ಪತ್ರಕರ್ತ ನಜಂಸೇಥಿ 
ವಿದೇಶ

Operation Sindoor: "ತುಂಬಾ ಅಂಜುಬುರುಕರು.. ಪಬ್‌ಗಳಲ್ಲಿ ಕುಳಿತುಕೊಳ್ಳಿ"; ಭಾರತಕ್ಕೆ ಪಾಠ ಕಲಿಸಲು ಪಾಕ್ ಸರ್ಕಾರಕ್ಕೆ journalist ಸಲಹೆ!

ಭಾರತದಂತೆಯೇ ಪಾಕಿಸ್ತಾನ ಕೂಡ ಅಮೆರಿಕದೊಂದಿಗಿನ ಬಾಂಧವ್ಯವನ್ನು ನಿಕಟವಾಗಿಸಿಕೊಳ್ಳಲು ಅವರು ಹಲವು ಸಲಹೆಗಳನ್ನು ನೀಡಿದ್ದಾರೆ.

ಇಸ್ಲಾಮಾಬಾದ್: ಭಾರತೀಯ ಸೇನೆ ಪಾಕಿಸ್ತಾನದಲ್ಲಿ ನಡೆಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರದ ವಿರುದ್ಧ ಪಾಕ್ ಪತ್ರಕರ್ತ ತೀವ್ರ ಕಿಡಿಕಾರಿದ್ದು, ರಾಜತಾಂತ್ರಿಕವಾಗಿ ಅಮೆರಿಕದೊಂದಿಗೆ ಭಾರತಕ್ಕಿಂತ ಹೆಚ್ಚು ಆಪ್ತತೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಪಾಕಿಸ್ತಾನದ SAMMA TVಯ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಪಾಕಿಸ್ತಾನದ ಹಿರಿಯ ಪತ್ರಕರ್ತ Najam Sethi ಪತ್ರಕರ್ತೆ ಕೇಳಿದ ಪ್ರಶ್ನೆಗೆ ವಿಲಕ್ಷಣ ಉತ್ತರ ನೀಡಿದ್ದಾರೆ.

ಭಾರತದಂತೆಯೇ ಪಾಕಿಸ್ತಾನ ಕೂಡ ಅಮೆರಿಕದೊಂದಿಗಿನ ಬಾಂಧವ್ಯವನ್ನು ನಿಕಟವಾಗಿಸಿಕೊಳ್ಳಲು ಅವರು ಹಲವು ಸಲಹೆಗಳನ್ನು ನೀಡಿದ್ದಾರೆ. ಈ ಸಲಹೆಗಳೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಈ ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದೆ.

Najam Sethi ಹೇಳಿದ್ದೇನು?

ಭಾರತದ ರಾಜತಾಂತ್ರಿಕತೆಯನ್ನು ಎದುರಿಸಲು ಇಸ್ಲಾಮಾಬಾದ್ ಅಮೆರಿಕಕ್ಕೆ ಹೆಚ್ಚಿನ ಜನರನ್ನು ಕಳುಹಿಸಬೇಕು. ಭಾರತ ಅಮೆರಿಕದಲ್ಲಿ ಪ್ರಭಾವ ಹೊಂದಿದೆ, ಆದರೆ ಪಾಕಿಸ್ತಾನ ಹಿಂದುಳಿದಿದೆ. ರಾಜತಾಂತ್ರಿಕ ವಿಚಾರದಲ್ಲಿ ಪಾಕಿಸ್ತಾನದ ಅಧಿಕಾರಿಗಳು ತುಂಬಾ ಅಜುಬುರುಕರು. ಪಾಕಿಸ್ತಾನ ಸ್ವಲ್ಪ ಹೆಚ್ಚು "ಆಕ್ರಮಣಕಾರಿ ಮತ್ತು ಆಕರ್ಷಕ" ಮತ್ತು ಭಾಷೆ ಮತ್ತು ಸಂಸ್ಕೃತಿಯನ್ನು ತಿಳಿದಿರುವ ಜನರನ್ನು ಅಮೆರಿಕಕ್ಕೆ ಕಳುಹಿಸಬೇಕು ಎಂದು ಸೂಚಿಸಿದರು.

"ಅಲ್ಲಿ ದೊಡ್ಡ ಭಾರತೀಯ ಲಾಬಿ ಇದೆ. ಬಹಳಷ್ಟು ಭಾರತೀಯ ಅಮೆರಿಕನ್ನರು ಬಹುರಾಷ್ಟ್ರೀಯ ಕಂಪನಿಗಳು ಮತ್ತು ನಿಗಮಗಳು ಮತ್ತು ಸೆನೆಟ್ ಎರಡರಲ್ಲೂ ನಿರ್ಣಾಯಕ ಸ್ಥಾನಗಳಲ್ಲಿದ್ದಾರೆ. ಅವರಿಗೆ ಅಲ್ಲಿ ದೊಡ್ಡ ಪ್ರಭಾವವಿದೆ. ಈ ವಿಚಾರದಲ್ಲಿ ಪಾಕಿಸ್ತಾನ ಕೂಡ ಸಕ್ರಿಯವಾಗಬೇಕು ಎಂದರು.

ಇದೇ ವೇಳೆ ಭಾರತದ ಕುರಿತು ಮಾತನಾಡಿದ ಅವರು, 'ನಿಜ ಹೇಳಬೇಕೆಂದರೆ, ನೀವು ನನ್ನನ್ನು ಕೇಳಿದರೆ ನಾವು ಅಂತಹ ರಾಜತಾಂತ್ರಿಕ ದಾಳಿಗೆ ಸಿದ್ಧರಿಲ್ಲ. ನಮ್ಮ ರಾಜತಾಂತ್ರಿಕರು ಈ ದಾಳಿಯನ್ನು ಎದುರಿಸಲು ಸಾಕಷ್ಟು ಬಲಶಾಲಿಗಳು ಮತ್ತು ಸ್ಪಷ್ಟ ನಿಪುಣರು ಎಂದು ನಾನು ಭಾವಿಸುವುದಿಲ್ಲ. ಇದಕ್ಕಾಗಿ ನೀವು ಶಿಕ್ಷಣ ತಜ್ಞರು ಮತ್ತು ಚಿಂತಕರ ಗುಂಪನ್ನು ಹುರಿದುಂಬಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ ಎಂದರು.

ಪಾಕಿಸ್ತಾನದ ಅಧಿಕಾರಶಾಹಿಗಳು ತುಂಬಾ ಅಂಜುಬುರುಕವಾಗಿರುವ ಜನರು, ಅವರು ಕೆಂಪು ಗೆರೆಗಳನ್ನು ದಾಟುವುದಿಲ್ಲ. ನೀವು ಸ್ವಲ್ಪ ಹೆಚ್ಚು ಆಕ್ರಮಣಕಾರಿ ಮತ್ತು ಆಕರ್ಷಕವಾಗಿರಬೇಕು. ನೀವು ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕು, ಕೆಲವೊಮ್ಮೆ ನೀವು ಪಬ್‌ಗಳಲ್ಲಿ ಕುಳಿತುಕೊಳ್ಳಬೇಕು, ಕೆಲವೊಮ್ಮೆ ನೀವು ಉದ್ಯಾನವನದಲ್ಲಿ ನಡೆಯಬೇಕು. ಕೆಲವೊಮ್ಮೆ ನೀವು ಸ್ವಲ್ಪ ಹಾಸ್ಯ ಮತ್ತು ವ್ಯಂಗ್ಯವನ್ನು ಬೆರೆಸಬೇಕಾಗುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ರಾಜತಾಂತ್ರಿಕತೆ. ಮೋಡಿ ಬಹಳ ಮುಖ್ಯ" ಎಂದು ಅವರು ಹೇಳಿದರು.

ಪತ್ರಕರ್ತ ನಜಂಸೇಥಿ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ನಜಂಸೇಥಿ ಹೇಳಿಕೆಗೆ ಪಾಕಿಸ್ತಾನ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

SCROLL FOR NEXT