಯಿಂದ ಸದಾ ಒತ್ತಡಕ್ಕೆ ಒಳಗಾಗಿರುತ್ತೇನೆ': ರಾಜ್ಯಸಭೆ ಸಭಾಪತಿ ಸಿಪಿ ರಾಧಾಕೃಷ್ಣನ್

ನೀಟ್ ರದ್ದುಗೊಳಿಸುವಂತೆ ಆಗ್ರಹಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಮಂಡನೆ