ವಿದೇಶ

ಮಾನವ ಕಳ್ಳಸಾಗಣೆ ವಿರುದ್ಧ ಹೋರಾಟ ಅಗತ್ಯ; ಭಾರತೀಯರನ್ನು ವಾಪಸ್ ಸ್ವೀಕರಿಸಲು ಸಿದ್ಧ: ಪ್ರಧಾನಿ ಮೋದಿ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಕ್ರಮ ವಲಸೆ ವಿಷಯದ ಕುರಿತು ಪಿಟಿಐ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಇದು ಕೇವಲ ಭಾರತದ ಪ್ರಶ್ನೆಯಲ್ಲ, ಜಾಗತಿಕ ಸಮಸ್ಯೆಯಾಗಿದೆ ಎಂದರು.

ವಾಷಿಂಗ್ಟನ್: ದೊಡ್ಡ ದೊಡ್ಡ ಕನಸುಗಳು ಮತ್ತು ಭರವಸೆಗಳೊಂದಿಗೆ ಸಾಮಾನ್ಯ ಕುಟುಂಬಗಳ ಜನರನ್ನು ಅಕ್ರಮವಾಗಿ ಇತರ ದೇಶಗಳಿಗೆ ಕರೆತರುವ "ಮಾನವ ಕಳ್ಳಸಾಗಣೆ ವ್ಯವಸ್ಥೆ"ಯ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಕ್ರಮ ವಲಸೆ ವಿಷಯದ ಕುರಿತು ಪಿಟಿಐ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಇದು ಕೇವಲ ಭಾರತದ ಪ್ರಶ್ನೆಯಲ್ಲ, ಜಾಗತಿಕ ಸಮಸ್ಯೆಯಾಗಿದೆ ಎಂದರು.

"ಯಾರಾದರೂ ಅಕ್ರಮವಾಗಿ ಬೇರೆ ದೇಶಕ್ಕೆ ಪ್ರವೇಶಿಸಿ ವಾಸಿಸುತ್ತಿದ್ದರೆ, ಅವರಿಗೆ ಆ ದೇಶದಲ್ಲಿ ವಾಸಿಸಲು ಯಾವುದೇ ಕಾನೂನುಬದ್ಧ ಹಕ್ಕು ಅಥವಾ ಅಧಿಕಾರವಿಲ್ಲ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ" ಎಂದರು.

ಭಾರತ ಮತ್ತು ಅಮೆರಿಕಕ್ಕೆ ಸಂಬಂಧಿಸಿದಂತೆ, "ಪರಿಶೀಲಿಸಲಾದ ಭಾರತೀಯ ನಾಗರಿಕರು ಮತ್ತು ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರನ್ನು ಭಾರತವು ಮರಳಿ ಸ್ವೀಕರಿಸಲು ಸಿದ್ಧವಾಗಿದೆ ಎಂದು ನಾವು ಯಾವಾಗಲೂ ಹೇಳಿದ್ದೇವೆ" ಎಂದು ಮೋದಿ ತಿಳಿಸಿದರು.

"ಆದಾಗ್ಯೂ, ನಮಗೆ, ಈ ವಿಷಯ ಅಲ್ಲಿಗೆ ನಿಲ್ಲುವುದಿಲ್ಲ. ಇವರು ತುಂಬಾ ಸಾಮಾನ್ಯ ಕುಟುಂಬಗಳ ಮಕ್ಕಳು, ಮತ್ತು ಅವರು ದೊಡ್ಡ ಕನಸುಗಳು ಮತ್ತು ಭರವಸೆಗಳಿಗೆ ಆಕರ್ಷಿತರಾಗುತ್ತಾರೆ". ಅವರಲ್ಲಿ ಅನೇಕರನ್ನು ಮಾನವ ಕಳ್ಳಸಾಗಣೆದಾರರು ದಾರಿ ತಪ್ಪಿಸುತ್ತಿದ್ದಾರೆ ಮತ್ತು ದಾರಿ ತಪ್ಪಿಸಿದ್ದಾರೆ ಎಂದು ಹೇಳಿದರು.

"ಅದಕ್ಕಾಗಿಯೇ ನಾವು ಇಡೀ ಮಾನವ ಕಳ್ಳಸಾಗಣೆ ವ್ಯವಸ್ಥೆಯ ವಿರುದ್ಧ ಹೋರಾಡಬೇಕು" ಎಂದು ಮೋದಿ ಕರೆ ನೀಡಿದರು.

ಮಾನವ ಕಳ್ಳಸಾಗಣೆ ಕೊನೆಗೊಳಿಸಲು ಮತ್ತು ತೆಗೆದುಹಾಕಲು ನಾವು ಒಟ್ಟಾಗಿ ಈ ಸಂಪೂರ್ಣ ವ್ಯವಸ್ಥೆಯನ್ನು ಬೇರುಸಹಿತ ಕಿತ್ತುಹಾಕಿ ನಾಶಪಡಿಸುವುದು ಅಮೆರಿಕ ಮತ್ತು ಭಾರತದ ಪ್ರಯತ್ನವಾಗಿದ್ದು, ಇದು ಹಾಗೆಯೇ ಇರಬೇಕು ಎಂದರು.

ಎಲ್ಲವನ್ನೂ ಮಾರಾಟ ಮಾಡಿ ಬರುವ ಬಡ ಜನರಿಗೆ ಅನ್ಯಾಯವಾಗಿದೆ. ಅವರನ್ನು ದೊಡ್ಡ ದೊಡ್ಡ ಕನಸುಗಳನ್ನು ತೋರಿಸಿ ಅಕ್ರಮ ವಲಸಿಗರನ್ನಾಗಿ ಬೇರೆ ದೇಶಕ್ಕೆ ಕರೆತರಲಾಗುತ್ತದೆ. "ನಮ್ಮ ದೊಡ್ಡ ಹೋರಾಟ ಈ ವ್ಯವಸ್ಥೆಯ ವಿರುದ್ಧವಾಗಿದೆ ಮತ್ತು ಅಧ್ಯಕ್ಷ ಟ್ರಂಪ್ ಕೂಡ ಈ ವ್ಯವಸ್ಥೆಯನ್ನು ಕೊನೆಗೊಳಿಸುವಲ್ಲಿ ಭಾರತಕ್ಕೆ ಸಂಪೂರ್ಣವಾಗಿ ಬೆಂಬಲಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ" ಎಂದರು.

ನಂತರ, ಅಮೆರಿಕದಿಂದ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ವೇಳೆ ಮಿಲಿಟರಿ ವಿಮಾನದಲ್ಲಿ, ಬೇಡಿ ಹಾಕಿ ಭಾರತಕ್ಕೆ ಕರೆತಂದ ಬಗ್ಗೆ ಟ್ರಂಪ್ ಭೇಟಿಯ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, "ಹೌದು, ಅದು (ಅಕ್ರಮ ವಲಸೆಯ ವಿಷಯ) ಇಂದಿನ ಚರ್ಚೆಯ ಸಮಯದಲ್ಲಿ ಪ್ರಸ್ತಾಪವಾಯಿತು" ಎಂದಷ್ಟೇ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT