ಯುವಾನ್ ವಾಂಗ್ ನೌಕೆ 
ವಿದೇಶ

ಭಾರತ, ಅಮೆರಿಕಾ ಕಳವಳದ ನಡುವೆಯೂ ಲಂಕಾ ಬಂದರಿಗೆ ಚೀನಾದ ಸರ್ವೇಕ್ಷಣಾ ನೌಕೆ ಆಗಮನ!

ಭದ್ರತಾ ಕಾಳಜಿ ವಿಚಾರವಾಗಿ ಭಾರತದ ತೀವ್ರ ವಿರೋಧದ ನಡುವೆಯೂ ಚೀನಾದ ಬೇಹುಗಾರಿಕೆ ನೌಕೆ ಎಂದು ಕರೆಯಲ್ಪಡುವ ಯುವಾನ್ ವಾಂಗ್ ಸರ್ವೇಕ್ಷಣಾ ನೌಕೆ ಶ್ರೀಲಂಕಾದ ಹಂಬನ್‌ತೋಟ ಬಂದರಿಗೆ ಬಂದಿಳಿದಿದೆ.

ಹಂಬನ್‌ತೋಟ(ಶ್ರೀಲಂಕಾ): ಭದ್ರತಾ ಕಾಳಜಿ ವಿಚಾರವಾಗಿ ಭಾರತದ ತೀವ್ರ ವಿರೋಧದ ನಡುವೆಯೂ ಚೀನಾದ ಬೇಹುಗಾರಿಕೆ ನೌಕೆ ಎಂದು ಕರೆಯಲ್ಪಡುವ ಯುವಾನ್ ವಾಂಗ್ ಸರ್ವೇಕ್ಷಣಾ ನೌಕೆ ಶ್ರೀಲಂಕಾದ ಹಂಬನ್‌ತೋಟ ಬಂದರಿಗೆ ಬಂದಿಳಿದಿದೆ.

ಯುವಾನ್ ವಾಂಗ್ 5 ನೌಕೆಯನ್ನು ಶ್ರೀಲಂಕಾ ಬಂದರು ಅಧಿಕಾರಿಗಳು ಹಾಗೂ ಹಡಗು ಕಂಪನಿಯ ಚೀನಾದ ಅಧಿಕಾರಿಗಳು ಹಂಬನ್‌ತೋಟ ಬಂದರಿನಲ್ಲಿ ಸ್ವಾಗತಿಸಿದರು. ನೌಕೆಯ ಆಗಮನವು ಭಾರತದ ಕಳವಳಕ್ಕೆ ಕಾರಣವಾಗಿದ್ದು ಅಲ್ಲದೆ ಭಾರತ ಮತ್ತು ಚೀನಾ ನಡುವಿನ ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಹಡಗು ಆಗಸ್ಟ್ 11ರಂದೇ ಹಂಬನ್‌ತೋಟಗೆ ಆಗಮಿಸಬೇಕಿತ್ತು. ಆದರೆ ಭಾರತ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹೆಚ್ಚಿನ ಸಮಾಲೋಚನೆಗಳು ನಡೆಯುವವರೆಗೂ ಆಗಮನವನ್ನು ಮುಂದೂಡುವಂತೆ ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಚೀನಾವನ್ನು ಕೇಳಿಕೊಂಡಿತ್ತು.

ಇದೀಗ ಸುದೀರ್ಘ ಮಾತುಕತೆ ಬಳಿಕ ನೌಕೆಗೆ ಹಂಬನ್‌ತೋಟದಲ್ಲಿ ಆ.22ರ ವರೆಗೆ ಲಂಗರು ಹಾಕಲು ಅನುಮತಿ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ನೌಕೆ ತನ್ನ ಗುರುತಿನ ವ್ಯವಸ್ಥೆಗಳನ್ನು ಇರಿಸಿಕೊಳ್ಳಲು ಜೊತೆಗೆ ಶ್ರೀಲಂಕಾ ನೀರಿನಲ್ಲಿ ಯಾವುದೇ ಸಂಶೋಧನಾ ಚಟುವಟಿಕೆಗಳನ್ನು ನಡೆಸುವುದಿಲ್ಲ ಎಂದು ಎರಡು ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಭಾರತ ಸೋಮವಾರ ತನ್ನ ಕಡಲ ಭದ್ರತೆಯನ್ನು ಬಲಪಡಿಸಲು ಶ್ರೀಲಂಕಾಕ್ಕೆ ಸಮುದ್ರ ವಿಚಕ್ಷಣ ವಿಮಾನವನ್ನು ಉಡುಗೊರೆಯಾಗಿ ನೀಡಿತ್ತು. ಭಾರತಕ್ಕೆ ತರಬೇತಿ ನೀಡಿದ ಶ್ರೀಲಂಕಾದ ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿ ಭಾರತೀಯ ಸಿಬ್ಬಂದಿಯ ಕಾರ್ಯಾಚರಣೆಯ ಬೆಂಬಲದೊಂದಿಗೆ ವಿಮಾನವನ್ನು ನಿರ್ವಹಿಸುತ್ತಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT