ಡೊನಾಲ್ಡ್ ಟ್ರಂಪ್ ಮತ್ತು ಅವರ ಮಾಜಿ ಆಪ್ತ ಜಾನ್ ಬೋಲ್ಟನ್ 
ವಿದೇಶ

ಚೀನಾಕ್ಕೆ ವಿನಾಯ್ತಿ ನೀಡಿ ಭಾರತದ ಮೇಲೆ ಅಮೆರಿಕ ದುಪ್ಪಟ್ಟು ಸುಂಕ: 'ಮಹಾ ತಪ್ಪು' ಎಂದ ಟ್ರಂಪ್ ಮಾಜಿ ಆಪ್ತ!

ಟ್ರಂಪ್ ಏಪ್ರಿಲ್‌ನಲ್ಲಿ ಚೀನಾದೊಂದಿಗೆ ಕಿರು ವ್ಯಾಪಾರ ವಾರ್ ನಲ್ಲಿ ತೊಡಗಿದ್ದರು ಆದರೆ ತದನಂತರ ಯಾವುದೇ ಬಿಕ್ಕಟ್ಟು ಸೃಷ್ಟಿಯಾಗದಂತೆ ತಡೆಹಿಡಿಯಲಾಗಿತ್ತು. ಒಪ್ಪಂದವೊಂದು ಇನ್ನೂ ಬಾಕಿಯಿದೆ.

ವಾಷಿಂಗ್ಟನ್: ರಷ್ಯಾ ಮತ್ತು ಚೀನಾದಿಂದ ಭಾರತವನ್ನು ದೂರ ತರುವ ಅಮೆರಿಕದ ದಶಕಗಳ ಪ್ರಯತ್ನಗಳಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧಕ್ಕೆ ತಂದಿದ್ದಾರೆ ಎಂದು ಅವರ ಮಾಜಿ ಆಪ್ತ ಜಾನ್ ಬೋಲ್ಟನ್ ಹೇಳಿದ್ದಾರೆ.

ರಷ್ಯಾದ ತೈಲ ಖರೀದಿಸಲು ಅಮೆರಿಕವು ಭಾರತದ ಮೇಲೆ ಹೇರಿರುವ ಭಾರಿ ಸುಂಕದ ಅಂಶವನ್ನು ಉಲ್ಲೇಖಿಸಿ ಮಾತನಾಡಿರುವ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರರು ಆದ ಬೊಲ್ಟನ್, ಚೀನಾದೊಂದಿಗೆ ಮೃಧುತ್ವದೊಂದಿಗೆ ಭಾರತದ ವಿರುದ್ಧ ಟ್ರಂಪ್ ಪಕ್ಷಪಾತ ಮಾಡುತ್ತಿದ್ದಾರೆ. ಇದು "ಅಗಾಧವಾದ ತಪ್ಪು" ಎಂದಿದ್ದಾರೆ.

ಟ್ರಂಪ್ ಏಪ್ರಿಲ್‌ನಲ್ಲಿ ಚೀನಾದೊಂದಿಗೆ ಕಿರು ವ್ಯಾಪಾರ ವಾರ್ ನಲ್ಲಿ ತೊಡಗಿದ್ದರು ಆದರೆ ತದನಂತರ ಯಾವುದೇ ಬಿಕ್ಕಟ್ಟು ಸೃಷ್ಟಿಯಾಗದಂತೆ ತಡೆಹಿಡಿಯಲಾಗಿತ್ತು. ಒಪ್ಪಂದವೊಂದು ಇನ್ನೂ ಬಾಕಿಯಿದೆ. ಈ ಮಧ್ಯೆ ಭಾರತದ ವಿರುದ್ಧ ಶೇ.50 ರಷ್ಟು ಸುಂಕ ವಿಧಿಸಿದ್ದಾರೆ.

ಸುಂಕಗಳು ಯುಎಸ್‌ಗೆ "ಕೆಟ್ಟ ಫಲಿತಾಂಶ" ಕ್ಕೆ ಕಾರಣವಾಗಿವೆ. ಏಕೆಂದರೆ ಭಾರತವು ನಿರೀಕ್ಷಿಸಿದ್ದಕ್ಕಿಂತ ತುಂಬಾ ಋಣಾತ್ಮಕವಾಗಿ" ಪ್ರತಿಕ್ರಿಯಿಸಿದೆ. ಏಕೆಂದರೆ ಚೀನಾಕ್ಕೆ ಸುಂಕ ವಿಧಿಸಲಾಗುತ್ತಿಲ್ಲ ಎಂದು ಬೋಲ್ಟನ್ ಹೇಳಿದ್ದಾರೆ.

ಸಿಎನ್‌ಎನ್‌ನೊಂದಿಗೆ ಮಾತನಾಡಿದ ಅವರು, ರಷ್ಯಾವನ್ನು ನೋಯಿಸುವ ಉದ್ದೇಶದಿಂದ ಭಾರತದ ಮೇಲೆ ದುಪ್ಪಟ್ಟು ಶುಲ್ಕದಿಂದ ಭಾರತ ರಷ್ಯಾ ಮತ್ತು ಚೀನಾಕ್ಕೆ ಹತ್ತಿರವಾಗಬಹುದು. ಬಹುಶಃ ಅಮೆರಿಕ ವಿರುದ್ಧ ಒಟ್ಟಿಗೆ ಮಾತುಕತೆ ನಡೆಸುವಂತೆ ಮಾಡಬಹುದು."ಚೀನಿಯರ ಮೇಲಿನ ಟ್ರಂಪ್ ಅವರ ಮೃದುತ್ವ ಮತ್ತು ಭಾರತದ ಮೇಲಿನ ಭಾರೀ ಸುಂಕಗಳು ಭಾರತವನ್ನು ರಷ್ಯಾ ಮತ್ತು ಚೀನಾದಿಂದ ದೂರ ತರಲು ದಶಕಗಳ ಅಮೆರಿಕದ ಪ್ರಯತ್ನಗಳಿಗೆ ಅಪಾಯವನ್ನುಂಟುಮಾಡುತ್ತವೆ" ಎಂದು ಟ್ರಂಪ್ ಅವರ ಮಾಜಿ ಆಪ್ತರು ಪ್ರತಿಪಾದಿಸಿದ್ದಾರೆ.

ಅಮೆರಿಕದ ಮಾಜಿ ವಾಣಿಜ್ಯ ಅಧಿಕಾರಿ, ಅಮೆರಿಕದ ವಿದೇಶಾಂಗ ನೀತಿ ತಜ್ಞ ಕ್ರಿಸ್ಟೋಫರ್ ಪಡಿಲ್ಲಾ, ಸುಂಕಗಳು ಭಾರತ-ಅಮೆರಿಕ ಬಾಂಧವ್ಯಕ್ಕೆ ದೀರ್ಘಕಾಲೀನ ಹಾನಿಯ ಅಪಾಯವನ್ನುಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT