ಬಿಎಲ್ಎ ಕಮಾಂಡರ್ ಅಲ್ಲಾ ನಜರ್ ಬಲೂಚ್ 
ವಿದೇಶ

1971ರಲ್ಲಿ ಶರಣಾದ ಪಾಕ್ ಸೈನಿಕರ 93 ಸಾವಿರ ಗನ್ ಕೊಡಿ.. ಅದರಿಂದಲೇ 'ಪಾಕಿಸ್ತಾನ ಫಿನಿಶ್' ಮಾಡ್ತೇವೆ: ಭಾರತಕ್ಕೆ BLF commander ಮನವಿ! Video

"ಫ್ಯಾಸಿಸ್ಟ್" ಪಾಕಿಸ್ತಾನವನ್ನು ನಾವು ಬಗ್ಗು ಬಡಿಯುತ್ತೇವೆ. ನಮಗೆ ನೀವು ಸಹಾಯ ಮಾಡಿ ಎಂದು ಭಾರತಕ್ಕೆ ಮನವಿ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಇಸ್ಲಾಮಾಬಾದ್: ಪಾಕಿಸ್ತಾನ ಸೇನೆ ವಿರುದ್ಧ ಇನ್ನಿಲ್ಲದಂತೆ ದಾಳಿ ಮಾಡುತ್ತಿರುವ ಬಲೂಚಿಸ್ತಾನ ಬಂಡುಕೋರರು ಇದೀಗ 1971ರಲ್ಲಿ ಶರಣಾದ ಪಾಕಿಸ್ತಾನ ಸೈನಿಕರ 93 ಸಾವಿರ ಗನ್ ಗಳನ್ನಾದರೂ ಕೊಡಿ.. ಅವುಗಳಿಂದಲೇ ಪಾಕಿಸ್ತಾನದ ಅಂತ್ಯಕಾಣಿಸುತ್ತೇವೆ ಎಂದು ಭಾರತಕ್ಕೆ ಮನವಿ ಮಾಡಿದ್ದಾರೆ.

ಬಲೂಚಿಸ್ತಾನ ಲಿಬರೇಷನ್ ಆರ್ಮಿಯ ಕಮಾಂಡರ್ ಇನ್ ಚೀಫ್ ಅಲ್ಲಾ ನಜರ್ ಬಲೂಚ್ ಈ ಬಗ್ಗೆ ಮಾತನಾಡಿದ್ದು, "ಫ್ಯಾಸಿಸ್ಟ್" ಪಾಕಿಸ್ತಾನವನ್ನು ನಾವು ಬಗ್ಗು ಬಡಿಯುತ್ತೇವೆ. ನಮಗೆ ನೀವು ಸಹಾಯ ಮಾಡಿ ಎಂದು ಭಾರತಕ್ಕೆ ಮನವಿ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಸುಮಾರು 30 ನಿಮಿಷಗಳ ವಿಡಿಯೋ ಕ್ಲಿಪ್ ಇದೀಗ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಬಿಎಲ್‌ಎಫ್ ಕಮಾಂಡರ್-ಇನ್-ಚೀಫ್ ಅಲ್ಲಾ ನಜರ್ ಬಲೂಚ್ ಜಾಗತಿಕ ಸಮುದಾಯ ಮತ್ತು ಭಾರತವನ್ನು ಉದ್ದೇಶಿಸಿ ಮಾತನಾಡಿರುವುದನ್ನು ಕಾಣಬಹುದು. ಆತ "ಫ್ಯಾಸಿಸ್ಟ್" ಪಾಕಿಸ್ತಾನಿ ರಾಷ್ಟ್ರ ಎಂದು ಪದೇ ಪದೇ ಕರೆಯುವುದರ ವಿರುದ್ಧ ಬಲೂಚಿಸ್ತಾನದ ಹೋರಾಟಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸಿದ್ದಾನೆ.

ಇತ್ತೀಚೆಗೆ ಅಂದರೆ ಮೇ 11 ರಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (ಬಿಎಲ್‌ಎಫ್) ಕಮಾಂಡರ್-ಇನ್-ಚೀಫ್ ಅಲ್ಲಾ ನಜರ್ ಬಲೂಚ್ ಅವರ ವೀಡಿಯೊ ಪ್ರಸ್ತುತ ಇಂಟರ್ನೆಟ್‌ನಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ವಿಡಿಯೋದಲ್ಲೇನಿದೆ?

ಈ ಹಿಂದೆ 1971ರಲ್ಲಿ ಭಾರತವು ಬಾಂಗ್ಲಾದೇಶದಲ್ಲಿ ಪಾಕಿಸ್ತಾನಿ ಸೈನ್ಯದಿಂದ ಶರಣಾದ 93,000 ಸೈನಿಕರ ಬಂದೂಕುಗಳನ್ನು ವಶಪಡಿಸಿಕೊಂಡಿತ್ತು. ಆ ಬಂದೂಕುಗಳನ್ನು ಮಾತ್ರ ನಮಗೆ ನೀಡಿದರೂ ಸಾಕು.. ನಂತರ ಬಲೂಚಿಸ್ತಾನದಲ್ಲಿ ಫ್ಯಾಸಿಸ್ಟ್ ರಾಜ್ಯವಾದ ಪಾಕಿಸ್ತಾನಕ್ಕೆ ನಾವು ಏನು ಗತಿ ಮಾಡುತ್ತೇವೆ ಎಂಬುದನ್ನು ನೋಡಿ ಎಂದು ಹೇಳಿದ್ದಾರೆ. ಅಲ್ಲದೆ ನಮಗೆ ಗನ್ ಗಳನ್ನು ನೀಡಿ ಎಂದು ನೇರವಾಗಿ ಭಾರತಕ್ಕೆ ಮನವಿ ಮಾಡಿದ್ದಾರೆ.

ದರೋಡೆ ಕೋರ ರಾಷ್ಟ್ರ ಪಾಕಿಸ್ತಾನ

ಇದೇ ವೇಳೆ ನಜರ್ ಪಾಕಿಸ್ತಾನ ವಿರುದ್ದ ತೀವ್ರ ವಾಕ್ಸಮರವನ್ನೇ ನಡೆಸಿದ್ದು, ಪಾಕಿಸ್ತಾನವನ್ನು "ದರೋಡೆಕೋರ" ಮತ್ತು "ಫ್ಯಾಸಿಸ್ಟ್" ದೇಶವೆಂದು ಬಣ್ಣಿಸಿದ್ದಾರೆ. ಪಂಜಾಬ್ ಅದರ ಕೇಂದ್ರಬಿಂದುವಾಗಿದೆ, ಹಿಂಸಾಚಾರ, ಬಲವಂತದ ಕಣ್ಮರೆಗಳು ಮತ್ತು ಕಾನೂನುಬಾಹಿರ ಹತ್ಯೆಗಳ ಮೂಲಕ ಜನಾಂಗೀಯ ಬಲೂಚ್‌ಗಳನ್ನು ನಿಗ್ರಹಿಸುತ್ತಿದೆ ಎಂದು ಆರೋಪಿಸಿದ್ದಾರೆ.

"ಬಲೂಚ್ ಸಮುದಾಯವು ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದೆ.. ಪಾಕಿಸ್ತಾನಿ ಮಿಲಿಟರಿ ಮತ್ತು ಪ್ರಸ್ತುತ ಮತ್ತು ಮಾಜಿ ರಾಜಕಾರಣಿಗಳು ಸೇರಿದಂತೆ ಅದರ "ಕೈಗೊಂಬೆಗಳು" ವಸಾಹತುಶಾಹಿ ಶೈಲಿಯ ದಬ್ಬಾಳಿಕೆಯನ್ನು ಮುಂದುವರಿಸುತ್ತಿವೆ. ಲಿಯಾಕತ್ ಅಲಿ ಖಾನ್‌ನಿಂದ ಬೆನಜೀರ್ ಭುಟ್ಟೋವರೆಗಿನ ತಮ್ಮದೇ ಆದ ನಾಯಕರನ್ನು ಕೊಂದಿದ್ದಕ್ಕಾಗಿ ಮತ್ತು ಬಲೂಚ್ ಧ್ವನಿಗಳನ್ನು ಮೌನಗೊಳಿಸಲು ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ.

ನೂರಾರು ಬಲೂಚ್ ಜನರನ್ನು ಕಣ್ಮರೆ ಮಾಡಲಾಗಿದೆ ಮತ್ತು ಕೊಲ್ಲಲಾಗಿದೆ. ಸಾಮೂಹಿಕ ಸಮಾಧಿಗಳಲ್ಲಿ ಹೂಳಲಾಗಿದೆ. ಮುಲ್ತಾನ್‌ನಲ್ಲಿನ ಆಸ್ಪತ್ರೆಗಳಿಗೆ ಶವಗಳನ್ನು ತರಲಾದ ಇತ್ತೀಚಿನ ಉದಾಹರಣೆಗಳನ್ನು ನಜರ್ ಉಲ್ಲೇಖಿಸಿದ್ದಾರೆ.

ಅಂತೆಯೇ ಬಲೂಚ್ ಹೋರಾಟವನ್ನು "ಪಂಜಾಬಿ ವಿರೋಧಿ" ಎಂದು ಬಿಂಬಿಸುವ ಪಾಕಿಸ್ತಾನಿ ಮಾಧ್ಯಮ ಮತ್ತು ಸ್ಥಾಪನಾ ನಿರೂಪಣೆಗಳನ್ನು ಅವರು ಟೀಕಿಸಿದರು, ಅವರ ಪ್ರತಿರೋಧವು ಪಾಕಿಸ್ತಾನದ ವಿರುದ್ಧವಾಗಿದೆ, ಜನರ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.

ನಾವು ಮಾನವೀಯತೆಯ ಸ್ನೇಹಿತರು

ಇದೇ ವೇಳೆ ತಮ್ಮನ್ನು ತಾವು ಮಾನವೀಯತೆಯ ಸ್ನೇಹಿತರು ಕರೆದುಕೊಂಡಿರುವ ನಜರ್, ಬಿಎಲ್‌ಎಫ್ ಮುಗ್ಧ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ ಎಂಬ ಪಾಕಿಸ್ತಾನ ಸೇನೆಯ ಹೇಳಿಕೆಗಳನ್ನು ನಿರಾಕರಿಸಿದರು. ಬದಲಾಗಿ, ಪಾಕಿಸ್ತಾನಿ ಸೈನ್ಯವು ತನ್ನ ಶಕ್ತಿ ಮತ್ತು ಕ್ರೂರ ದಮನಗಳನ್ನು ಸಮರ್ಥಿಸಿಕೊಳ್ಳಲು 'ಶತ್ರು'ವಿನ ಅಗತ್ಯವಿದೆ ಎಂದು ಅವರು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT