ಫ್ರಾನ್ಸ್ ಸರ್ಕಾರ ಪತನ 
ವಿದೇಶ

France ನಲ್ಲಿ ರಾಜಕೀಯ ಕೋಲಾಹಲ: ವಿಶ್ವಾಸಮತ ಸೋತ ಪ್ರಧಾನಿ, ರಾಜಿನಾಮೆ ಸಾಧ್ಯತೆ

ಪ್ರಧಾನಿ ಮೈಕೆಲ್ ಬರ್ನಿಯರ್‌ ಮತ್ತು ಅವರ ಕ್ಯಾಬಿನೆಟ್‌ ವಿರುದ್ಧ ಫ್ರಾನ್ಸ್‌ ಸಂಸದರು ಬುಧವಾರ ಅವಿಶ್ವಾಸಮತ ಅಂಗೀಕರಿಸಿದ್ದು, ಇದರೊಂದಿಗೆ ದೇಶದಲ್ಲಿ ಹೊಸ ರಾಜಕೀಯ ಸಂದಿಗ್ಧತೆ ಸೃಷ್ಟಿಯಾಗಿದೆ.

ಪ್ಯಾರಿಸ್: ಕುತೂಹಲಕಾರಿ ಬೆಳವಣಿಗೆಯಲ್ಲಿ ಫ್ರಾನ್ಸ್ ನಲ್ಲಿ ಪ್ರಧಾನಿ ಮೈಕೆಲ್ ಬರ್ನಿಯರ್ ಸರ್ಕಾರ ಪತನವಾಗಿದ್ದು, ಇಂದು ನಡೆದ ಅವಿಶ್ವಾಸ ನಿರ್ಣಯದಲ್ಲಿ ಬಹುಮತ ಪಡೆಯುವಲ್ಲಿ ಮೈಕೆಲ್ ಬರ್ನಿಯರ್ ವಿಫಲರಾಗಿದ್ದಾರೆ.

ಹೌದು.. ಪ್ರಧಾನಿ ಮೈಕೆಲ್ ಬರ್ನಿಯರ್‌ ಮತ್ತು ಅವರ ಕ್ಯಾಬಿನೆಟ್‌ ವಿರುದ್ಧ ಫ್ರಾನ್ಸ್‌ ಸಂಸದರು ಬುಧವಾರ ಅವಿಶ್ವಾಸಮತ ಅಂಗೀಕರಿಸಿದ್ದು, ಇದರೊಂದಿಗೆ ದೇಶದಲ್ಲಿ ಹೊಸ ರಾಜಕೀಯ ಸಂದಿಗ್ಧತೆ ಸೃಷ್ಟಿಯಾಗಿದೆ. ಅವಿಶ್ವಾಸ ನಿರ್ಣಯದಲ್ಲಿ ಪ್ರಧಾನಿ ಮೈಕೆಲ್ ಬರ್ನಿಯರ್ ಪದಚ್ಯುತಗೊಂಡ ನಂತರ ಫ್ರಾನ್ಸ್ ಸರ್ಕಾರ ಪತನಗೊಂಡಿದೆ.

ಸಂಸದರು ಅವರ ವಿರುದ್ಧದ ನಿರ್ಣಯವನ್ನು ಬೆಂಬಲಿಸಲು ಅಗಾಧವಾಗಿ ಮತ ಹಾಕಿದ್ದು, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ನೇಮಕಗೊಂಡ ಕೇವಲ ಮೂರು ತಿಂಗಳ ಅವಧಿಯಲ್ಲೇ ಮೈಕೆಲ್ ಬರ್ನಿಯರ್ ಪತನಗೊಂಡಿದೆ.

ಫ್ರಾನ್ಸ್‌ ಸಂಸತ್ತಿನ ಕೆಳಮನೆಯಲ್ಲಿ 331 ಸಂಸದರು ಅವಿಶ್ವಾಸಮತ ನಿರ್ಣಯದ ಪರ ಮತ ಚಲಾಯಿಸಿದ್ದು, ಈ ನಿರ್ಣಯ ಅಂಗೀಕಾರಗೊಳ್ಳಲು ಕನಿಷ್ಠ 288 ಮತಗಳ ಅಗತ್ಯವಿದೆ. ಇದರಿಂದಾಗಿ, ಅಧಿಕಾರಕ್ಕೇರಿದ ಮೂರೇ ತಿಂಗಳಲ್ಲಿ ಬರ್ನಿಯರ್ ಅವರು ರಾಜೀನಾಮೆ ನೀಡುವಂತಾಗಿದೆ.

ಫ್ರಾನ್ಸ್ ರಾಜಕೀಯ ಕೋಲಾಹಲಕ್ಕೆ ಕಾರಣವೇನು?

ಸಾಲದ ಹೊರೆಯಿಂದ ಕಂಗೆಟ್ಟಿರುವ ಫ್ರಾನ್ಸ್‌, ಸ್ಥಿರ ಬೆಳವಣಿಗೆ ಸಾಧಿಸಲು ಶ್ರಮಿಸುತ್ತಿರುವ ಹೊತ್ತಿನಲ್ಲೇ ಸರ್ಕಾರ ಪತನಗೊಳ್ಳುತ್ತಿದೆ. ಆದಾಗ್ಯೂ, ಎಮ್ಯಾನುವೆಲ್‌ ಮ್ಯಾಕ್ರನ್‌ ಅವರು ಅಧ್ಯಕ್ಷರಾಗಿಯೇ ಮುಂದುವರಿಯಲಿದ್ದಾರೆ. ಆದರೆ, ಅವರಿಗೂ ಬೆಂಬಲ ಅಸ್ಥಿರವಾಗಿದೆ. ಮ್ಯಾಕ್ರನ್‌ ನೂತನ ಪ್ರಧಾನಿಯನ್ನು ಹೆಸರಿಸುವವರೆಗೆ ಬರ್ನಿಯರ್‌ ಅವರೇ ಉಸ್ತುವಾರಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗಿದೆ.

ಫ್ರಾನ್ಸ್ ಸಂಸತ್ತಿಗೆ ಇದೇ ವರ್ಷ ಜುಲೈನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರಕಿರಲಿಲ್ಲ. ಇದರಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡನೇ ಮಹಾಯುದ್ಧದ ಬಳಿಕ ಫ್ರಾನ್ಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಸ್ಥಿತಿ ಎದುರಾಗಿದೆ. 1962ರ ನಂತರ ಅವಿಶ್ವಾಸ ಮತದಲ್ಲಿ ದೇಶದ ಸರ್ಕಾರ ಪತನಗೊಂಡಿರುವುದು ಇದೇ ಮೊದಲು.

ಅಂದಹಾಗೆ ಬರ್ನಿಯರ್‌ಗೂ ಮುನ್ನ ಪ್ರಧಾನಿಯಾಗಿದ್ದ ಗೇಬ್ರಿಯಲ್ ಅಟ್ಟಲ್, 2024ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಅಧಿಕಾರದಲ್ಲಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT