ಕಾಬೂಲಿನಲ್ಲಿ ತಾಲಿಬಾನಿಗಳ ಕಾವಲು 
ವಿದೇಶ

ಅಮೆರಿಕಕ್ಕೆ ಸಹಾಯ ಮಾಡಿದವರನ್ನು ತಾಲಿಬಾನ್ ಬೇಟೆಯಾಡುತ್ತಿದೆ: ವಿಶ್ವ ಸಂಸ್ಥೆ ವರದಿ ಬಹಿರಂಗ

ಅಮೆರಿಕ ಮತ್ತು ರಷ್ಯಾ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಹೋರಾಟ ಮಾಡಿರುವ ರಾಷ್ಟ್ರಗಳಾಗಿವೆ. ಮೂರು ಬಲಾಢ್ಯ ದೇಶಗಳಲ್ಲಿ ತಾಲಿಬಾನ್ ವಿರುದ್ಧ ಇದುವರೆಗೂ ಕಾದಾಡದ ದೇಶವೆಂದರೆ ಚೀನಾ. ಹೀಗಾಗಿ ಚೀನಾ ತಾಲಿಬಾನ್ ಜೊತೆ ಉತ್ತಮ ಬಾಂಧವ್ಯ ಹೊಂದುವ ಸಾಧ್ಯತೆ ಹೆಚ್ಚಾಗಿದೆ

ಜಿನೇವಾ: ಅಫ್ಘಾನಿಸ್ತಾನದಲ್ಲಿ ಕಳೆದ 20 ವರ್ಷಗಳಿಂದ ನೆಲೆಸಿದ್ದ ಅಮೆರಿಕ ಸೈನಿಕರಿಗೆ ಸಹಾಯ ಮಾಡಿದ ಸ್ಥಳೀಯರನ್ನು ತಾಲಿಬಾನ್ ಬೇಟೆಯಾಡುತ್ತಿರುವುದಾಗಿ ವಿಶ್ವಸಂಸ್ಥೆಯ ಗೌಪ್ಯ ವರದಿ ತಿಳಿಸಿದೆ. ಕಳೆದ ಭಾನುವಾರ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಳ್ಳುತ್ತಲೇ ದೇಶ ತೊರೆಯಲು ನಾಗರಿಕರು ಮುಂದಾಗಿದ್ದು, ಈಗಲೂ ಪರಿಸ್ಥಿತಿ ಮುಂದುವರಿದಿದೆ. ತಾಲಿಬಾನ್ ಸರ್ಪಗಾವಲಿನ ನಡುವೆಯೂ ನಾಗರಿಕರು ವಿಮಾನನಿಲ್ದಾಣಕ್ಕೆ ಕಾಲ್ನಡಿಗೆಯಲ್ಲಿ ಧಾವಿಸುತ್ತಿದ್ದಾರೆ. ದೇಶ ತೊರೆಯುವ ಸಣ್ಣ ಅವಕಾಶವಾದರೂ ಸಿಕ್ಕಿತೇನೋ ಎಂಬ ಆಸೆಯಿಂದ.

ಕಳೆದ ಭಾನುವಾರದಿಂದ ಇಂದಿನವರೆಗೆ 12 ಮಂದಿಯನ್ನು ತಾಲಿಬಾನ್ ಕೊಂದು ಹಾಕಿದೆ ಎಂದು ತಿಳಿದುಬಂದಿದೆ. ಅಲ್ಲದೆ ಕಳೆದ ೫ ದಿನಗಳ ಅವಧಿಯಲ್ಲಿ 18,000 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಗುರುವಾರ ದೇಶಾದ್ಯಂತ ತಾಲಿಬಾನ್ ಸ್ವಾತಂತ್ರ್ಯ ದಿನವನ್ನು ಆಚರಿಸಿದೆ. ಈ ಸಂಭ್ರಮಾಚರಣೆಯಲ್ಲಿ ತಾನು ಜಗತ್ತಿನ ಬಲಾಢ್ಯ ಶಕ್ತಿಯನ್ನು ಮಣಿಸಿದೆ ಎಂದು ಘೋಷಿಸಿಕೊಂಡಿದೆ. ಇದೇ ವೇಳೆ ಚೀನಾ ಮಾಧ್ಯಮದೊಂದಿಗೆ ಮಾತನಾಡಿದ ತಾಲಿಬಾನ್ ವಕ್ತಾರ ಸುಹೈಲ್ ಶಹೀನ್, ಚೀನಾ ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಸಕಾರಾತ್ಮಕ ಕೆಲಸ ನಿರ್ವಹಿಸಿದೆ ಎಂದಿದ್ದಾರೆ.

ಪ್ರಸ್ತುತ ಸಂದರ್ಭ ಅಮೆರಿಕ ಮತ್ತು ರಷ್ಯಾಗೆ ಹೋಲಿಸಿದಲ್ಲಿ ಚೀನಾ ತಾಲಿಬಾನ್ ಜೊತೆ ಉತ್ತಮ ಬಾಂಧವ್ಯ ಹೊಂದುವ ಸಾಧ್ಯತೆ ಹೆಚ್ಚಾಗಿದೆ ಎಂದು ರಾಜಕೀಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಅಮೆರಿಕ ಮತ್ತು ರಷ್ಯಾ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಹೋರಾಟ ಮಾಡಿರುವ ರಾಷ್ಟ್ರಗಳಾಗಿವೆ. ಮೂರು ಬಲಾಢ್ಯ ದೇಶಗಳಲ್ಲಿ ತಾಲಿಬಾನ್ ವಿರುದ್ಧ ಇದುವರೆಗೂ ಕಾದಾಡದ ದೇಶವೆಂದರೆ ಚೀನಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT