ವಿದೇಶ

ಹಾಡಿನ ಮೂಲಕ ಪುನೀತ್ ರಾಜಕುಮಾರ್ ಗೆ ಶ್ರದ್ಧಾಂಜಲಿ ಅರ್ಪಿಸಿದ ಪಾಕ್ ಅಭಿಮಾನಿ, ವಿಡಿಯೋ!

Vishwanath S

ಸ್ಯಾಂಡಲ್ವುಡ್ ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣ ಅಭಿಮಾನಿಗಳಿಗೆ ಬರಸಿಡಿಲು ಹೊಡೆದಂತಾಗಿದ್ದು ಅವರ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಕಂಠೀರವ ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. 

ಇನ್ನು ಇಲ್ಲಿಗೆ ಬರಲು ಸಾಧ್ಯವಾಗದ ಸಾಕಷ್ಟು ಅಭಿಮಾನಿಗಳು ತಾವು ಇರುವ ಜಾಗಗಳಿಂದಲೇ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಇನ್ನು ದೂರದ ಪಾಕಿಸ್ತಾನದಲ್ಲಿರುವ ಅಪ್ಪು ಅಭಿಮಾನಿಯೊಬ್ಬರು ರಾಜಕುಮಾರ್ ಚಿತ್ರದ ಬೊಂಬೆ ಹೇಳುತೈತೇ ಮತ್ತೆ ಹೇಳುತೈತೇ ನೀನೆ ರಾಜಕುಮಾರ. ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರವಾಗಿದೆ ಹಾಡನ್ನು ಹಾಡುವ ಮೂಲಕ ಅಪ್ಪುವನ್ನು ನೆನೆದಿದ್ದಾರೆ. 

ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ದೌಡಾಯಿಸುತ್ತಿರುವುದರಿಂದ ಇಂದು ಬದಲಾಗಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

SCROLL FOR NEXT