ಬಾಂಗ್ಲಾದೇಶ ಹಿಂಸಾಚಾರ 
ವಿದೇಶ

ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರ: ಅವಾಮಿ ಲೀಗ್-ಪೊಲೀಸರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ನಾಲ್ವರು ಸಾವು!

ಬಾಂಗ್ಲಾದೇಶವು ಆಂತರಿಕ ಹಿಂಸಾಚಾರದ ಬೆಂಕಿಯಲ್ಲಿ ಉರಿಯುತ್ತಿದೆ. ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ನಗರದ ಗೋಪಾಲ್‌ಗಂಜ್‌ನಲ್ಲಿ ಅವಾಮಿ ಲೀಗ್ ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿವೆ.

ಢಾಕಾ: ಬಾಂಗ್ಲಾದೇಶವು ಆಂತರಿಕ ಹಿಂಸಾಚಾರದ ಬೆಂಕಿಯಲ್ಲಿ ಉರಿಯುತ್ತಿದೆ. ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ನಗರದ ಗೋಪಾಲ್‌ಗಂಜ್‌ನಲ್ಲಿ ಅವಾಮಿ ಲೀಗ್ ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿವೆ. ಈ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಗೋಪಾಲ್‌ಗಂಜ್‌ನಲ್ಲಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ವಿದ್ಯಾರ್ಥಿ ಪಕ್ಷವಾದ ಎನ್‌ಸಿಪಿಯ ಚಳುವಳಿಗೂ ಮೊದಲು ಈ ಹಿಂಸಾಚಾರ ಸಂಭವಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಗೋಪಾಲ್‌ಗಂಜ್ ರಣರಂಗವಾಗಿ ಮಾರ್ಪಟ್ಟಿದ್ದು ದಿನವಿಡೀ ಇಲ್ಲಿ ಬೆಂಕಿ ಹಚ್ಚುವಿಕೆ, ಹಿಂಸಾಚಾರ ಮತ್ತು ಗುಂಡಿನ ದಾಳಿ ಮುಂದುವರೆಯಿತು.

ಗುಂಡೇಟಿನಿಂದ ಮೃತಪಟ್ಟವರನ್ನು ಗೋಪಾಲ್‌ಗಂಜ್ ಜನರಲ್ ಆಸ್ಪತ್ರೆಗೆ ಕರೆತರಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಇನ್ನೂ ಒಂಬತ್ತು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗೋಪಾಲ್‌ಗಂಜ್‌ನಲ್ಲಿ ಬಾರ್ಡರ್‌ ಗಾರ್ಡ್ಸ್‌ ಬಾಂಗ್ಲಾದೇಶದ (ಬಿಜಿಬಿ) ನಾಲ್ಕು ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಲಾಗಿದೆ. ಟ್ಯಾಂಕರ್ಗಳು ಬೀದಿಗಳಲ್ಲಿ ಗಸ್ತು ತಿರುಗುತ್ತಿವೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಬುಧವಾರ ರಾತ್ರಿ 8 ಗಂಟೆಯಿಂದ ಗೋಪಾಲ್‌ಗಂಜ್‌ನಲ್ಲಿ 22 ಗಂಟೆಗಳ ಕರ್ಫ್ಯೂ ವಿಧಿಸಲಾಗಿದೆ ಎಂದು ಹೇಳಿದ್ದಾರೆ. ಎನ್‌ಸಿಪಿ ಮೇಲಿನ ದಾಳಿಯ ಅಪರಾಧಿಗಳನ್ನು ಬಿಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮ ವರದಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಿದಿರಿನ ಕೋಲುಗಳು ಮತ್ತು ಇಟ್ಟಿಗೆಗಳಿಂದ ಶಸ್ತ್ರಸಜ್ಜಿತವಾದ ಪ್ರತಿಭಟನಾಕಾರರು ಪೊಲೀಸ್ ಮತ್ತು ಸೇನೆ ಮತ್ತು ಅರೆಸೈನಿಕ ಪಡೆ ಬಿಜಿಬಿ ಸೇರಿದಂತೆ ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದರು.

ಗೋಪಾಲ್‌ಗಂಜ್‌ನ ಮುನ್ಸಿಪಲ್ ಪಾರ್ಕ್‌ನಲ್ಲಿ ಎನ್‌ಸಿಪಿ ಸಾರ್ವಜನಿಕ ಸಭೆ ನಡೆಸುತ್ತಿದ್ದಾಗ ಅವಾಮಿ ಲೀಗ್ ಮತ್ತು ಅದರ ನಿಷೇಧಿತ ವಿದ್ಯಾರ್ಥಿ ವಿಭಾಗದ ಕಾರ್ಯಕರ್ತರು ಜನಸಮೂಹದ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರಾಷ್ಟ್ರೀಯ ನಾಗರಿಕ ಪಕ್ಷ (ಎನ್‌ಸಿಪಿ) ಬಾಂಗ್ಲಾದೇಶದಲ್ಲಿ ಹೊಸ ರಾಜಕೀಯ ಪಕ್ಷವಾಗಿದ್ದು, ಇದನ್ನು 2025ರ ಫೆಬ್ರವರಿ 28ರಂದು ರಚಿಸಲಾಯಿತು. ಆಗಸ್ಟ್ 2024ರಲ್ಲಿ ಅವಾಮಿ ಲೀಗ್ ಸರ್ಕಾರದ ಪತನದ ನಂತರ ಪ್ರಾರಂಭವಾದ ವಿದ್ಯಾರ್ಥಿ ನೇತೃತ್ವದ "ಮಾನ್ಸೂನ್ ಕ್ರಾಂತಿ" ಮತ್ತು ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳುವಳಿ (ADSM) ನಿಂದ ಪಕ್ಷವು ಹುಟ್ಟಿಕೊಂಡಿದೆ. ಎನ್‌ಸಿಪಿಯನ್ನು ನಹಿದ್ ಇಸ್ಲಾಂ ಎಂಬ ವಿದ್ಯಾರ್ಥಿ ನಾಯಕ ಮುನ್ನಡೆಸುತ್ತಿದ್ದಾನೆ. ನಹೀದ್ ಇಸ್ಲಾಂ ಮತ್ತು ಅವರ ಪಕ್ಷವು ಬಾಂಗ್ಲಾದೇಶವನ್ನು ಮುಜೀಬಿಸಂನಿಂದ ಮುಕ್ತಗೊಳಿಸುವ ಘೋಷಣೆಯನ್ನು ನೀಡುತ್ತದೆ.

ಮಧ್ಯಾಹ್ನ 1:45ರ ಸುಮಾರಿಗೆ, ಸುಮಾರು 200-300 ಸ್ಥಳೀಯ ಅವಾಮಿ ಲೀಗ್ ಬೆಂಬಲಿಗರು ಸಿಎನ್‌ಪಿ ರ್ಯಾಲಿ ಸ್ಥಳಕ್ಕೆ ಕೋಲುಗಳು ಮತ್ತು ಲಾಠಿಗಳೊಂದಿಗೆ ತಲುಪಿದರು. ದಾಳಿ ಪ್ರಾರಂಭವಾದಾಗ, ಕರ್ತವ್ಯದಲ್ಲಿದ್ದ ಪೊಲೀಸರು ಹತ್ತಿರದ ನ್ಯಾಯಾಲಯದ ಆವರಣದಲ್ಲಿ ಆಶ್ರಯ ಪಡೆದಿರುವುದು ಕಂಡುಬಂದಿತು. ಸ್ಥಳದಲ್ಲಿದ್ದ ಎನ್‌ಸಿಪಿ ನಾಯಕರು ಮತ್ತು ಕಾರ್ಯಕರ್ತರು ಕೂಡ ತಕ್ಷಣವೇ ಹೊರಟುಹೋದರು. ದಾಳಿಕೋರರು ಅವಾಮಿ ಲೀಗ್‌ನ ಬೆಂಬಲಿಗರು ಎಂದು ಎನ್‌ಸಿಪಿ ನಾಯಕರು ಮತ್ತು ಕಾರ್ಯಕರ್ತರು ಆರೋಪಿಸಿದ್ದಾರೆ.

ಅದೇ ಸಮಯದಲ್ಲಿ, ಈ ಹಿಂಸಾಚಾರವನ್ನು ಬಾಂಗ್ಲಾದೇಶ ಸೇನೆ ಮತ್ತು ಎನ್‌ಸಿಪಿ ಕಾರ್ಯಕರ್ತರು ನಡೆಸಿದ್ದಾರೆ ಎಂದು ಅವಾಮಿ ಲೀಗ್ ಆರೋಪಿಸಿದೆ. ಯಾವುದೇ ಭಯವಿಲ್ಲದೆ, ಬಾಂಗ್ಲಾದೇಶ ಸೇನೆಯು ಗೋಪಾಲ್‌ಗಂಜ್‌ನಲ್ಲಿ ನಾಗರಿಕನೊಬ್ಬನನ್ನು ಹಿಂಸಿಸಿದೆ. ದೇಶಾದ್ಯಂತ ಭಯದ ವಾತಾವರಣವನ್ನು ಸೃಷ್ಟಿಸಲು ಅವನನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅಪಾರ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ': ಸುಂಕ ಕಡಿತದ ನಂತರ ಡೊನಾಲ್ಡ್ ಟ್ರಂಪ್‌ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ

ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ತಗ್ಗಿದ ಅಪರಾಧ ಪ್ರಮಾಣ: ಗಡಿಗಳ ಮೂಲಕ ಅಕ್ರಮ ಬಾಂಗ್ಲಾದೇಶಿಗಳ ಪ್ರವೇಶ; ಗಡಿ ಕಾಪಾಡುವ ಜವಾಬ್ದಾರಿ ಯಾರದ್ದು?

'Mogambo Khush Hai': ಭಾರತ-ಯುಎಸ್ ವ್ಯಾಪಾರ ಒಪ್ಪಂದ ಕುರಿತು ಕಾಂಗ್ರೆಸ್ ವಾಗ್ದಾಳಿ!

ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ- ಪ್ರಿಯಾಂಕ್ ಖರ್ಗೆ

ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಂದ ಅಪ್ಪ!

SCROLL FOR NEXT