ಸಾನಿಯಾ ಖಾನ್ 
ವಿದೇಶ

ಚಿಕಾಗೋಗೆ ಪ್ರಯಾಣಿಸಿ ಮಾಜಿ ಪತ್ನಿ, ಪಾಕ್ ಮೂಲದ ಫೋಟೋಗ್ರಾಫರ್ ಗುಂಡಿಟ್ಟು ಹತ್ಯೆ; ನಂತರ ವ್ಯಕ್ತಿ ಆತ್ಮಹತ್ಯೆ!

ಪಾಕಿಸ್ತಾನಿ ಮೂಲದ ಖ್ಯಾತ ಮಹಿಳಾ ಛಾಯಾಗ್ರಾಹಕಿ ಸಾನಿಯಾ ಖಾನ್ (29) ಅವರನ್ನು ಆಕೆಯ ಮಾಜಿ ಪತಿ ಗುಂಡಿಕ್ಕಿ ಕೊಂದಿದ್ದಾರೆ.

ಪಾಕಿಸ್ತಾನಿ ಮೂಲದ ಖ್ಯಾತ ಮಹಿಳಾ ಛಾಯಾಗ್ರಾಹಕಿ ಸಾನಿಯಾ ಖಾನ್ (29) ಅವರನ್ನು ಆಕೆಯ ಮಾಜಿ ಪತಿ ಗುಂಡಿಕ್ಕಿ ಕೊಂದಿದ್ದಾರೆ. 

ಸಾನಿಯಾ ಖಾನ್ ತನ್ನ ವೈವಾಹಿಕ ಸಂಕಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ್ದು ಕೊಲೆಗೆ ಪ್ರೇರಣೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಾನಿಯಾಳನ್ನು ಆಕೆಯ 36 ವರ್ಷದ ಮಾಜಿ ಪತಿ ರಹೀಲ್ ಅಹ್ಮದ್ ಗುಂಡಿಟ್ಟು ಕೊಂದಿದ್ದ. ನಂತರ ತಾನೂ ಗುಂಡು ಹಾರಿಸಿಕೊಂಡಿದ್ದಾನೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆತ ಜಾರ್ಜಿಯಾದಿಂದ ಅಮೆರಿಕಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಟಿಕ್‌ಟಾಕ್‌ನಲ್ಲಿ ವಿಚ್ಛೇದನದ ಬಗ್ಗೆ ಸಾನಿಯಾ ಬಹಿರಂಗಪಡಿಸಿದ ನಂತರ, ಆತ ಜಾರ್ಜಿಯಾದಿಂದ ಚಿಕಾಗೋಗೆ ಪ್ರಯಾಣಿಸಿದ್ದನು. ಸ್ಟ್ರೀಟರ್‌ವಿಲ್ಲೆಯಲ್ಲಿರುವ ಸಾನಿಯಾ ಖಾನ್ ವಾಸಿಸುವ ಅಪಾರ್ಟ್ಮೆಂಟ್ಗೆ ಬಂದಿದ್ದ ರಹೀಲ್ ಸಾನಿಯಾ ಜೊತೆ ವಾಗ್ವಾದ ನಡೆಸಿ ಗುಂಡು ಹಾರಿಸಿದ್ದಾನೆ. ಶಬ್ದ ಕೇಳಿ ಅಕ್ಕಪಕ್ಕದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಪೊಲೀಸರು ಬಂದಾಗ ಆತ ಗುಂಡು ಹಾರಿಸಿಕೊಂಡಿದ್ದಾನೆ. ಪೊಲೀಸರು ಬಾಗಿಲು ತೆರೆದಾಗ ಇಬ್ಬರನ್ನೂ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸಾನಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೊಲೀಸರಿಗೆ ರಾಹೀಲ್ ಆತ್ಮಹತ್ಯೆ ಪತ್ರ ಸಿಕ್ಕಿದೆ. ಸಾನಿಯಾ ತಮ್ಮ ವೈವಾಹಿಕ ಜೀವನದಲ್ಲಿ ಎದುರಿಸಿದ ಸಮಸ್ಯೆಗಳನ್ನು ಟಿಕ್ ಟಾಕ್ ಮೂಲಕ ಬಹಿರಂಗಪಡಿಸಿದ್ದರು. ಕಳೆದ ವರ್ಷ ಇಬ್ಬರೂ ವಿಚ್ಛೇದನ ಪಡೆದಿದ್ದರು.

ಸಾನಿಯಾ ಖಾನ್ ತನ್ನ ವೈವಾಹಿಕ ಮತ್ತು ವೈಯಕ್ತಿಕ ಹೋರಾಟಗಳ ಬಗ್ಗೆ ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಒಂದು ಟಿಕ್‌ಟಾಕ್ ಪೋಸ್ಟ್‌ನಲ್ಲಿ ಅವರು 'ನೀವು ಒಮ್ಮೆ ಪ್ರೀತಿಸಿದ ವ್ಯಕ್ತಿಯಿಂದ ದೂರ ಹೋಗುವುದು ನೋವಿನ ಸಂಗತಿ. ಆದರೆ ನಿಮ್ಮ ಹೃದಯದಿಂದ ಅಸಡ್ಡೆ ಹೊಂದಿರುವ ವ್ಯಕ್ತಿಯನ್ನು ಪ್ರೀತಿಸುವುದು ಅದಕ್ಕಿಂತ ಹೆಚ್ಚು ನೋವುಂಟು ಮಾಡುತ್ತದೆ ಎಂದು ಬರೆದುಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT