ಚೀನಾ ಸೇನೆ ಸಮರಾಭ್ಯಾಸ 
ವಿದೇಶ

ಜೀವಂತ ಮದ್ದು-ಗುಂಡುಗಳ ಸಹಿತ ತೈವಾನ್ ಮೇಲೆ ಚೀನಾ ಅಣಕುದಾಳಿ ಕಾರ್ಯಾಚರಣೆ

ಜೀವಂತ ಮದ್ದು-ಗುಂಡುಗಳ ಸಹಿತ ಯುದ್ದ ವಿಮಾನಗಳ ಮೂಲಕ ತೈವಾನ್ ಮೇಲೆ ಚೀನಾ ಅಣಕುದಾಳಿ ಕಾರ್ಯಾಚರಣೆ ನಡೆಸಿದೆ.

ತೈಪೆ: ಜೀವಂತ ಮದ್ದು-ಗುಂಡುಗಳ ಸಹಿತ ಯುದ್ದ ವಿಮಾನಗಳ ಮೂಲಕ ತೈವಾನ್ ಮೇಲೆ ಚೀನಾ ಅಣಕುದಾಳಿ ಕಾರ್ಯಾಚರಣೆ ನಡೆಸಿದೆ.

ತೈವಾನ್ ಅನ್ನು ಸುತ್ತುವರಿದು ಮಿಲಿಟರಿ ಕವಾಯತು ಆರಂಭಿಸಿರುವ ಚೀನಾ, ಎರಡನೇ ದಿನವಾದ ಭಾನುವಾರ ಕೂಡ ತೈವಾನ್ ಮೇಲಿನ ಅಣಕುದಾಳಿಯ ಮೂಲಕ ಸಮರಾಭ್ಯಾಸ ಮುಂದುವರಿಸಿದೆ. ಚೀನಾದ ಉಗ್ರ ಸಮರಾಭ್ಯಾಸಕ್ಕೆ ತೈವಾನ್ನಿಂದ  ಖಂಡನೆ ವ್ಯಕ್ತವಾಗಿದ್ದರೆ ಚೀನಾದ ಚಟುವಟಿಕೆಗಳನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಅಮೆರಿಕ ಪ್ರತಿಕ್ರಿಯಿಸಿದೆ. ಆದರೆ ಮೂರು ದಿನಗಳ ಸಮರಾಭ್ಯಾಸ ಪೂರ್ವನಿಗದಿತ ರೀತಿಯಲ್ಲಿಯೇ ಮುಂದುವರಿಯಲಿದೆ ಎಂದು ಚೀನಾದ ಸೇನೆ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದೆ.

ದ್ವೀಪದ ಸುತ್ತ ಚೀನಾದ 11 ಸಮರನೌಕೆಗಳು ಹಾಗೂ 70 ಯುದ್ಧವಿಮಾನಗಳನ್ನು ಪತ್ತೆಹಚ್ಚಲಾಗಿದೆ ಎಂದು ತೈವಾನ್ನ ರಕ್ಷಣಾ ಸಚಿವಾಲಯ ಹೇಳಿದೆ. ಎರಡನೇ ದಿನದ ಸಮರಾಭ್ಯಾಸದಲ್ಲಿ ತೈವಾನ್ ಜಲಸಂಧಿಯಲ್ಲಿ ತೈವಾನ್ ದ್ವೀಪ ಮತ್ತು ಸುತ್ತಮುತ್ತಲಿನ ಸಾಗರದಲ್ಲಿನ ಪ್ರಮುಖ ಗುರಿಗಳ ಮೇಲೆ ಅಣಕು ದಾಳಿಯನ್ನು ನಡೆಸಿವೆ. ದ್ವೀಪವನ್ನು ನಿಕಟವಾಗಿ ಸುತ್ತುವರಿಯುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಚೀನಾ ಸೇನೆ ಹೇಳಿದೆ. ಸೋಮವಾರದ ಸಮರಾಭ್ಯಾಸವು ತೈವಾನ್ನ ಮಾತ್ಸು ದ್ವೀಪದ ಸುಮಾರು 80 ಕಿ.ಮೀ ದೂರದಲ್ಲಿರುವ ಫುಜಿಯಾನ್ ಪ್ರಾಂತ್ಯದಲ್ಲಿ ನಡೆಯಲಿದೆ.

ಈ ಸಮರಾಭ್ಯಾಸವು ತೈವಾನ್ನ ಸ್ವಾತಂತ್ರ್ಯ ಬಯಸುವ ಪ್ರತ್ಯೇಕತಾವಾದಿ ಶಕ್ತಿಗಳು ಮತ್ತು ಬಾಹ್ಯಶಕ್ತಿಗಳ ನಡುವಿನ ಒಪ್ಪಂದ ಹಾಗೂ ಅವರ ಪ್ರಚೋದನಕಾರಿ  ಚಟುವಟಿಕೆಗಳ ವಿರುದ್ಧ ಕಠಿಣ ಎಚ್ಚರಿಕೆಯಾಗಲಿದೆ ಎಂದು ಚೀನಾ ಸೇನೆಯ ವಕ್ತಾರ ಶಿ ಯಿನ್ ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT