ಬ್ರೂನಿಯಲ್ಲಿರುವ ಹೋಟೆಲ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ ಸಮುದಾಯದವರು ಸ್ವಾಗತಿಸಿದರು. 
ವಿದೇಶ

ಬ್ರೂನೈಗೆ ಭಾರತದ ಮೊದಲ ಪ್ರಧಾನಿ ಭೇಟಿ; ಮೋದಿಗೆ ಕ್ರೌನ್ ಪ್ರಿನ್ಸ್ ರಿಂದ ಅದ್ಧೂರಿ ಸ್ವಾಗತ

ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದ್ದಕ್ಕಾಗಿ ಕ್ರೌನ್ ಪ್ರಿನ್ಸ್ ಹಾಜಿ ಅಲ್ ಮುಹ್ತದಿ ಬಿಲ್ಲಾ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ," ಎಂದು ಪ್ರಧಾನಿ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನವದೆಹಲಿ: ಭಾರತದ ಪ್ರಧಾನಿಯೊಬ್ಬರು ಮೊದಲ ಬಾರಿಗೆ ಬ್ರೂನೈಗೆ ಭೇಟಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ರೌನ್ ಪ್ರಿನ್ಸ್ ಹಾಜಿ ಅಲ್ ಮುಹ್ತದಿ ಬಿಲ್ಲಾ ಅವರು ಅದ್ಧೂರಿ ಸ್ವಾಗತ ನೀಡಿದರು.

"ಬ್ರೂನೈ ದರುಸ್ಸಲಾಮ್‌ಗೆ ಬಂದಿಳಿದಿದ್ದೇವೆ. ನಮ್ಮ ಎರಡು ರಾಷ್ಟ್ರಗಳ ನಡುವಿನ ಬಲವಾದ ಬಾಂಧವ್ಯವನ್ನು ವಿಶೇಷವಾಗಿ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೆಚ್ಚಿಸಲು ಎದುರು ನೋಡುತ್ತಿದ್ದೇವೆ. ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದ್ದಕ್ಕಾಗಿ ಕ್ರೌನ್ ಪ್ರಿನ್ಸ್ ಹಾಜಿ ಅಲ್ ಮುಹ್ತದಿ ಬಿಲ್ಲಾ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ," ಎಂದು ಪ್ರಧಾನಿ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತದ 'ಆಕ್ಟ್ ಈಸ್ಟ್' ನೀತಿ ಮತ್ತು ಇಂಡೋ-ಪೆಸಿಫಿಕ್ ವಿಷನ್‌ನಲ್ಲಿ ಬ್ರೂನೈ ಪ್ರಮುಖ ಪಾಲುದಾರನಾಗಿದೆ. ಪ್ರಧಾನಿ ಮೋದಿ ಅವರನ್ನು ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಅವರು ಬ್ರೂನೈಗೆ ಆಹ್ವಾನಿಸಿದ್ದಾರೆ.

ಬ್ರೂನಿಯಲ್ಲಿರುವ ಹೋಟೆಲ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ ಸಮುದಾಯದವರು ಸ್ವಾಗತಿಸಿದರು.

ಭಾರತ ಮತ್ತು ಬ್ರೂನಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವಿಷಯಗಳ ಬಗ್ಗೆ ಸೌಹಾರ್ದ ಸಂಬಂಧವನ್ನು ಹೊಂದಿವೆ. ಎರಡು ದೇಶಗಳು ಸಹಸ್ರಮಾನದ ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯದಿಂದ ನಂಟು ಹೊಂದಿವೆ. ಸುಮಾರು 14,000 ಭಾರತೀಯರು ಇರುವ ಒಂದು ಸಣ್ಣ ರಾಷ್ಟ್ರವಾಗಿದೆ.

ನಳಂದ ವಿಶ್ವವಿದ್ಯಾನಿಲಯದ ಯೋಜನೆಯಲ್ಲಿ ಬ್ರೂನೈ ಸಹ ಪಾಲುದಾರ ರಾಷ್ಟ್ರವಾಗಿದೆ. 2023-24ರಲ್ಲಿ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ 286.20 ಮಿಲಿಯನ್ ಡಾಲರ್ ಆಗಿತ್ತು. ರಕ್ಷಣಾ ಸಹಕಾರದ ಅನುಷ್ಠಾನಕ್ಕಾಗಿ ಒಂದು ಒಪ್ಪಂದಕ್ಕೆ 2016 ರಲ್ಲಿ ಸಹಿ ಹಾಕಲಾಯಿತು ಮತ್ತು 2021 ರಲ್ಲಿ ಅದನ್ನು ನವೀಕರಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೊನೆಗೂ ಯುದ್ಧ ಅಂತ್ಯಗೊಳಿಸಲು ಇರಾನ್ ಮುಂದು! ಆದ್ರೆ ಅಮೆರಿಕ, ಇಸ್ರೇಲ್ ಗೆ ಹಾಕಿದ ಷರತ್ತುಗಳೇನು?

ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು: ಹಾರ್ಮುಜ್ ಜಲಸಂಧಿಯಿಂದ ಮುಂಬೈಗೆ ಬಂದ ಮೊದಲ ತೈಲ ಹಡಗು!

ಇರಾಕ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಆತ್ಮಾಹುತಿ ದಾಳಿ: ಭಾರತೀಯ ಪ್ರಜೆ ಸಾವು

'ನಾಮ್ ನರೇಂದರ್-ಕಾಮ್ ಸರೆಂಡರ್: ಅದಾನಿ, ಎಪ್‌ಸ್ಟೀನ್ ಕೇಸ್‌ನಿಂದ ಮೋದಿ ಪ್ಯಾನಿಕ್ ಆಗಿದ್ದಾರೆ, LPG ಸಂಕಷ್ಟದಿಂದಲ್ಲ'

Death folder: ಅನಿವಾಸಿ ಭಾರತೀಯರು ಗಮನ ಹರಿಸಬೇಕಾದ ಅಂಶಗಳಿವು... (ಹಣಕ್ಲಾಸು)

SCROLL FOR NEXT